ಸೋಮವಾರ, ಡಿಸೆಂಬರ್ 31, 2007

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೨


ಟೀಮ್ ಮಂಗಳೂರಿನ ರೂವಾರಿಗಳೆಂದರೆ ಕೇವಲ ನಾಲ್ಕು ಮಂದಿ. ಸರ್ವೇಶ್ ರಾವ್, ಪ್ರಶಾಂತ್, ದಿನೇಶ್ ಹೊಳ್ಳ ಮತ್ತು ಗಿರಿಧರ್ ಕಾಮತ್. ಕಷ್ಟದ ದಿನಗಳಿಂದ, ಯಾರೂ ಕೇಳುವವರಿಲ್ಲದ ಸಮಯದಿಂದ ಏಳು ಬೀಳುಗಳನ್ನು ಅನುಭವಿಸುತ್ತ ತಂಡ ತನ್ನ ದೂರದೃಷ್ಟಿಯನ್ನು ಕಳಕೊಳ್ಳದಂತೆ ಪ್ರವಾಹದ ವಿರುದ್ಧ ಸಾಗಿ ಬಂದವರೆಂದರೆ ಈ ನಾಲ್ಕು ಮಂದಿ ಮಾತ್ರ. ಈ ನಾಲ್ವರ ಪ್ರಯತ್ನದಿಂದಲೇ ಟೀಮ್ ಮಂಗಳೂರು ತನ್ನ ಈಗಿನ ಯಶಸ್ಸಿನ ಹೊಸ್ತಿಲನ್ನು ತಲುಪಿದೆಯಲ್ಲದೇ ಬೇರೆ ಯಾರದೇ ಯಾವುದೇ ರೀತಿಯ ಕೊಡುಗೆ ಇಲ್ಲ.

ಗಾಳಿಪಟ ತಯಾರಿಸಲು ಬೇಕಾದ ವಸ್ತುಗಳನ್ನು ತರಿಸುವ ಸಂಪೂರ್ಣ ಜವಾಬ್ದಾರಿ ಮತ್ತು ಹಣಕಾಸಿನ ಜವಾಬ್ದಾರಿಯನ್ನು ಸರ್ವೇಶ್ ವಹಿಸಿಕೊಂಡರೆ, ಯಾವ ಕಡೆ, ಹೇಗೆ ಮತ್ತು ಎಲ್ಲೆಲ್ಲಿ ಕಡ್ಡಿಗಳನ್ನು ಯಾವ್ಯಾವ ಕೋನ ಮತ್ತು ಆಕಾರಗಳಲ್ಲಿ ಜೋಡಿಸಬೇಕು ಮತ್ತು ಗಾಳಿಯ ರಭಸವನ್ನು ತಡೆದುಕೊಳ್ಳಲು ಎಲ್ಲೆಲ್ಲಿ ತೂತುಗಳನ್ನು ಮಾಡಬೇಕು ಎಂಬಿತ್ಯಾದಿ 'ಟೆಕ್ನಿಕಲ್' ವಿಷಯಗಳ ಜವಾಬ್ದಾರಿ ಪ್ರಶಾಂತ್ ರದ್ದು. ದಿನೇಶ್ ಹೊಳ್ಳ ಒಬ್ಬ ಚಿತ್ರ ಕಲಾವಿದರಾಗಿದ್ದು, ತಾನೇ ಕೈಯಾರೆ ಬಿಡಿಸಿ ಗಾಳಿಪಟದ ವಿನ್ಯಾಸವನ್ನು ಸಿದ್ಧಪಡಿಸುವುದರಿಂದ ಶುರುಮಾಡಿ, ಅದಕ್ಕೆ ಖುದ್ದಾಗಿ ತಕ್ಕ ಬಣ್ಣ ನೀಡಿ ಅಂತಿಮ ರೂಪ ಕೊಟ್ಟ ಮೇಲೆ ನಂತರ ಬಟ್ಟೆಯನ್ನು ತಕ್ಕ ಆಕಾರಗಳಲ್ಲಿ ತುಂಡು ಮಾಡಿ ಬಣ್ಣ ಬಳಿದು, ಹೊಲಿಸಿ ಜೋಡಿಸುವವರೆಗೆ ಜವಾಬ್ದಾರಿಯನ್ನು ವಹಿಸಿಕೊಳ್ಳುತ್ತಾರೆ. ನಂತರ ಗಿರಿಧರ್ ಕಾಮತ್ರದ್ದು 'ಸಾರ್ವಜನಿಕ ಸಂಪರ್ಕಾಧಿಕಾರಿ'ಯ ಕೆಲಸ. ಪತ್ರಿಕಾ ಪ್ರಕಟಣೆಗಳನ್ನು ಸಿದ್ಧಪಡಿಸುವುದು, ಟೀಮ್ ಮಂಗಳೂರಿನ ಪರವಾಗಿ ಅವಕಾಶ ಸಿಕ್ಕಲ್ಲಿ ಒಂದೆರಡು ಮಾತನಾಡಿ ಉತ್ತಮ ಅಭಿಪ್ರಾಯ ಮೂಡಿಸುವುದು, ಗಾಳಿಪಟ ಉತ್ಸವದ ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆಗಳನ್ನು ಆಯೋಜಿಸುವುದು ಇವರ ಜವಾಬ್ದಾರಿ.


ಒಂದು ಗಾಳಿಪಟ ತಯಾರಿಸಲು ಕನಿಷ್ಟ ೫೦೦ ಗಂಟೆಗಳಷ್ಟು ಸಮಯ ಬೇಕು. ರಾತ್ರಿ ೧೧ ರಿಂದ ಬೆಳಗ್ಗಿನ ಜಾವ ೩.೦೦ ಗಂಟೆಯವರೆಗೆ ಸರ್ವೇಶ್ ಮನೆಯಲ್ಲಿ ಗಾಳಿಪಟಕ್ಕೆ ನಿಧಾನವಾಗಿ ಆಕಾರ ಮತ್ತು ಬಣ್ಣ ನೀಡುವ ಕಾರ್ಯ ನಡೆಯುತ್ತದೆ. ಸುಮಾರು ೫ ತಿಂಗಳ ಬಳಿಕ ಒಂದು ದೈತ್ಯ ಯಕ್ಷಗಾನ ಪಾತ್ರಧಾರಿಯೋ, ಕಥಕ್ಕಳಿ ನೃತ್ಯಗಾರನೋ, ಭೂತ ಪಾತ್ರಧಾರಿಯೋ, ಡ್ರಾಗನ್ ಗಾಳಿಪಟವೋ ಅಥವಾ ಇನ್ಯಾವುದೋ ದೈತ್ಯ ಗಾಳಿಪಟ ತಯಾರಾಗುತ್ತದೆ.

ನಂತರ ಪಣಂಬೂರು ಕಡಲ ತೀರಕ್ಕೆ ತೆರಳಿ ಕೆಳೆದೈದು ತಿಂಗಳಿಂದ ರಾತ್ರಿಯೆಲ್ಲ ನಿದ್ದೆಬಿಟ್ಟು ತಯಾರಿಸಿದ ಗಾಳಿಪಟ ಸರಿಯಾಗಿ ಹಾರುತ್ತೋ ಇಲ್ವೋ ಎಂದು ಪರೀಕ್ಷೆ ಮಾಡುವ ಕಾಯಕ - ಟೆಸ್ಟ್ ಫ್ಲೈಯಿಂಗ್. ಆಗ ಇವರನ್ನು ನೋಡಿ 'ಗಾಳಿಪಟ ಮರ್ಲೆರ್ಗ್ ಬೇತೆ ಬೇಲೆ ಇಜ್ಜಾ ಪಣ್ದ್' (ಗಾಳಿಪಟ ಹುಚ್ಚರಿಗೆ ಬೇರೆ ಕೆಲಸ ಇಲ್ವಾ ಅಂತ) ಎಂದು ಕೊಂಕು ಮಾತನಾಡುವವರೇ ಹೆಚ್ಚಾಗಿದ್ದರು. ಹಾಗೆ ಮಾತನಾಡಿದವರೇ ಇಂದು 'ಯಾನ್ ಲಾ ಉಲ್ಲೆ ಟೀಮ್ ಮಂಗಳೂರುಡ್' (ನಾನೂ ಇದ್ದೇನೆ ಟೀಮ್ ಮಂಗಳೂರಿನಲ್ಲಿ) ಎಂದುಕೊಂಡು ಓಡಾಡುವುದು, ಮಾಧ್ಯಮದವರ ಮುಂದೆ ಹೇಳಿಕೆ ಕೊಡುವುದು, ಫೋಟೊಗಳಿಗೆ ಪೋಸು ಕೊಡುವುದು, ಇತ್ಯಾದಿಗಳನ್ನು ಮಾಡುವುದನ್ನು ನೋಡಿದರೆ.....

ಮೊದಲೆಲ್ಲ ಸಣ್ಣ ಮಟ್ಟದ ಗಾಳಿಪಟ ಉತ್ಸವವನ್ನು ಆಯೋಜಿಸಲು ಈ ನಾಲ್ವರು ಪಟ್ಟ ಪಾಡು ಅಷ್ಟಿಷ್ಟಲ್ಲ. ಮಂಗಳೂರಿನಲ್ಲಿ ದೊಡ್ಡ ಮಟ್ಟದ ವ್ಯವಹಾರ ಮಾಡಿಕೊಂಡಿರುವವರಲ್ಲಿ ಗಾಳಿಪಟ ಉತ್ಸವವನ್ನು ಪ್ರಾಯೋಜಿಸುವಂತೆ ವಿನಂತಿಸಿದರೆ, ಅವರು ಇವರನ್ನು ಗಂಟೆಗಟ್ಟಲೆ ಕಾಯಿಸುವುದು, ಭಿಕ್ಷೆ ಬೇಡಲು ಬಂದವರಂತೆ ಮಾತನಾಡುವುದು, ತೀರ ನಿರ್ಲಕ್ಷ್ಯದಿಂದ ನಾಳೆ ಬಾ/ ಮುಂದಿನ ವಾರ ಬಾ ಎಂದು ಹೊರಗಟ್ಟುವುದು, ಕೊನೆಗೆ ಅಪಹಾಸ್ಯ ಮಾಡಿ ಜುಜುಬಿ ಎನಿಸಿಕೊಳ್ಳುವ ಮೊತ್ತಕ್ಕಿಂತ ಸ್ವಲ್ಪ ಹೆಚ್ಚು ನೀಡುವುದು - ಇವೆಲ್ಲವನ್ನು ಸಹಿಸಿಕೊಂಡು ಕೊಟ್ಟಷ್ಟನ್ನು ಒಟ್ಟು ಮಾಡಿ ಕಡೆಗೆ ತಮ್ಮ ಕೈಯಿಂದಲೇ ಹಣ ಹಾಕಿ ವರ್ಷಕ್ಕೊಮ್ಮೆ ಗಾಳಿಪಟ ಉತ್ಸವವನ್ನು ಮತ್ತು ಗಾಳಿಪಟ ಹಾರಿಸುವ ಸ್ಪರ್ಧೆಯನ್ನು ಪಣಂಬೂರಿನ ಕಡಲ ತೀರದಲ್ಲಿ ಆಯೋಜಿಸುತ್ತಿದ್ದರು. ಆಗೆಲ್ಲ ಈ ನಾಲ್ವರೊಡನೆ ಕೈ ಜೋಡಿಸಿ ಸಹಾಯ ಮಾಡಲು ಮತ್ತೊಬ್ಬನಿರಲಿಲ್ಲ. ಈ ಎಲ್ಲಾ ಪ್ರಯತ್ನಗಳು ವ್ಯರ್ಥವೆನಿಸಲಿಲ್ಲ. ಪ್ರತೀ ವರ್ಷ ಗಾಳಿಪಟ ಹಾರಿಸುವ ಸ್ಪರ್ಧೆಯಲ್ಲಿ ಭಾಗವಹಿಸುವವರ ಮಕ್ಕಳ/ ಯುವಕರ ಸಂಖ್ಯೆ ಹೆಚ್ಚಾಗುತ್ತಿತ್ತು. ನಿಧಾನವಾಗಿಯಾದರೂ ಸರಿ ಆದರೆ ಸರಿಯಾದ ದಿಕ್ಕಿನಲ್ಲಿ ಟೀಮ್ ಮಂಗಳೂರು ಸಾಗತೊಡಗಿತ್ತು.


ದೊರಕಿರುವ ಯಶಸ್ಸಿನೊಂದಿಗೆ ಈಗ ಟೀಮ್ ಮಂಗಳೂರಿನ ಅನಧಿಕೃತ ಸದಸ್ಯರ ಸಂಖ್ಯೆ ಹೆಚ್ಚಾಗತೊಡಗಿದೆ. ಈ ನಾಲ್ವರ ಸ್ವಲ್ಪ ಪರಿಚಯವಿದ್ದವನೂ ಈಗ ಟೀಮ್ ಮಂಗಳೂರಿನ ಸದಸ್ಯನೇ! ಮಂಗಳೂರಿನಲ್ಲೊಬ್ಬ ಹೆಸರುವಾಸಿ ಚಿತ್ರಕಾರರಿದ್ದಾರೆ. ಮೊದಲು ಗಾಳಿಪಟಗಳ ವಿನ್ಯಾಸ ಮತ್ತು ಬಣ್ಣಗಳನ್ನು ನೋಡಿ 'ಇವೆಲ್ಲ ಸರಿಯಿಲ್ಲ', 'ಇವರು ಸರಿಯಾಗಿ ಅಧ್ಯಯನ ಮಾಡದೇ ಬಣ್ಣ ಬಳಿಯುತ್ತಿದ್ದಾರೆ' ಎಂಬ ಹೇಳಿಕೆಗಳನ್ನು ತಾವಾಗಿಯೇ ಕೊಡುತ್ತಿದ್ದರು. ಈಗ ಟೀಮ್ ಮಂಗಳೂರು ಹೆಸರು ಗಳಿಸಿದ ಬಳಿಕ, ಆ ಗಾಳಿಪಟಗಳ ವಿನ್ಯಾಸ ಮಾಡಿದ್ದೂ ನಾನೇ ಅವುಗಳಿಗೆ ಬಣ್ಣ ಹಚ್ಚಿದ್ದು ನಾನೇ ಎಂದುಕೊಂಡು ಓಡಾಡುತ್ತಿದ್ದಾರೆ!

ಈಗ ವಿದೇಶ ಪ್ರವಾಸದ ಗೀಳು ಈ ಅನಧಿಕೃತ ಸದಸ್ಯರಿಗೆ. ದಿನೇಶ್ ಹೊಳ್ಳರಲ್ಲಿ ಪಾಸ್ ಪೋರ್ಟ್ ಇಲ್ಲ ಎಂಬ ವಿಷಯ ಗೊತ್ತಾದ ಕೂಡಲೇ ಅವರ ಜಾಗದಲ್ಲಿ ವಿದೇಶಕ್ಕೆ ತೆರಳಲು ಪೈಪೋಟಿ! ಹಾಗೆ ಪುಕ್ಕಟೆಯಾಗಿ ಹೋದವರು ಅಲ್ಲಾದರೂ ಸರಿಯಾಗಿ ಕೆಲಸ ಮಾಡಿದರೇ? ಅದೂ ಇಲ್ಲ. ಬರೀ ಗಾಳಿಪಟದ ನೂಲು ಹಿಡಕೊಂಡು ನಿಂತರೆ ಸಾಕಿತ್ತು. ಅದೂ ಮಾಡದೆ, ತಮ್ಮನ್ನು ಸ್ವಾಗತಿಸುವ ಸಮಯದಲ್ಲಿ ಕೆನ್ನೆಗೆ ಮುತ್ತಿಕ್ಕಿ ಸ್ವಾಗತಿಸಿದ ನಾರಿಯನ್ನು ಹುಡುಕಿಕೊಂಡು ಹೋಗುವುದು, ಚೆನ್ನಾದ ಬಟ್ಟೆ ಧರಿಸಿಕೊಂಡು 'ಸನ್ ಗ್ಲಾಸ್' ಏರಿಸಿಕೊಂಡು ಒಂದು ಆಯಕಟ್ಟಿನ ಸ್ಥಳದಲ್ಲಿ ಕುರ್ಚಿ ಹಾಕಿ ವಿ.ಐ.ಪಿ ಯಂತೆ ಏನೂ ಕೆಲಸ ಮಾಡದೆ ಕೂತುಬಿಡುವಿದು, ಸಮುದ್ರ ತೀರದಲ್ಲಿ ಸ್ನಾನ ಮಾಡುತ್ತಿರುವವರ ಚಿತ್ರ ತೆಗೆಯುತ್ತ ಅಲೆದಾಡುವುದು ಇತ್ಯಾದಿಗಳನ್ನು ಮಾಡಿ, 'ಟೀಮ್ ಮಂಗಳೂರು' ಹೆಸರಿನಲ್ಲಿ ವಿದೇಶ ಪ್ರವಾಸ ಮಾಡಿ ಬಂದು, 'ಫಾರೀನ್ ಪೋದ್ ಬತ್ತೆ' (ವಿದೇಶಕ್ಕೆ ಹೋಗಿ ಬಂದೆ) ಎಂದು ಸಿಕ್ಕವರಲ್ಲಿ ಕೊರೆದರಾಯಿತು. ಇಂತಹ ದಂಡಪಿಂಡಗಳ ಸಹವಾಸದಿಂದ ರೋಸಿಹೋಗಿರುವ ಸರ್ವೇಶ್, ಈಗ ದಿನೇಶ್ ಹೊಳ್ಳರಿಗೊಂದು ಪಾಸ್ ಪೋರ್ಟ್ ಮಾಡಿಸಿಕೊಟ್ಟಿದ್ದಾರೆ.


ತಂಡದ ಪ್ರಮುಖ ಸದಸ್ಯರಾಗಿರುವ ಪ್ರಶಾಂತ್ ಉನ್ನತ ವ್ಯಾಸಂಗಕ್ಕಾಗಿ ತೆರಳಿರುವುದರಿಂದ ಗಾಳಿಪಟ ತಯಾರಿ ಈಗ ಸ್ವಲ್ಪ ನಿಧಾನವಾಗಿ ಸಾಗುತ್ತಿದೆ. ಪ್ರತಿ ಮುಂಜಾನೆ ೧೧.೧೫ಕ್ಕೆ ಮಂಗಳೂರಿನ 'ಕಾರ್ ಸ್ಟ್ರೀಟ್' ನಲ್ಲಿರುವ ಹೊಟೇಲ್ ತಾಜ್ ಮಹಲ್ ನಲ್ಲಿ ತನ್ನ ವಿಶಿಷ್ಟ ರುಚಿಯಿಂದ ಪ್ರಸಿದ್ಧಿ ಪಡೆದಿರುವ ಕಾಫಿಯನ್ನು ಹೀರುತ್ತಾ ಸರ್ವೇಶ್ ಮತ್ತು ದಿನೇಶ್ ಹೊಳ್ಳರದ್ದು ಗಾಳಿಪಟ ತಯಾರಿಯ ಹಂತದ ಬಗ್ಗೆ ಚರ್ಚೆ. ಟೀಮ್ ಮಂಗಳೂರಿನ ಎಲ್ಲಾ ಗಾಳಿಪಟಗಳ ವಿನ್ಯಾಸ ಮತ್ತು ಬಣ್ಣದ ಬಗ್ಗೆ ಅಂತಿಮ ನಿರ್ಧಾರ ಇದೇ ಹೊಟೇಲ್ ತಾಜ್ ಮಹಲ್ ನ ಮೂಲೆಯ ಟೇಬಲ್ ಗಳಲ್ಲೊಂದರಲ್ಲಿ ತೆಗೆದುಕೊಳ್ಳಲಾಗುತ್ತದೆ!

ಕೊನೆಯದಾಗಿ ಗಾಳಿಪಟ ತಯಾರಿಸುವ ವಸ್ತುಗಳನ್ನು ತರಿಸುವ ಸ್ಥಳಗಳ ಬಗ್ಗೆ ಒಂದು ಮಾತು. ಕಡ್ಡಿಗಳನ್ನು ಹೊಸನಗರದಿಂದ ಸರ್ವೇಶ್ ಖುದ್ದಾಗಿ ಹೋಗಿ ತರುತ್ತಾರೆ. ಈಗ ಕೆಲವು ಕಡ್ಡಿಗಳು ಮುಂಬೈನಲ್ಲಿ 'ರೆಡಿಮೇಡ್' ಆಗಿ ಸಿಗುವುದರಿಂದ ಆಲ್ಲಿಂದಲೂ ತರಿಸಲಾಗುತ್ತದೆ. ನೂಲನ್ನು ಆಸ್ಟ್ರೇಲಿಯದಿಂದ ಮತ್ತು ಕಡ್ಡಿಗಳನ್ನು ದೃಢವಾಗಿ ಜೋಡಿಸಲು ಬಳಸಲಾಗುವ 'ಕ್ಲಿಪ್' ಗಳನ್ನು ಆಸ್ಟ್ರೇಲಿಯ ಮತ್ತು ಇಂಗ್ಲಂಡ್ ನಿಂದ ತರಿಸಲಾಗುತ್ತದೆ. ಬಟ್ಟೆಯನ್ನು ಇಂಗ್ಲಂಡ್, ಇಂಡೋನೇಶ್ಯ ಮತ್ತು ದಕ್ಷಿಣ ಕೊರಿಯಗಳಿಂದ ತರಿಸಲಾಗುತ್ತದೆ. ಕಡ್ಡಿ ಇರುವಲ್ಲಿ ಉನ್ನತ ಗುಣಮಟ್ಟದ ಬಟ್ಟೆಯನ್ನು ಬಳಸಬೇಕಾಗುವುದರಿಂದ ಅವನ್ನು ಇಂಗ್ಲಂಡ್ ನಿಂದಲೂ ಮತ್ತು ಕಡ್ಡಿಯಿಲ್ಲದಿರುವಲ್ಲಿ ಸ್ವಲ್ಪ ಕಡಿಮೆ ಗುಣಮಟ್ಟದ ಬಟ್ಟೆಯನ್ನು ಬಳಸಬಹುದಾದರಿಂದ ಅವನ್ನು ಇಂಡೋನೇಶ್ಯ ಮತ್ತು ದಕ್ಷಿಣ ಕೊರಿಯಗಳಿಂದ ತರಿಸಲಾಗುತ್ತದೆ. ಎಟ್ ಲೀಸ್ಟ್ ಬಣ್ಣವಾದರೂ ಭಾರತದ್ದು!

೨೦೦೮ ಜನವರಿ ೧೮ ಮತ್ತು ೧೯ರಂದು ಮಂಗಳೂರಿನ ಪಣಂಬೂರು ಕಡಲ ಕಿನಾರೆಯಲ್ಲಿ ಮಂಗಳೂರಿನ ೨ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ನಡೆಯಲಿದೆ.

ಟೀಮ್ ಮಂಗಳೂರಿನ ಅಂತರ್ಜಾಲ ತಾಣ: www.indiankites.com

ಟೀಮ್ ಮಂಗಳೂರಿನ ಗಾಳಿಪಟ ಗಾಥೆ - ೧


೨೦೦೮ ಜನವರಿ ೧೯ ಮತ್ತು ೨೦ ರಂದು ಮಂಗಳೂರಿನ ೨ನೇ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಪಣಂಬೂರಿನ ಕಡಲ ಕಿನಾರೆಯಲ್ಲಿ ನಡೆಯಲಿದೆ.

ಮಂಗಳೂರಿನಲ್ಲಿ ಒಂದು ಸ್ವಂತ ಸಣ್ಣ ವ್ಯವಹಾರ ಮಾಡಿಕೊಂಡಿದ್ದಾರೆ ಸರ್ವೇಶ್ ರಾವ್. ನೋಡಲಿಕ್ಕೆ ಸಣ್ಣದಾಗಿ, ಸಾಧಾರಣವಾಗಿರುವ ಸರ್ವೇಶ್ ಒಬ್ಬ ದೊಡ್ಡ ಕನಸುಗಾರ. ಆ ಕನಸು ನನಸಾದ ದಿನ ನೋಡಬೇಕಿತ್ತು ಅವರನ್ನು. ಹಿರಿ ಹಿರಿ ಹಿಗ್ಗುತ್ತಾ, ಏನು ಮಾಡಬೇಕೆಂದು ತೋಚದೆ, ಕಿವಿಯಿಂದ ಕಿವಿಯವರೆಗೆ ನಗುತ್ತಾ ಮಂಗಳೂರಿನ ಪಣಂಬೂರು ಸಮುದ್ರ ತೀರದಲ್ಲಿ ಪರಿಚಯದವರನ್ನು ಅಪ್ಪಿಕೊಂಡು ಸ್ವಾಗತಿಸುತ್ತಾ ಬಹಳ ಸಂಭ್ರಮದಿಂದ ಆಚೀಚೆ ಓಡಾಡುತ್ತ ಇದ್ದರು.

ಆ ದಿನ ಮಂಗಳೂರಿನ ಪ್ರಥಮ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು 'ಟೀಮ್ ಮಂಗಳೂರು' ಆಯೋಜಿಸಿತ್ತು. ಜನ ಪ್ರವಾಹವೇ ಪಣಂಬೂರು ಸಮುದ್ರ ತೀರಕ್ಕೆ ಹರಿದು ಬರುತ್ತಿತ್ತು. ಇಡೀ ಮಂಗಳೂರೇ ಗಾಳಿಪಟ ಉತ್ಸವ ನೋಡಲು ಪಣಂಬೂರು ಕಡಲ ತೀರದಲ್ಲಿ ನೆರೆದಿತ್ತು.

ಜನವರಿ ೨೩,೨೦೦೫ರಂದು ನಡೆದ ಮಂಗಳೂರಿನ ಪ್ರಥಮ ಅಂತರಾಷ್ಟ್ರೀಯ ಗಾಳಿಪಟ ಉತ್ಸವ, ಟೀಮ್ ಮಂಗಳೂರಿನ ಸದಸ್ಯರ ಕನಸು ನನಸಾದ ದಿನ. ಇದು ಟೀಮ್ ಮಂಗಳೂರಿಗೆ ಒಂದು ದೊಡ್ಡ ಮಟ್ಟದ ಯಶಸ್ಸು ಕಂಡ ದಿನವಾಗಿತ್ತು. ಉತ್ಸವದ ಸಂಪೂರ್ಣ ಪ್ರಾಯೋಜಕತೆಯನ್ನು ಮಂಗಳೂರು ತೈಲಾಗಾರ(ಎಮ್.ಆರ್.ಪಿ.ಎಲ್)ದ ಪೋಷಕ ಸಂಸ್ಠೆಯಾಗಿರುವ ಓ.ಎನ್.ಜಿ.ಸಿ ವಹಿಸಿಕೊಂಡಿತ್ತು. ಮಿಡಿಯಾ ಪ್ರಾಯೋಜಕತೆಯ ಜವಾಬ್ದಾರಿಯನ್ನು ವಿಜಯ ಕರ್ನಾಟಕ ವಹಿಸಿಕೊಂಡಿದ್ದರಿಂದ ಉತ್ಸವದ ಪ್ರಚಾರಕ್ಕೆ ಯಾವುದೇ ಕೊರತೆ ಇರಲಿಲ್ಲ. ಗಾಳಿಪಟ ಉತ್ಸವ ವೀಕ್ಷಿಸಲು ಸುಮಾರು ಒಂದು ಲಕ್ಷದಷ್ಟು ಜನಸಮೂಹ ಸೇರಿತ್ತು. ಫ್ರಾನ್ಸ್, ಇಸ್ರೇಲ್, ಆಸ್ಟ್ರೇಲಿಯ, ಮಲೇಶ್ಯ, ಇಂಡೋನೇಶ್ಯ, ಇಂಗ್ಲಂಡ್, ಜಪಾನ್ ಮತ್ತು ಟರ್ಕಿ ದೇಶಗಳಿಂದ ಗಾಳಿಪಟಗಾರರು ಬಂದಿದ್ದರು.


ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಆಯೋಜಿಸಿದ ನಂತರ ಟೀಮ್ ಮಂಗಳೂರಿನ ಅದೃಷ್ಟ ಬದಲಾಯಿತು. ಬೇರೆ ದೇಶಗಳಿಂದ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಳ್ಳಲು ಆಹ್ವಾನಗಳು ಬರಲಾರಂಭಿಸಿದವು. ಎಪ್ರಿಲ್ ೨೦೦೫ರಲ್ಲಿ ಫ್ರಾನ್ಸ್ ನ ಬರ್ಕ್ ಸುರ್ ಮರ್ ಎಂಬಲ್ಲಿ ನಡೆದ ಗಾಳಿಪಟ ಉತ್ಸವದಿಂದ ಪ್ರಾರಂಭಗೊಂಡು ೫ ಬಾರಿ ಟೀಮ್ ಮಂಗಳೂರು ವಿದೇಶ ಪ್ರಯಾಣ ಮಾಡಿ ಗಾಳಿಪಟ ಉತ್ಸವಗಳಲ್ಲಿ ಭಾಗವಹಿಸಿದೆ. ಸೌದಿ ಅರೇಬಿಯ, ಟರ್ಕಿ, ಜಪಾನ್ ಮತ್ತು ಇಂಡೋನೇಶ್ಯಗಳಲ್ಲಿ ನಡೆಯುವ ಗಾಳಿಪಟ ಉತ್ಸವಗಳಿಗೆ ತೆರಳಲು ಟೀಮ್ ಮಂಗಳೂರಿಗೆ ನಾನಾ ಕಾರಣಗಳಿಂದ ಸಾಧ್ಯವಾಗಲಿಲ್ಲ.


ಭಾಗವಹಿಸಲು ತೆರಳಿದ ಎಲ್ಲಾ ಕಡೆಗಳಲ್ಲೂ ಭಾರತದ ಜನಪದ ಕಲೆಗಳಿಗೆ, ಪೌರಾಣಿಕ ಪಾತ್ರಗಳಿಗೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ ದೈತ್ಯ ಗಾತ್ರದ ಗಾಳಿಪಟಗಳನ್ನು ಆಕಾಶಕ್ಕೆ ಹಾರಿಸಿ ವಿದೇಶಿಯರನ್ನು ದಂಗುಬಡಿಸಿ, ಪ್ರಶಂಸೆ ಪಡೆದು ಹೆಮ್ಮೆಯಿಂದ ಬೀಗುತ್ತ ಮರಳಿ ಬಂದಿದೆ ಟೀಮ್ ಮಂಗಳೂರು. ೨೦೦೫ರಲ್ಲಿ ಇಂಗ್ಲಂಡ್ ನಲ್ಲಿ ನಡೆದ ೨ ಗಾಳಿಪಟ ಉತ್ಸವಗಳಲ್ಲಿ 'ಬೆಸ್ಟ್ ಟೀಮ್' ಪ್ರಶಸ್ತಿಯನ್ನು ಗಳಿಸಿದ್ದು ಟೀಮ್ ಮಂಗಳೂರಿನ ಸಾಧನೆ. ಭಾರತದಿಂದ ಅಹ್ವಾನಿಸಲ್ಪಟ್ಟ ಏಕೈಕ ತಂಡವೆಂಬ ಹೆಗ್ಗಳಿಕೆ ಬೇರೆ. ೨೦೦೨ರ ಗುಜರಾತ್ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ 'ಟೀಮ್ ಮಂಗಳೂರು' ತನ್ನ ೩೬ ಅಡಿ ಉದ್ದದ ಕಥಕ್ಕಳಿ ಗಾಳಿಪಟವನ್ನು ಹಾರಿಸಿ ರಾಷ್ಟ್ರೀಯ ದಾಖಲೆಯನ್ನು ಮಾಡಿತು. ಲಿಮ್ಕಾ ಸಾಧನೆಗಳ ಪುಸ್ತಕದಲ್ಲಿ ಈ ಬಗ್ಗೆ ದಾಖಲಿಸಲಾಗಿದೆ. ಇಂಗ್ಲಂಡ್ ನ ಗಾಳಿಪಟ ಮಾಸ ಪತ್ರಿಕೆಯಾಗಿರುವ 'ದಿ ಕೈಟ್ ಫ್ಲೈಯರ್' ತನ್ನ ಜುಲೈ ೨೦೦೫ರ ಸಂಚಿಕೆಯ ಮುಖಪುಟದಲ್ಲಿ ಟೀಮ್ ಮಂಗಳೂರಿನ ಗಾಳಿಪಟಗಳನ್ನು ಮುದ್ರಿಸಿತ್ತು.

ಅಂದ ಹಾಗೆ ಏನಿದು 'ಟೀಮ್ ಮಂಗಳೂರು'?

ಗಾಳಿಪಟಗಳ ಬಗ್ಗೆ ಆಸಕ್ತಿ ಮತ್ತು ಅವುಗಳನ್ನು ತಯಾರಿಸಿ ಹಾರಿಸುವ ಹವ್ಯಾಸವಿರುವ ಸಮಾನ ಮನಸ್ಕರ ಒಂದು ಸಣ್ಣ ತಂಡ 'ಟೀಮ್ ಮಂಗಳೂರು'. ಗಾಳಿಪಟ ಹಾರಿಸುವುದನ್ನು ಒಂದು ಹವ್ಯಾಸವಾಗಿ ಜನರಲ್ಲಿ ಅದರಲ್ಲೂ ಹೆಚ್ಚಾಗಿ ಮಕ್ಕಳಲ್ಲಿ ಮತ್ತು ಯುವ ಜನಾಂಗದಲ್ಲಿ ಬೆಳೆಸಬೇಕು ಎಂಬ ಪ್ರಮುಖ ಉದ್ದೇಶದಿಂದ ೧೯೯೮ ರಲ್ಲಿ 'ಟೀಮ್ ಮಂಗಳೂರು' ಅಸ್ತಿತ್ವಕ್ಕೆ ಬಂತು. ಇದರೊಂದಿಗೆ ಯುವ ಜನಾಂಗದಲ್ಲಿ ಪ್ರಕೃತಿಯ ಪ್ರತಿ ಪ್ರೀತಿ ಹಾಗೂ ಗೌರವ ಬೆಳೆಸುವುದು ಮತ್ತು ಭಾರತದ ಶ್ರೀಮಂತ ಸಂಸ್ಕೃತಿಯನ್ನು ತನ್ನ ಗಾಳಿಪಟಗಳ ಮೂಲಕ ಜಗತ್ತಿನೆಲ್ಲೆಡೆ ಸಾರುವುದು ಇವು ಇತರ ಉದ್ದೇಶಗಳಾಗಿವೆ.


ಈಗ ಟೀಮ್ ಮಂಗಳೂರಿನ ಮುಂದೆ ಇರುವ ಸವಾಲೆಂದರೆ ಪ್ರತಿ ವರ್ಷ ಅಂತರಾಷ್ಟ್ರೀಯ ಗಾಳಿಪಟ ಉತ್ಸವವನ್ನು ಮಂಗಳೂರಿನಲ್ಲಿ ಆಯೋಜಿಸುವುದು. ೨೦೦೬ರಲ್ಲಿ ಕೆಲವು ಕಾರಣಗಳಿಂದ ಅದು ಸಾಧ್ಯವಾಗಲಿಲ್ಲ. ೨೦೦೭ರಲ್ಲಿ ಜನವರಿಯಲ್ಲಿ ನಡೆದ 'ಬೀಚ್ ಉತ್ಸವ' ದಲ್ಲಿ ಟೀಮ್ ಮಂಗಳೂರು ತನ್ನ ಗಾಳಿಪಟಗಳನ್ನು ಹಾರಿಸಿದ್ದಲ್ಲದೇ ಬೇರೆ ದೇಶಗಳ ಗಾಳಿಪಟಗಾರರನ್ನೂ ಪಾಲ್ಗೊಳ್ಳಲು ತಾನಾಗಿಯೇ ಆಹ್ವಾನಿಸಿದ್ದರಿಂದ ಅದೇ ಒಂದು ಗಾಳಿಪಟ ಉತ್ಸವವಾಗಿಹೋಯಿತು. ೨೦೦೮ರಲ್ಲಿ ಜನವರಿ ೧೯ ಮತ್ತು ೨೦ ರಂದು ಮತ್ತೆ ಅಂತರಾಷ್ಟ್ರೀಯ ಗಾಳಿಪಟ ಉತ್ಸವ ಪಣಂಬೂರಿನ ಕಡಲ ಕಿನಾರೆಯಲ್ಲಿ ನಡೆಯಲಿದೆ.

ಇದಕ್ಕೂ ಮೊದಲು ಪ್ರತಿ ವರ್ಷ ಗಾಳಿಪಟ ಉತ್ಸವ ಮಾಡಲು ಪಡಬೇಕಾದ ಪರದಾಟ, ಇದ್ದ ತೊಡಕುಗಳು, ಪ್ರೋತ್ಸಾಹದ ಕೊರತೆ, ಪ್ರಾಯೋಜಕರ ಕೊರತೆ ಮತ್ತು ಎಲ್ಲದಕ್ಕಿಂತ ಹೆಚ್ಚಾಗಿ ಜನರ ನಿರುತ್ಸಾಹ ಮತ್ತು ನಿರ್ಲಕ್ಶ್ಯ ಟೀಮ್ ಮಂಗಳೂರಿಗೆ ನಿರಾಸೆಯನ್ನುಂಟು ಮಾಡುತ್ತಿದ್ದವು. ಆದರೂ ಕೂಡಾ ಛಲಬಿಡದೆ ಪ್ರತೀ ವರ್ಷ ಗಾಳಿಪಟ ಹಾರಿಸುವ ಸ್ಪರ್ಧೆ ಮತ್ತು ಒಂದು ಸಣ್ಣ ಗಾಳಿಪಟ ಉತ್ಸವವನ್ನು ಪಣಂಬೂರು ಕಡಲ ತೀರದಲ್ಲಿ ಸ್ವಂತ ಖರ್ಚಿನಲ್ಲಿ ಟೀಮ್ ಮಂಗಳೂರು ಮಾಡುತ್ತಿತ್ತು.


ಪ್ರತಿ ವರ್ಷ ಜನವರಿಯಲ್ಲಿ ಗುಜರಾತಿನಲ್ಲಿ ನಡೆಯುತ್ತಿದ್ದ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಪಾಲ್ಗೊಳ್ಳಲು ಟೀಮ್ ಮಂಗಳೂರು ತೆರಳುತ್ತಿತ್ತು. ಯಕ್ಷಗಾನ ಪಾತ್ರಧಾರಿಯ ಗಾಳಿಪಟವನ್ನು ಹಾರಿಸಿ ರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿತು. ಹೈದರಾಬಾದ್ ನಲ್ಲಿ ನಡೆದ ಅಂತರಾಷ್ಟ್ರೀಯ ಗಾಳಿಪಟ ಉತ್ಸವದಲ್ಲಿ ಮತ್ತದೇ ಗಾಳಿಪಟಗಳನ್ನು ಹಾರಿಸಿ ಮತ್ತಷ್ಟು ಪ್ರಶಂಸೆಗಳ ಸುರಿಮಳೆ. ಈ ಗಾಳಿಪಟ ಉತ್ಸವಗಳಲ್ಲಿ ಪಾಲ್ಗೊಳ್ಳಲು ಬರುತ್ತಿದ್ದ ಬೇರೆ ದೇಶಗಳ ಗಾಳಿಪಟಗಾರರು ಟೀಮ್ ಮಂಗಳೂರಿನ 'ಹ್ಯಾಂಡ್ ಮೇಡ್' ಗಾಳಿಪಟಗಳಿಂದ ಆಕರ್ಷಿತರಾದರು. ತಮ್ಮ ದೇಶಗಳಿಗೆ ಹಿಂತಿರುಗಿದ ಬಳಿಕ ಅಲ್ಲಿನ ಗಾಳಿಪಟ ಉತ್ಸವ ಆಯೋಜಕರಿಗೆ ಟೀಮ್ ಮಂಗಳೂರಿನ ಬಗ್ಗೆ ಮಾಹಿತಿ ನೀಡಿ ಅಹ್ವಾನಿಸುವಂತೆ ಶಿಫಾರಸು ಮಾಡತೊಡಗಿದಾಗ ಟೀಮ್ ಮಂಗಳೂರಿನ ಖ್ಯಾತಿ ವಿದೇಶಗಳಲ್ಲಿ ಹರಡತೊಡಗಿತು.

ಮೊದಲೆಲ್ಲ ಎಲ್ಲಿ ಗುಜರಾತ್-ಹೈದರಾಬಾದ್ ನಿಂದ ಅಹ್ವಾನ ಬರುದಿಲ್ಲವೋ ಎಂದು ಆತಂಕಗೊಳಗಾಗುತ್ತಿದ್ದ ಸರ್ವೇಶ್, ಈಗ ಎಲ್ಲಿ ಫ್ರಾನ್ಸ್-ಇಂಗ್ಲಂಡ್ ಗಳಿಂದ ಆಹ್ವಾನ ಬರುದಿಲ್ಲವೋ ಎಂಬ ಆತಂಕಗೊಳಗಾಗುತ್ತಾರೆ!

ಟೀಮ್ ಮಂಗಳೂರಿನ ಅಂತರ್ಜಾಲ ತಾಣ: http://www.indiankites.com/

ಶುಕ್ರವಾರ, ಡಿಸೆಂಬರ್ 28, 2007

೨೦೦೭-೦೮ ರಣಜಿ ಋತುವಿನಲ್ಲಿ ಕರ್ನಾಟಕ

ಕರ್ನಾಟಕ ೨೦೦೭-೦೮ ಋತುವಿನ ರಣಜಿ ಋತುವನ್ನು ಕೊನೆಯ ಲೀಗ್ ಪಂದ್ಯವನ್ನು ಗೆದ್ದು ಮುಗಿಸಿತು. ರತ್ನಗಿರಿಯಲ್ಲಿ ನಡೆದ ಕೊನೆಯ ಲೀಗ್ ಪಂದ್ಯದಲ್ಲಿ ಮಹಾರಾಷ್ಟ್ರವನ್ನು ಇನ್ನಿಂಗ್ಸ್ ಮತ್ತು ೧೨೯ ರನ್ನುಗಳಿಂದ ಸೋಲಿಸಿ ೧೬ ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೆ ಕರ್ನಾಟಕ ತೃಪ್ತಿಪಡಬೇಕಾಯಿತು. ಆಡಿದ ೭ ಪಂದ್ಯಗಳಲ್ಲಿ ೨ ವಿಜಯ, ೪ ಡ್ರಾ ಮತ್ತು ಒಂದು ಸೋಲು ಕರ್ನಾಟಕದ ಸಾಧನೆ.

ಮೈಸೂರಿನಲ್ಲಿ ನಡೆದ ಸೌರಾಷ್ಟ್ರದ ವಿರುದ್ಧದ ಪಂದ್ಯದಲ್ಲಿ ನಾಯಕ ಯೆರೆ ಗೌಡರ ಮೂರ್ಖತನದ ಆಟದಿಂದ ಗೆಲ್ಲಬಹುದಾದ ಪಂದ್ಯವನ್ನು ಸೋತ ಕರ್ನಾಟಕ ಸೆಮಿ ಫೈನಲ್ ಪ್ರವೇಶಿಸುವ ಸಾಧ್ಯತೆಯನ್ನು ಅಂದೇ ಕಳೆದುಕೊಂಡಿತ್ತು. ಗೆಲ್ಲಲು ೫ ಎಸೆತಗಳಲ್ಲಿ ೭ ಓಟಗಳ ಅವಶ್ಯಕತೆ ಇರುವಾಗ ಒಂಟಿ ಓಟ ತೆಗೆದು ಕೊನೆಯ ಆಟಗಾರ ಅಪ್ಪಣ್ಣ ಮುಂದಿನ ಎಸೆತ ಎದುರಿಸುವಂತೆ ಮಾಡಿದರಲ್ಲ ಯೆರೆ ಗೌಡ! ಅಪ್ಪಣ್ಣ ಆ ಎಸೆತದಲ್ಲೇ ನೆಗೆದುಬಿದ್ದರು. ಅವರೊಂದಿಗೆ ಕರ್ನಾಟಕವೂ ನೆಗೆದುಬಿತ್ತು. ಯೆರೆ ಗೌಡರಿಗೆ ಶಾಪ ಹಾಕಿದವರೆಷ್ಟೋ... ನನ್ನನ್ನೂ ಸೇರಿಸಿ! ಇಷ್ಟೊಂದು ಅನುಭವವಿರುವ ಯೆರೆ ಗೌಡ ಸ್ವಲ್ಪ ತಲೆ ಖರ್ಚು ಮಾಡಿ ಅಡಿದ್ದಿದ್ದರೆ ಕರ್ನಾಟಕ ಸೌರಾಷ್ಟ್ರ ವಿರುದ್ಧದ ಪಂದ್ಯವನ್ನು ಗೆದ್ದು ಈಗ ಅಂಕಪಟ್ಟಿಯಲ್ಲಿ ೨೧ ಅಂಕಗಳೊಂದಿಗೆ ದ್ವಿತೀಯ ಸ್ಥಾನಿಯಾಗಿ ಉತ್ತರ ಪ್ರದೇಶದ ವಿರುದ್ಧ ಬೆಂಗಳೂರಿನಲ್ಲಿ ಸೆಮಿಫೈನಲ್ ಆಡುವ ಅವಕಾಶವಿತ್ತು.

ಈ ಋತುವಿನಲ್ಲಿ ಕರ್ನಾಟಕದ ವೈಫಲ್ಯಕ್ಕೆ ಪ್ರಮುಖ ಕಾರಣ, ಆರಂಭಿಕ ಜೊತೆಯಾಟದ ವೈಫಲ್ಯ ಮತ್ತು ಸ್ಪಿನ್ ವಿಭಾಗದಲ್ಲಿ ಅಪ್ಪಣ್ಣನ ವೈಫಲ್ಯ. ರಾಬಿನ್ ಉತ್ತಪ್ಪ ಕಳೆದ ಋತುವಿನ ಮ್ಯಾಜಿಕ್ ಮತ್ತೆ ತೋರಿಸಲು ವಿಫಲರಾದರು. ೫ ಪಂದ್ಯಗಳನ್ನಾಡಿದ ರಾಬಿನ್ ಗಳಿಸಿದ್ದು ೨೭ರ ಸರಾಸರಿಯಲ್ಲಿ ೧೮೮ ಓಟಗಳನ್ನು ಮಾತ್ರ.

ಕಳೆದ ಋತುವಿನ ಸೆಮಿಫೈನಲ್ ಪಂದ್ಯದಲ್ಲಿ ರಣಜಿಗೆ ಪಾದಾರ್ಪಣ ಮಾಡಿದ್ದ ಮೈಸೂರಿನ ಕೆ ಬಿ ಪವನ್ ಈ ಋತುವಿನಲ್ಲಿ ಭರ್ಜರಿ ಬ್ಯಾಟಿಂಗ್ ತೋರ್ಪಡಿಸಿದರು. ರಾಹುಲ್ ದ್ರಾವಿಡ್ ಜೊತೆ ಮೊದಲೆರಡು ಪಂದ್ಯಗಳಲ್ಲಿ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡಿದ್ದ ಪವನ್, ಆ ಮಹಾನ್ ಆಟಗಾರನ ಜೊತೆ ಆಡಿ ಕಲಿತಿರುವುದನ್ನು ಮುಂದಿನ ಪಂದ್ಯಗಳಲ್ಲಿ ಬಳಸಿಕೊಂಡರು. ೨ ಶತಕ ಮತ್ತು ೨ ಶತಕಾರ್ಧಗಳನ್ನು ಒಳಗೊಂಡು ೪೨ರ ಸರಾಸರಿಯಲ್ಲಿ ೪೧೮ ಓಟಗಳನ್ನು ಪವನ್ ಗಳಿಸಿದರು. ಯಾವುದೇ ಸಂಶಯವಿಲ್ಲದೇ ಕೆ.ಬಿ.ಪವನ್ ೨೦೦೭-೦೮ ಋತುವಿನ 'ಶೋಧ' ಎನ್ನಬಹುದು.

ಯೆರೆ ಗೌಡ ಮತ್ತೊಮ್ಮೆ ಬಾಲಂಗೋಚಿಗಳನ್ನು ಒಂದೆಡೆ ಇರಿಸಿ ಇನ್ನಿಂಗ್ಸ್ ಆಡುವ ತನ್ನ ಅಪೂರ್ವ ಕಲೆಯನ್ನು ತೋರ್ಪಡಿಸಿದರು. ರಾಜಸ್ಥಾನದ ವಿರುದ್ಧ ಕೊನೆಯ ಹುದ್ದರಿಗೆ ಅಯ್ಯಪ್ಪನೊಂದಿಗೆ ಶತಕದ ಜೊತೆಯಾಟ ಮಾಡಿದ್ದು ಯೆರೆ ಗೌಡರ ಜಿಗುಟುತನಕ್ಕೆ ಸಾಕ್ಷಿ. ಮಹಾರಾಷ್ಟ್ರದ ವಿರುದ್ಧವೂ ಸಮಯೋಚಿತ ಶತಕ ಬಾರಿಸಿ ತಂಡವನ್ನು ಬೃಹತ್ ಮೊತ್ತದೆಡೆ ಕೊಂಡೊಯ್ಯುವಲ್ಲಿ ಯೆರೆ ಪ್ರಮುಖ ಪಾತ್ರ ವಹಿಸಿದರು. ಆದರೆ ಪ್ರಮುಖ ಪಂದ್ಯವೊಂದರಲ್ಲಿ ಯೆರೆ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಆಡಿದ್ದಿದ್ದರೆ ಕರ್ನಾಟಕಕ್ಕೆ ಬಹಳ ಪ್ರಯೋಜನವಾಗುತ್ತಿತ್ತು. ಏನೇ ಆದರೂ ಸೌರಾಷ್ಟ್ರದ ವಿರುದ್ಧದ ಪಂದ್ಯವನ್ನು ನನಗಂತೂ ಮರೆಯಲಾಗದು. ಯೆರೆಯ ಮೂರ್ಖತನ ಕರ್ನಾಟಕಕ್ಕೆ ಬಲು ದುಬಾರಿಯಾಯಿತು. ೬೨ರ ಸರಾಸರಿಯಲ್ಲಿ ೨ ಶತಕಗಳೊಂದಿಗೆ ೩೭೧ ಓಟಗಳು ಗೌಡರ ಸಾಧನೆ.

ಮಹಾರಾಷ್ಟ್ರದ ವಿರುದ್ಧ ಒಂದು ಪಂದ್ಯದಲ್ಲಿ ಆಡಿದ ದೇವರಾಜ್ ಪಾಟೀಲ್ ವಿಫಲರಾದ ಕಾರಣ, ತಿಲಕ್ ನಾಯ್ಡು ಮತ್ತೆ ಮುಂದಿನ ಋತುವಿಗೆ ತನ್ನ ಸ್ಥಾನವನ್ನು ಭದ್ರಗೊಳಿಸಿರಬಹುದು. ತಿಲಕ್ ಸಾಧಾರಣ ಪ್ರದರ್ಶನ ನೀಡಿದರು. ಒಂದು ಶತಕ ಮತ್ತು ಒಂದು ಶತಕಾರ್ಧದೊಂದಿಗೆ ೪೭ರ ಸರಾಸರಿಯಲ್ಲಿ ೩೨೬ ತಿಲಕ್ ಸಾಧನೆ. ಕಳೆದ ೧೦ ವರ್ಷಗಳಿಂದ ಆಡುತ್ತಿರುವ ತಿಲಕ್ ಕರ್ನಾಟಕಕ್ಕೆ ಬಲೂ ಅವಶ್ಯವಿರುವಾಗ ಕೆಲವು ಸಮಯೋಚಿತ ಆಟ ಆಡುವುದರಲ್ಲಿ ಈಗಲೂ ವಿಫಲರಾಗುತ್ತಿದ್ದಾರೆ. ಋತುವಿನ ಆರಂಭದಲ್ಲೇ ಒಂದು ಶತಕ ಬಾರಿಸಿದರೆ ತನ್ನ ಜವಾಬ್ದಾರಿ ಮುಗಿಯಿತು ಎಂಬ ಧೋರಣೆಯಿದ್ದರೆ ತಿಲಕ್ ತಂಡದಲ್ಲಿದ್ದು ಪ್ರಯೋಜನವಿಲ್ಲ. ಆದರೆ ತಿಲಕ್ ನಾಯ್ಡುಗೆ ಗಾಡ್ ಫಾದರ್ ಸಪೋರ್ಟ್ ಇದೆ. ಮತ್ತೆ ಮುಂದಿನ ಋತುವಿನಲ್ಲಿ ತಿಲಕ್ ವಿಕೆಟ್ ಕೀಪರ್ ಆಗಿ ಬರಲಿದ್ದಾರೆ.

ಕಳೆದ ಋತುವಿನ 'ಶೋಧ' ಆಗಿದ್ದ ಚಂದ್ರಶೇಖರ್ ರಘು ಈ ಬಾರಿ ನಿರಾಸೆಗೊಳಿಸಿದರು. ಒಂದೆರಡು ಉತ್ತಮ ಇನ್ನಿಂಗ್ಸ್-ಗಳನ್ನು ಬಿಟ್ಟರೆ ಇವರಿಂದ ನಿರೀಕ್ಷಿತ ಮಟ್ಟದಲ್ಲಿ ರನ್ನುಗಳು ಹರಿದುಬರಲಿಲ್ಲ. ೪ ಶತಕಾರ್ಧಗಳೊಂದಿಗೆ ೪೫ರ ಸರಾಸರಿಯಲ್ಲಿ ೩೫೯ ಓಟಗಳು ರಘು ಸಾಧನೆ. ಉಳಿದಂತೆ ಎರಡೇ ಪಂದ್ಯಗಳನ್ನಾಡಿದ ಭರತ್ ಚಿಪ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರಿಗೆ ತನ್ನನ್ನು ಕಡೆಗಣಿಸಿದ್ದಕ್ಕಾಗಿ ಸರಿಯಾದ ಉತ್ತರ ನೀಡಿದ್ದಾರೆ. ಮಹಾರಾಷ್ಟ್ರದ ವಿರುದ್ಧ ಬಿರುಸಿನ ಆಟ ಪ್ರದರ್ಶಿಸಿ ಶತಕದ ಬಾರಿ ಆಡಿದ ಭರತ್, ತಂಡದಲ್ಲಿ ಸ್ಥಿರವಾದ ಸ್ಥಾನ ಪಡೆಯಲು ಪರದಾಡುತ್ತಿದ್ದಾರೆ. ಮುಂದಿನ ಋತುವಿನಲ್ಲಾದರೂ ಅಯ್ಕೆಗಾರರು ಭರತ್ ಚಿಪ್ಲಿಯನ್ನು ಎಲ್ಲಾ ಪಂದ್ಯಗಳಲ್ಲಿ ಆಡಿಸಲಿ. ಸುಧೀಂದ್ರ ಶಿಂದೆ ಆಡಿದ ಒಂದೆರಡು ಪಂದ್ಯಗಳಲ್ಲಿ ನಿರಾಸೆ ಮಾಡಲಿಲ್ಲ. ಅಮಿತ್ ವರ್ಮಾ ಮತ್ತು ದೇವರಾಜ್ ಪಾಟೀಲ್ ಸಿಕ್ಕಿದ ಒಂದೇ ಅವಕಾಶದ ಸದುಪಯೋಗ ಮಾಡಿಕೊಳ್ಳಲು ವಿಫಲರಾದರು.

ಬೌಲಿಂಗ್ ವಿಭಾಗದಲ್ಲಿ ದಾವಣಗೆರೆಯ ವಿನಯ್ ಕುಮಾರ್ ಮಹಾರಾಷ್ಟ್ರದ ವಿರುದ್ಧ ಹ್ಯಾಟ್ರಿಕ್ ಸಾಧನೆಯೊಂದಿಗೆ ೪೦ ಹುದ್ದರಿಗಳನ್ನು ಕೇವಲ ೧೮.೫೨ ಸರಾಸರಿಯಲ್ಲಿ ಕಿತ್ತು ಅದ್ಭುತ ಪ್ರದರ್ಶನ ನೀಡಿದ್ದಾರೆ. ಕಳೆದ ಋತುವಿನಲ್ಲಿ ಗಾಯಾಳಾಗಿ ತಂಡದಿಂದ ಹೊರಗಿದ್ದ ಎನ್.ಎಸ್.ಸಿ.ಅಯ್ಯಪ್ಪ ಈ ಬಾರಿ ಉತ್ತಮ ಪ್ರದರ್ಶನ ನೀಡಿದರು. ೨೪ ರ ಸರಾಸರಿಯಲ್ಲಿ ೨೫ ಹುದ್ದರಿಗಳನ್ನು ಗಳಿಸಿದ್ದು ಇವರ ಸಾಧನೆ. ವಯಸ್ಸಾದಂತೆ ಸುನಿಲ್ ಜೋಶಿ ಇನ್ನಷ್ಟು ಉತ್ತಮವಾಗಿ ಬೌಲಿಂಗ್ ಪ್ರದರ್ಶನ ನೀಡುತ್ತಿದ್ದಾರೆ. ೧೯.೮೮ ಸರಾಸರಿಯಲ್ಲಿ ೩೪ ಹುದ್ದರಿಗಳು ಜೋಶಿ ಸಾಧನೆ.

ಕಳೆದ ಋತುವಿನಲ್ಲಿ ಬಹಳ ಉತ್ತಮ ಬೌಲಿಂಗ್ ಮಾಡಿದ್ದ ಅಪ್ಪಣ್ಣ ಈ ಬಾರಿ ನಿರಾಸೆಗೊಳಿಸಿದರು. ೪ ಪಂದ್ಯಗಳಲ್ಲಿ ೫ ಹುದ್ದರಿ ಇವರ ಸಾಧನೆ. ಹಾಗೇನೆ ಬಾಲಚಂದ್ರ ಅಖಿಲ್ ಕೂಡಾ ಈ ಬಾರಿ ನಿರಾಸೆಗೊಳಿಸಿದರು. ೪ ಪಂದ್ಯಗಳಲ್ಲಿ ಅಖಿಲ್ ಗಳಿಸಿದ್ದು ಒಂದೇ ಹುದ್ದರಿ ಮತ್ತು ಗಳಿಸಿದ್ದು ೧೫೭ ಓಟಗಳನ್ನು. ಕೊನೆಯ ಎರಡು ಪಂದ್ಯಗಳಿಗೆ ಇವರನ್ನು ಕೈ ಬಿಟ್ಟದ್ದು ಮುಂದಿನ ಋತುವಿನ ತಂಡದ ಆಯ್ಕೆಯ ಬಗ್ಗೆ ಮುನ್ಸೂಚನೆ ಎನ್ನಬಹುದು.

ಕೊನೆಯದಾಗಿ 'ತಗಡು'ಗಳ ಬಗ್ಗೆ ಒಂದಷ್ಟು. ಧರ್ಮಪೂಜೆಯನ್ನು ಅತಿಯಾಗಿ ಮಾಡುತ್ತಾ, ಧರ್ಮಪ್ರಚಾರಕನಂತೆ ವರ್ತಿಸುತ್ತಾ ತನ್ನ ಆಟದ ಮೇಲೆ ಗಮನ ಕಳಕೊಂಡು ಸತತ ವೈಫಲ್ಯ ಕಾಣುತ್ತಿದ್ದರೂ, ಸತತವಾಗಿ ನೀಡಿದ ಅವಕಾಶಗಳನ್ನು ಬಳಸಿಕೊಳ್ಳದೆ ಕಡೆಗೆ ನಿರ್ದಯವಾಗಿ ತಂಡದಿಂದ ಕಿತ್ತೊಗೆಯಲ್ಪಟ್ಟದ್ದು ಬ್ಯಾರಿಂಗ್ಟನ್ ರೋಲಂಡ್ ಅವರ ದುರಾದೃಷ್ಟ. ದೆಹಲಿ ವಿರುದ್ಧದ ಪಂದ್ಯಕ್ಕೆ ಅರ್ಹತೆಯುಳ್ಳ ರಿಯಾನ್ ನಿನಾನ್ ಬದಲು ತಂಡಕ್ಕೆ ಉದಿತ್ ಪಟೇಲನನ್ನು ಆಯ್ಕೆ ಮಾಡಿದ್ದು ಕೆ.ಎಸ್.ಸಿ.ಎ ಯಲ್ಲಿ ಪ್ರಕ್ಷ್ಯುಬ್ಧ ವಾತಾವರಣವನ್ನು ಏರ್ಪಡಿಸಿತ್ತು. ಬೃಜೇಶ್ ಪಟೇಲ್ ತನ್ನ ಮಗನನ್ನು ಆಯ್ಕೆ ಮಾಡಿಸಲು ಸಫಲರಾದರೆ, ನರಸಿಂಹರಾಜ ಒಡೆಯರ್ 'ಅನ್ಯಾಯ' ಎಂದು ಚೀರಾಡುತ್ತಿದ್ದರು. ಕಡೆಗೂ ಉದಿತ್ ಅವರನ್ನು ಅಂತಿಮ ಹನ್ನೊಂದರಲ್ಲಿ ಆಡಿಸಲಿಲ್ಲ. ಅತ್ತ ಸ್ಟುವರ್ಟ್ ಬಿನ್ನಿಗೆ ತನ್ನ ನಿಜವಾದ ಅರ್ಹತೆ ಏನೆಂಬುದು ಕೊನೆಗೂ ಅರಿವಾಗಿರಬಹುದು. ಇಂಡಿಯನ್ ಕ್ರಿಕೆಟ್ ಲೀಗ್ ಸೇರಿ ಕರ್ನಾಟಕ ತಂಡಕ್ಕೆ ಪುಣ್ಯ ಮಾಡಿದ ಈ ಅಸಾಮಿಯನ್ನು, ಇಂಡಿಯನ್ ಕ್ರಿಕೆಟ್ ಲೀಗ್ ನಲ್ಲಿ ಒಂದು ಪಂದ್ಯದಲ್ಲೂ ಆಡಿಸಲಿಲ್ಲ. ಚಿನ್ನಸ್ವಾಮಿ ಕ್ರೀಡಾಂಗಣದ ಕಸ ಗುಡಿಸುವ ಅರ್ಹತೆ ಇಲ್ಲದಿದ್ದರೂ ಬರೀ 'ರೋಜರ್ ಬಿನ್ನಿ ಮಗ' ಎಂಬ ಆಧಾರದಲ್ಲೇ ಕರ್ನಾಟಕ ತಂಡದ ಅಂತಿಮ ಹನ್ನೊಂದರಲ್ಲಿ ಆಡಿಬಿಡುತ್ತಿದ್ದ. ಈ ಅನಿಷ್ಟ ಅತ್ತ ತೊಲಗಿದ್ದು ಕನ್ನಡಿಗರ ಪುಣ್ಯ. ಒಬ್ಬ ಉದಿತ್ ಕೂಡಾ ಆ ಕಡೆ ಹೋಗಿಬಿಡುತ್ತಿದ್ದರೆ ಉಳಿದ ಪ್ರತಿಭಾವಂತ ಯುವ ಕ್ರಿಕೆಟಿಗರು ನಿಟ್ಟುಸಿರು ಬಿಡುತ್ತಿದ್ದರು. ರಿಯಾನ್ ನಿನಾನ್ ಅಂತೂ 'ಎವ್ರಿಡೇ ಈಸ್ ಕ್ರಿಸ್ಮಸ್' ಎಂದು ಹಬ್ಬ ಆಚರಿಸುತ್ತಿದ್ದರೇನೊ!

ಬುಧವಾರ, ಡಿಸೆಂಬರ್ 26, 2007

ಜಲಧಾರೆಯೊಂದರ ಮರಣ

ಅರವಿಂದ್ ಅವರ ಬ್ಲಾಗ್-ನಲ್ಲಿ ಈ 'ಪೋಸ್ಟ್' ಓದಿಬಿಡಿ.

ಭಾನುವಾರ, ಡಿಸೆಂಬರ್ 09, 2007

ಕರ್ನಾಟಕ ಕ್ರಿಕೆಟ್ ೮ - ಮುಲೆವಾ ಧಾರ್ಮಿಚಂದ್


ರಾಜಸ್ಥಾನದಿಂದ ವಲಸೆ ಬಂದು ಬೆಂಗಳೂರಿನಲ್ಲಿ ಬದುಕು ಕಂಡುಕೊಂಡ ಎರಡನೇ ತಲೆಮಾರಿನ ಹುಡುಗ ಧಾರ್ಮಿಚಂದ್. ೧೫ನೇ ವಯಸ್ಸಿನಲ್ಲೇ ಅಂಡರ್-೧೯ ಭಾರತ ತಂಡವನ್ನು ಪ್ರತಿನಿಧಿಸಿ ಎದುರಾಳಿ ತಂಡಗಳನ್ನು ತನ್ನ ಮಾಂತ್ರಿಕ ಆಫ್ ಸ್ಪಿನ್ ದಾಳಿಯಲ್ಲಿ ನುಚ್ಚುನೂರು ಮಾಡಿದವರು ಧಾರ್ಮಿಚಂದ್. ಕರ್ನಾಟಕದ ಪರವಾಗಿ ಎಲ್ಲಾ ವಯೋಮಿತಿಯ ತಂಡಗಳಲ್ಲಿ ಆಡಿದ ಧಾರ್ಮಿಚಂದ್ ಭರ್ಜರಿ ಯಶಸ್ಸು ಕಂಡರು. ಯಾವುದೇ ತರಹದ ಪಿಚ್ ಇರಲಿ, ಅವುಗಳ ಮೇಲೆ ಧಾರ್ಮಿಚಂದ್ ಪಡೆಯುತ್ತಿದ್ದ ಸ್ಪಿನ್ ಕಂಡು ಈರಪ್ಪಳ್ಳಿ ಪ್ರಸನ್ನ ನಿಬ್ಬೆರಗಾಗಿದ್ದರು. ಈ ಹುಡುಗನಿಗೆ ಸರಿಯಾದ ಮಾರ್ಗದರ್ಶನ ಸಿಕ್ಕರೆ ಉಜ್ವಲ ಭವಿಷ್ಯವಿದೆ ಎಂದು ಈರಪ್ಪಳ್ಳಿ ಪ್ರಸನ್ನ ೧೯೯೯ನೇ ಇಸವಿಯಲ್ಲಿ ನುಡಿದಿದ್ದರು. ಅಲ್ಲೇ ಆದದ್ದು ಎಡವಟ್ಟು. ಸರಿಯಾದ ಮಾರ್ಗದರ್ಶನವೆಂಬುವುದು ಧಾರ್ಮಿಚಂದ್-ಗೆ ಮರೀಚಿಕೆಯಾಗಿಯೇ ಉಳಿಯಿತು.

೨೦೦೦-೦೧ ಋತುವಿನಲ್ಲಿ ೧೬ನೇ ವಯಸ್ಸಿನಲ್ಲೇ ಕರ್ನಾಟಕದ ಪರವಾಗಿ ತನ್ನ ಚೊಚ್ಚಲ ಪಂದ್ಯವನ್ನಾಡಿದ ಧಾರ್ಮಿ, ಯಶಸ್ಸು ಕಾಣಲಿಲ್ಲ. ೨೦೦೦-೦೧ ಮತು ೨೦೦೧-೦೨ ಋತುಗಳಲ್ಲಿ ಕೇವಲ ೫ ಪಂದ್ಯಗಳಲ್ಲಿ ಧಾರ್ಮಿಯನ್ನು ಆಡಿಸಲಾಯಿತು. ಈ ೫ ಪಂದ್ಯಗಳಲ್ಲಿ ಒಟ್ಟಾರೆ ೭೦ರಷ್ಟು ಓವರ್-ಗಳನ್ನು ಮಾತ್ರ ಎಸೆದು ಕೇವಲ ೨ ವಿಕೆಟ್ ಗಳಿಸಿದ ಸಾಧನೆ ಯುವ ಆಟಗಾರ ಧಾರ್ಮಿಚಂದ್ ಅವರದ್ದು. ಈ ವೈಫಲ್ಯದಿಂದ ಎದೆಗುಂದಿದ ಧಾರ್ಮಿಗೆ ಸರಿಯಾದ ಮಾರ್ಗದರ್ಶನ ಎಲ್ಲೂ ದೊರೆಯಲಿಲ್ಲ.

ನಂತರ ತಂಡದಿಂದ ಹೊರಬಿದ್ದ ಧಾರ್ಮಿ ಮತ್ತೆ ಆಯ್ಕೆಯಾಗಲಿಲ್ಲ. ಕರ್ನಾಟಕ ಕಿರಿಯರ ತಂಡಗಳಲ್ಲಿ ಆಡಿ ವಿಕೆಟ್-ಗಳನ್ನು ಸೂರೆಗೊಳ್ಳುವುದನ್ನು ಮುಂದುವರೆಸಿದರು. ಅಯ್ಕೆಗಾರರು ಎರಡನೇ ಅವಕಾಶವನ್ನು ಮಾತ್ರ ನೀಡಲಿಲ್ಲ. ನಿಧಾನವಾಗಿ ಕಿರಿಯರ ತಂಡದಿಂದಲೂ ಧಾರ್ಮಿಚಂದ್ ಅವರನ್ನು ದೂರವಿಡಲಾಯಿತು. ಇಲ್ಲೇನಾಯಿತು ಎಂದು ನನಗೆ ತಿಳಿಯದು. ಆದರೆ ಕ್ರಿಕೆಟ್ ವಲಯದಲ್ಲಿರವ ಗೆಳೆಯರ ಪ್ರಕಾರ, ಧಾರ್ಮಿಚಂದ್-ಗಿಂತ ಕಡಿಮೆ ಅರ್ಹತೆಯಿರುವ ಕೆಲವು ಆಟಗಾರರಿಗೆ ಶಿಫಾರಸಿನ ಮೂಲಕ ಕರ್ನಾಟಕ ಕಿರಿಯರ ತಂಡಕ್ಕೆ ಆಯ್ಕೆ ಮಾಡಲಾಯಿತು. ಧಾರ್ಮಿಯನ್ನು ಹೊರಗಿಡಲಾಯಿತು. ರಣಜಿ ತಂಡಕ್ಕೆ ಆಡುವ ಅವಕಾಶ ಸಿಕ್ಕಿದಾಗ ವೈಫಲ್ಯ ಕಂಡು ಮತ್ತೆ ಆಯ್ಕೆಯಾಗುವ ತವಕದಲ್ಲಿದ್ದ ಧಾರ್ಮಿಗೆ ಕಿರಿಯರ ತಂಡದಿಂದ ಕೈಬಿಟ್ಟದ್ದು ಎಷ್ಟು ದೊಡ್ಡ 'ಶಾಕ್' ಕೊಟ್ಟಿತೆಂದರೆ, ಅವರು ಕ್ರಿಕೆಟ್ ಆಡುವುದನ್ನೇ ಬಿಟ್ಟುಬಿಟ್ಟರೆ!

ಯೆರೆ ಗೌಡ ಕೂಡಾ ಇಂತಹದೇ ಸನ್ನಿವೇಶ ಎದುರಾದಾಗ, ಎದೆಗುಂದದೆ ಕರ್ನಾಟಕಕ್ಕೆ ನಮಸ್ಕಾರ ಹೇಳಿ ರೈಲ್ವೇಸ್ ಪರವಾಗಿ ಆಡುವ ನಿರ್ಧಾರ ಮಾಡಿ ಯಶಸ್ಸನ್ನು ಕಂಡರು. ಆದರೆ ಧಾರ್ಮಿ ನೊಂದು ಕ್ರಿಕೆಟ್ ಬಿಟ್ಟೇಬಿಟ್ಟರು. ಆಯ್ಕೆ ಪ್ರಕ್ರಿಯೆಯಲ್ಲಿ ಮನೆ ಮಾಡಿರುವ ರಾಜಕೀಯ, ಶಿಫಾರಸು ಹೀಗೆ ಇನ್ನೆಷ್ಟು ಪ್ರತಿಭೆಗಳನ್ನು ನಾಶ ಮಾಡಿದೆಯೋ ಲೆಕ್ಕವಿಲ್ಲ. ಮನನೊಂದ ಧಾರ್ಮಿ, ನಂತರ ಸಿಂಗಾಪುರ್ ಕ್ರಿಕೆಟ್ ಸಂಸ್ಥೆ ತನ್ನ ದೇಶದಲ್ಲಿ ಕ್ರಿಕೆಟ್ ಆಟವನ್ನು ಅಭಿವೃದ್ಧಿಪಡಿಸಲು ಕೋಚ್/ಪ್ಲೇಯರ್ ಗಳನ್ನು ಹುಡುಕುತ್ತಿರುವಾಗ, ಸಂದರ್ಶನಕ್ಕೆ ಹಾಜರಾಗಿ ಆಯ್ಕೆಯಾದರು. ಹೀಗೆ ಆಯ್ಕೆಯಾದ ಧಾರ್ಮಿಚಂದ್ ಅವರನ್ನು ಸಿಂಗಾಪುರ ಕ್ರಿಕೆಟ್ ಸಂಸ್ಥೆ ಕೋಚಿಂಗ್-ನಲ್ಲಿ ಹೆಚ್ಚಿನ ತರಬೇತಿಗಾಗಿ ಆಸ್ಟ್ರೇಲಿಯಾಗೆ ಕಳಿಸಿತು. ತನ್ನ ೨೦ನೇ ವಯಸ್ಸಿನಲ್ಲೇ ಧಾರ್ಮಿಚಂದ್, ಸಿಂಗಾಪುರ ಕ್ರಿಕೆಟ್ ತಂಡದ ಕೋಚ್! ಹಣ ಮತ್ತು ಹೆಸರು ಎರಡೂ ಸಿಕ್ಕವು ಧಾರ್ಮಿಚಂದ್-ಗೆ, ಆದರೆ ಕರ್ನಾಟಕಕ್ಕೆ ಕೇವಲ ನಷ್ಟ ಮಾತ್ರ.

ಬುಧವಾರ, ಡಿಸೆಂಬರ್ 05, 2007

ನಾ ಕಂಡಂತೆ 'ಕುಡ್ಲ ಕಲಾವಳಿ'


೨೨೭ ಕಲಾವಿದರು; ಐದು ಸಾವಿರಕ್ಕೂ ಅಧಿಕ ಕಲಾಕೃತಿಗಳು; ೪ ಲಕ್ಷ ರೂಪಾಯಿಗಳಷ್ಟು ಮೌಲ್ಯದ ಕಲಾಕೃತಿಗಳ ಮಾರಾಟ; ಕರಾವಳಿ ಪ್ರದೇಶವಲ್ಲದೇ ಬಾಗಲಕೋಟ, ಬದಾಮಿ, ಗುಲ್ಬರ್ಗ, ಮೂಡಿಗೆರೆ, ಬೆಂಗಳೂರು, ಮುಂಬೈ ಇಲ್ಲಿಂದಲೂ ಕಲಾವಿದರ ಆಗಮನ ಇವಿಷ್ಟು ಕಳೆದ ತಿಂಗಳು ಮಂಗಳೂರಿನಲ್ಲಿ ನಡೆದ ಕುಡ್ಲ ಕಲಾವಳಿಯ ಬಹಳ ಸಂಕ್ಷಿಪ್ತ ವಿವರ.

ಕುಡ್ಲ ಕಲಾವಳಿಯ ಮೊದಲ ದಿನ ಮುಂಜಾನೆ ೯.೩೦ಕ್ಕೆ ಉದ್ಘಾಟನ ಸಮಯಕ್ಕೆ ಸರಿಯಾಗಿ ಪತ್ನಿಯೊಡನೆ ಕದ್ರಿ ಪಾರ್ಕ್ ತಲುಪಿದಾಗ ಕಂಡದ್ದು ರಸ್ತೆಯ ಇಕ್ಕೆಲಗಳಲ್ಲಿ ಕಲಾವಿದರ ಪರದಾಟ, ಒದ್ದಾಟ ತಮ್ಮ ತಮ್ಮ ಚಿತ್ರಗಳನ್ನು ಸರಿಯಾಗಿ ಪ್ರದರ್ಶನಕ್ಕೆ ಇಡಲೋಸುಗ. ಒಂಥರಾ ವ್ಯಥೆಯಾಯಿತು. ಉರಿ ಬಿಸಿಲಿನಿಂದ ರಕ್ಷಣೆಯಿಲ್ಲದೆ ಆಚೀಚೆ ಒಡಾಡುತ್ತಿದ್ದರು ಕೆಲವರು. ಇನ್ನು ಕೆಲವರು ತಮ್ಮ ತಮ್ಮ ಚಿತ್ರಗಳನ್ನು ತೂಗುಹಾಕಿ ಬಿಸಿಲಿನಲ್ಲೇ ಕೂತಿದ್ದರು. ಕೆಲವರಿಗೆ ಮರಗಳ ನೆರಳಿನ ರಕ್ಷಣೆಯಿತ್ತು. ಕೆಲವರಿಗೆ ಆ ಭಾಗ್ಯವಿರಲಿಲ್ಲ. ಕಲಾಕೃತಿಗಳ ರಾಶಿ. ಯಾವುದನ್ನು ನೋಡುವುದೆಂದು ಗೊತ್ತಾಗುತ್ತಿರಲಿಲ್ಲ. ಆಗಲೇ 'ಫಳ್' ಎಂಬ ಸದ್ದು. ಸದ್ದು ಬಂದೆಡೆ ನೋಡಿದರೆ, ಗ್ಲಾಸ್ ಫ್ರೇಮ್ ಹಾಕಿದ ಕಲಾಕೃತಿಯೊಂದು ಕೆಳಗೆ ಬಿದ್ದು, ಫ್ರೇಮ್ ನುಚ್ಚುನೂರು. ಆ ಕಲಾವಿದನೆಡೆ ನೋಡದೇ ಮುನ್ನಡೆದೆ. ನೋಡಿದರೆ ಆತನ ಮುಖದಲ್ಲಿ ಆ ಕ್ಷಣದಲ್ಲಿ ಇರಬಹುದಾದ ನೋವನ್ನು ಸಹಿಸಲು ನನಗಾಗದು ಎಂಬ ಭಯ.


ಅಲ್ಲೇನೂ ಸರಿಯಾಗಿದ್ದಂತೆ ಕಾಣುತ್ತಿರಲಿಲ್ಲ. ಕೇವಲ ಕಲಾವಿದರು ಮಾತ್ರ ಆಚೀಚೆ ಓಡಾಡುತ್ತಿದ್ದರು. 'ಸ್ಟಾಲ್'ಗಳು ಎಲ್ಲಿವೆ ಎಂದು ಪತ್ನಿ ನನ್ನಲ್ಲಿ ಕೇಳುತ್ತಿದ್ದಳು, ನಾನು ಹುಡುಕುತ್ತಿದ್ದೆ. ಅಲ್ಲಿ 'ಸ್ಟಾಲ್'ಗಳೇ ಇರಲಿಲ್ಲ. ರಸ್ತೆಯ ಇಕ್ಕೆಲಗಳಲ್ಲಿ ಉದ್ದಕ್ಕೆ ಬಿಳಿ ಬಟ್ಟೆಯನ್ನು ಕಟ್ಟಲಾಗಿತ್ತು. ಅದಕ್ಕೆ ತಮ್ಮ ತಮ್ಮ ಕಲಾಕೃತಿಗಳನ್ನು ಜೋತುಹಾಕಿ , ಉದ್ದಕ್ಕೆ ಊಟಕ್ಕೆ ಕುಳಿತಂತೆ ಪಂಕ್ತಿಯಲ್ಲಿ ಕಲಾವಿದರು. ನೋಡಿ ಏನೇನೂ ಸಂತೋಷವಾಗಲಿಲ್ಲ. ಜಿಲ್ಲಾಧಿಕಾರಿಯವರ ಅನುಮತಿ ಪಡೆದು ಈ ರಸ್ತೆಯಲ್ಲಿ ೨ ದಿನಗಳ ಕಾಲ ವಾಹನ ಸಂಚಾರವನ್ನು ನಿಲ್ಲಿಸಲಾಗಿದ್ದರೂ, ವಾಹನಗಳು ಮಾತ್ರ ಓಡಾಡುತ್ತಲೇ ಇದ್ದವು. ಮಧ್ಯಾಹ್ನದ ಬಳಿಕ ವಾಹನಗಳ ಓಡಾಟವನ್ನು ಸಂಪೂರ್ಣವಾಗಿ ನಿಲ್ಲಿಸಲಾಯಿತು. ದಿನೇಶ್ ಹೊಳ್ಳ ಯಾವಾಗಲೂ ತಯಾರಿಯನ್ನು ಕೂಲಂಕುಷವಾಗಿ ಮಾಡುವ ಮನುಷ್ಯ. ಇಲ್ಲಿ ಅವರಿಗೆ ಯಾರೋ ಕೈ ಕೊಟ್ಟಿರಬೇಕು ಎಂದು ಯೋಚಿಸುತ್ತಾ ಮುನ್ನಡೆಯುತ್ತಿದ್ದೆ.


ಅಲ್ಲಿ ಒಂದೆಡೆ ಸಣ್ಣ ಗುಂಪು. ಅವರೆಲ್ಲಾ ನಿಂತ ಸ್ಟೈಲ್ ನೋಡಿಯೇ ತಿಳಿಯಿತು. ಹುಡುಗಿಯ ಹೆಸರನ್ನು ಹೋಲುವ ಕಲಾನಾಮವಿರುವ ಒಬ್ಬ ಕಲಾಕಾರ, 'ರೂ.೧೦೦' ಎಂಬ ಬೋರ್ಡ್ ತಗುಲಿಸಿ, ಅಲ್ಲಿ ಆಸೀನನಾಗಿ ರೂ.೧೦೦ ಕೊಟ್ಟು ತಮ್ಮ ಕಾರ್ಟೂನ್ (ಕ್ಯಾರಿಕೇಚರ್) ಬಿಡಿಸಿಕೊಳ್ಳುವ ಇಚ್ಛೆಯಿದ್ದವರಿಗೆ ಬಿಡಿಸಿಕೊಡುವುದರಲ್ಲಿ ಮಗ್ನನಾಗಿದ್ದಾನೆ ಎಂದು. ಉಳಿದ ಕಲಾಕಾರರು ಪರದಾಡುತ್ತಿದ್ದರೆ, ಈತನಿಗೆ ಅದ್ಯಾವ ಪ್ರಾಬ್ಲೆಮ್ಮೂ ಇಲ್ಲ. ಯಾರ ಕಲಾಕೃತಿಗಳು ಮಾರಾಟವಾದವೋ ನಾನರಿಯೆ ಆದರೆ ಈತನ ಕಿಸೆ ತುಂಬ ೧೦೦ರ ನೋಟುಗಳು. ಈತನೊಬ್ಬ ಉತ್ತಮ ಕಲಾವಿದ. ಯಾರದ್ದೇ ಆಗಲಿ, ನಾಲ್ಕೈದು ನಿಮಿಷಗಳಲ್ಲೇ ಕ್ಯಾರಿಕೇಚರ್ ಬಿಡಿಸಿ ಬಿಡುತ್ತಾರೆ. ವರ್ಣಶರಧಿಯಂತಹ ಮಾರಾಟಕ್ಕೆ ಆಸ್ಪದವಿರದಂತಹ, ಕೇವಲ ತಮ್ಮ ಕಲೆಯನ್ನು ಪ್ರದರ್ಶಿಸುವ ಮಂಚದಲ್ಲೂ 'ರೂ.೧೦೦' ಎಂಬ ಬೋರ್ಡ್ ತಗುಲಿಸಿ ಬಂದವರಲ್ಲಿ ಹಣ ಕೀಳಲು ಆರಂಭಿಸಿದಾಗ ದಿನೇಶ್ ಆಕ್ಷೇಪ ವ್ಯಕ್ತಪಡಿಸಲು, 'ಹ್ಹೆ ಹ್ಹೆ ನನಗೆ ಗೊತ್ತೇ ಇರಲಿಲ್ಲ...' ಎಂದು ಪೆಚ್ಚು ಪೆಚ್ಚಾಗಿ ಮೂರ್ಖ ನಗು ತೋರ್ಪಡಿಸಿದ ಆಸಾಮಿ ಈತ. ಇಲ್ಲಿ, ಕುಡ್ಲ ಕಲಾವಳಿಯಲ್ಲಿ ಅವರಿಗೆ ವರ್ಣಶರಧಿಯಲ್ಲಿದ್ದಂತಹ ನಿರ್ಬಂಧನೆಯಿರಲಿಲ್ಲ. ಜನ ಅವರನ್ನು ಮುತ್ತುತ್ತಾ ಇದ್ದರು. ಇವರು ಬಿಡಿಸುತ್ತಾ ಇದ್ದರು. ಕಿಸೆ ತುಂಬುತ್ತಾ ಇತ್ತು. ಪಕ್ಕದಲ್ಲೊಂದು ಚೀಲವಿತ್ತು. ಮರುದಿನ ಸಂಜೆಯಾಗುವಷ್ಟರಲ್ಲಿ ಅದೂ ತುಂಬಿತ್ತೇನೋ! ಮಂಗಳೂರಿನಲ್ಲೊಂದು ಜೋಕು. ಯಾವುದೇ ವೈಯುಕ್ತಿಕ ಸಭೆ ಸಮಾರಂಭಗಳಿಗೆ ಈತನನ್ನು ಆಮಂತ್ರಿಸಬಾರದು ಎಂದು. ಎಲ್ಲಾದರೂ ಆಮಂತ್ರಿಸಿದರೆ, ಅಲ್ಲೇ ಮೂಲೆಯಲ್ಲಿ 'ರೂ.೧೦೦' ಎಂದು ಬೋರ್ಡ್ ತಗುಲಿಸಿ ಈ ಮಹಾಶಯ ಆಸೀನನಾಗಿಬಿಟ್ಟರೆ?!


ಇನ್ನೂ ಮುಂದಕ್ಕೆ ಹೋದಾಗ ಅಲ್ಲಿ ಮರಳು ಶಿಲ್ಪ ಪ್ರದರ್ಶನ. ನಂತರ ಮತ್ತಷ್ಟು ಕಲಾಕೃತಿಗಳು. ಸರಿಯಾದ ವ್ಯವಸ್ಥೆಯಿರಲಿಲ್ಲ. ಪ್ರದರ್ಶನದ ಒಂದು ದಿಕ್ಕಿನಲ್ಲಂತೂ ಬಿಸಿಲಿನಿಂದ ಪಾರಾಗಲು ಸಾಧ್ಯವೇ ಇಲ್ಲದಂತಹ ಪರಿಸ್ಥಿತಿ. ಅವ್ಯವಸ್ಥೆಯ ಪರಿ ಕಂಡು ಕೆಲವು ಕಲಾವಿದರು ಭಾಗವಹಿಸದೇ ಹಿಂತಿರುಗಿದರು ಎಂದು ನಂತರ ದಿನೇಶ್ ಹೊಳ್ಳ ತಿಳಿಸಿದರು. ನಂತರ ಕದ್ರಿ ಪಾರ್ಕಿನ ಒಳಗೆ ತೆರಳಿದೆ. ಇಲ್ಲೂ ಮತ್ತಷ್ಟು ಕಲಾವಿದರು ಮತ್ತು ಕಲಾಕೃತಿಗಳು. ಅವನ್ನೆಲ್ಲಾ ನೋಡುತ್ತಾ ಸಭಾಂಗಣದತ್ತ ತೆರಳಿ ಆಸೀನನಾದೆ. ಕರ್ನಾಟಕ ಬ್ಯಾಂಕಿನ ಚೇರ್ಮನ್ ಅದೇನೋ ಮಾತನಾಡುತ್ತಿದ್ದರು. ಇತ್ತೀಚೆಗೆ ಸಿಕ್ಕಸಿಕ್ಕಲ್ಲಿ ರಿಬ್ಬನ್ ಕಟ್ ಮಾಡಲು ಇವರು ತೆರಳುವುದು ಕಡಿಮೆಯಾಗಿದೆ. ಮೊದಲೆಲ್ಲಾ ಸಣ್ಣ ಅಂಗಡಿ/ಗ್ಯಾರೇಜು ಉದ್ಘಾಟನೆಗೂ ಇವರು ತೆರಳಲು ತಯಾರು, ಆ ಅಂಗಡಿ/ಗ್ಯಾರೇಜಿನ ಖಾತೆ ಕರ್ನಾಟಕ ಬ್ಯಾಂಕಿನಲ್ಲಿದ್ದರೆ!

ಸ್ವಲ್ಪ ಸಮಯದ ಬಳಿಕ ದಿನೇಶ್ ಹೊಳ್ಳ ನನ್ನ ಬಳಿ ಬಂದು ಕುಳಿತರು. 'ಎಲ್ಲಾ ಗೊಂದಲ' ಎಂಬ ಅವರ ಎರಡೇ ಮಾತುಗಳಲ್ಲಿ ಬಹಳ ಅರ್ಥವಿತ್ತು. ಇಂತಹ ಪ್ರದರ್ಶನವನ್ನು ಆಯೋಜಿಸುವಾಗ ತಮಗೆ ವಹಿಸಿಕೊಟ್ಟ ಜವಾಬ್ದಾರಿಗಳನ್ನು ಎಲ್ಲರು ಸರಿಯಾಗಿ ನಿರ್ವಹಿಸಿದರೆ ಎಲ್ಲವೂ ಸರಿಯಾಗಿರುತ್ತದೆ. ಆದರೆ ದಿನೇಶ್ ಮತ್ತು ಇನ್ನು ೪ ಜನರನ್ನು ಬಿಟ್ಟರೆ ಉಳಿದವರೆಲ್ಲಾ ಬರೀ ಮಾತುಗಾರರು. ಸತತವಾಗಿ ೪ ದಿನ ರಾತ್ರಿಯಿಡೀ ಕೆಲಸ ಮಾಡಿದ ದಿನೇಶ್, ನನ್ನಲ್ಲಿ ಮಾತನಾಡುತ್ತಾ ಅಲ್ಲೇ ನಿದ್ರಾವಶರಾಗಿಬಿಟ್ಟಿದ್ದರು. 'ಅಡವಿಯ ನಡುವೆ' ಮತ್ತು 'ವರ್ಣಶರಧಿ' ಎಂಬ ಯಶಸ್ವಿ ಕಾರ್ಯಕ್ರಮಗಳನ್ನು ನಿರ್ವಹಿಸಿದ್ದೇ ದಿನೇಶರಿಗೆ ಮುಳುವಾಗಿಹೋಯಿತು. ಆಯಾ ಜವಾಬ್ದಾರಿಯನ್ನು ಹೊತ್ತ ಪ್ರತಿಯೊಬ್ಬರು, ಹೇಗೂ ದಿನೇಶರಿಗೆ ಇಂತಹ ಕಾರ್ಯಕ್ರಮಗಳನ್ನು ಸಂಘಟಿಸಿದ ಅನುಭವವಿದೆಯಲ್ಲ ಎಂದು, ತಮ್ಮ ತಮ್ಮ ಕೆಲಸಗಳನ್ನು ಸ್ವಲ್ಪ ಸ್ವಲ್ಪ ಮಾಡಿ ನಿಧಾನವಾಗಿ ಜಾಗ ಖಾಲಿ ಮಾಡಿದರು. ಕೊನೆಗೆ ಉಳಿದದ್ದು ದಿನೇಶ್ ಸೇರಿದಂತೆ ೫ ಮಂದಿ. ೫ ಮಂದಿ ಎಷ್ಟು ತಾನೆ ಮಾಡಿಯಾರು?


ಆ ದಿನ ಹೆಚ್ಚಿನ ಸಂಖ್ಯೆಯಲ್ಲಿ ಬುದ್ಧಿವಂತರು (ಕರಾವಳಿಯ ಜನತೆ) ಪ್ರದರ್ಶನಕ್ಕೆ ಆಗಮಿಸಲಿಲ್ಲ. ಎರಡನೇ ದಿನ ಅಂದರೆ ಆದಿತ್ಯವಾರ ಸಂಜೆ ಹೊತ್ತಿಗೆ ಸುಮಾರು ಜನ ಸೇರಿದ್ದರು. ಇಲ್ಲಿ ಉದಯವಾಣಿಗೆ ಏನು ಹೇಳಬೇಕೆಂದು ತೋಚುತ್ತಿಲ್ಲ. ಕರಾವಳಿಯ ಪ್ರಮುಖ ದಿನಪತ್ರಿಕೆಯಾಗಿ, ಕುಡ್ಲ ಕಲಾವಳಿಯ ಬಗ್ಗೆ ಸಮಗ್ರ ಸುದ್ದಿಯನ್ನು ಪ್ರಕಟಿಸಿ, ಜನರಿಗೆ ಮಾಹಿತಿ ತಲುಪಿಸಲು ಉದಯವಾಣಿ ಆಸಕ್ತಿ ತೋರಿಸಲಿಲ್ಲ. ಮಾಧ್ಯಮ ಪ್ರಾಯೋಜಕರಾಗುವಂತೆ ವಿನಂತಿಸಿದರೆ, ಸರಿಯಾದ ಉತ್ತರ ನೀಡದೆ ಕೊನೇ ಕ್ಷಣದವರೆಗೆ ನಿರ್ಧಾರ ತಗೊಳ್ಳದೆ, ಕುಡ್ಲ ಕಲಾವಳಿಯ ಆಯೋಜಕರನ್ನು ಕಾಡಿಸಿ, ಕೊನೆಗೆ 'ಬೊಡ್ಚಿ' ಎಂದು ನಿರಾಕರಿಸಿದ ಪತ್ರಿಕೆ ಈ ಉದಯವಾಣಿ. ಮಾಧ್ಯಮ ಪ್ರಾಯೋಜಕರಾಗದಿದ್ದರೂ ಪರವಾಗಿಲ್ಲ, ನಾಲ್ಕೈದು ದಿನ ಮೊದಲಿನಿಂದಲೇ ಕುಡ್ಲ ಕಲಾವಳಿಯ ಬಗ್ಗೆ ಸುದ್ದಿ ಪ್ರಕಟಿಸಿದ್ದರೆ ಕೆಲವು ಬಡ ಕಲಾವಿದರಿಗೆ ಪ್ರಯೋಜನವಾದರೂ ಆಗುತ್ತಿತ್ತು. ಅದನ್ನೂ ಮಾಡಲಿಲ್ಲ ಉದಯವಾಣಿ. ಒಳಗಿನ ಪುಟದಲ್ಲೆಲ್ಲೋ ಸಂಕ್ಷಿಪ್ತವಾಗಿ ಕುಡ್ಲ ಕಲಾವಳಿಯ ಬಗ್ಗೆ ಸುದ್ದಿ ಪ್ರಕಟಿಸಿ, 'ರಿಕ್ಷಾ ಪಲ್ಟಿ' ಮತ್ತು 'ಮನೆಯಾಕೆಯ ತಾಳಿ ಕೆಲಸದಾಕೆಯ ಕೊರಳಿನಲ್ಲಿ' ಎಂಬ ಸುದ್ದಿಗಳನ್ನು ದಪ್ಪಕ್ಷರಗಳಲ್ಲಿ ಪ್ರಕಟಿಸಿ ತನ್ನ ಲೆವೆಲ್ ಏನು ಎಂಬುದನ್ನು ಉದಯವಾಣಿ ತೋರ್ಪಡಿಸಿತು. ಸ್ವಂತ ನಿಲುವಿಲ್ಲದ (ಸಂಪಾದಕೀಯ) ಪತ್ರಿಕೆಯಿಂದ ಮತ್ತೇನನ್ನು ತಾನೆ ನಿರೀಕ್ಷಿಸಬಹುದು?

"ಪ್ರಥಮ ಪ್ರಯತ್ನ. ಬಹಳ ವಿಷಯಗಳು ತಿಳಿದವು. ಪ್ರಶಂಸೆಯ ಮಾತುಗಳಿದ್ದರೂ, ಸಹಜವಾಗಿಯೇ ದೂರುಗಳೇ ಹೆಚ್ಚಿದ್ದವು. ಯಾರು ಮಾತನಾಡುತ್ತಾರೆ ಮತ್ತು ಯಾರು ಕೆಲಸ ಮಾಡುತ್ತಾರೆ ಎಂದು ಈಗ ಚೆನ್ನಾಗಿ ತಿಳಿದಿದೆ. ಮುಂದಿನ ಸಲ ಮತ್ತೆ ಕುಡ್ಲ ಕಲಾವಳಿ ಮಾಡಬೇಕು .... ಯಾವ ದೂರಿಗೂ ಆಸ್ಪದವಿಲ್ಲದಂತೆ" ಎಂಬುದು ದಿನೇಶ್ ಹೊಳ್ಳರ ಮಾತು.

ಗುರುವಾರ, ನವೆಂಬರ್ 29, 2007

ಕರ್ನಾಟಕ ಕ್ರಿಕೆಟ್ ೭ - ಮಿಥುನ್ ಬೀರಾಲ


ಆರಂಭಿಕ ಆಟಗಾರನಾಗಿ ೬೦ರ ದಶಕದ ಕೊನೆಯಲ್ಲಿ ಮತ್ತು ೭೦ರ ದಶಕದ ಆರಂಭದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿದ್ದ ಮಾಜಿ ರಣಜಿ ಆಟಗಾರ ರಘುನಾಥ್ ಬೀರಾಲ ಇವರ ಮಗನೇ ಮಿಥುನ್. ಸಾಧಾರಣ ಮಟ್ಟದ ಆರಂಭಿಕ ಆಟಗಾರನಾಗಿರುವ ಮಿಥುನ್, ತನ್ನ ಚೊಚ್ಚಲ ರಣಜಿ ಪಂದ್ಯವನ್ನಾಡಿದ್ದು ೧೯೯೯-೨೦೦೦ ಋತುವಿನಲ್ಲಿ. ತನ್ನ ನೈಜ ಪ್ರತಿಭೆಯ ಬಲಕ್ಕಿಂತಲೂ ಹೆಚ್ಚಾಗಿ ತಂದೆಗೆ ಕೆ.ಎಸ್.ಸಿ.ಎ ಯಲ್ಲಿರುವ 'ಇನ್-ಫ್ಲುಯನ್ಸ್' ನಿಂದ ತಂಡಕ್ಕೆ ಬಂದವರು ಮಿಥುನ್. ಆಯ್ಕೆಗಾರರು ಎಡವಿದ್ದೇ ಇಲ್ಲಿ. ಪ್ರತಿಭೆಯುಳ್ಳ ಆಟಗಾರರಾದ ಸುಧೀಂದ್ರ ಶಿಂದೆ ಮತ್ತು ಶ್ಯಾಮ್ ಪೊನ್ನಪ್ಪ ಇವರುಗಳು ಮತ್ತಷ್ಟು ಕಾಯುವಂತಾಯಿತು.

ಮಿಥುನ್ ಬಹಳ ಕೆಟ್ಟದಾಗಿ ಆಡಲಿಲ್ಲ. ಆದರೆ ನಿರೀಕ್ಷಿತ ಮಟ್ಟಕ್ಕೆ ಅವರ ಆಟ ಬೆಳೆಯಲೂ ಇಲ್ಲ. ೯೯-೨೦೦೦, ೨೦೦೦-೦೧ ಋತುಗಳ ಎಲ್ಲಾ ಪಂದ್ಯಗಳನ್ನು ಮಿಥುನ್ ಆಡಿದರು. ತನ್ನ ಚೊಚ್ಚಲ ಋತುವಿನಲ್ಲಿ ಮಿಥುನ್ ಚೆನ್ನಾಗಿಯೇ ಆಡಿದರು. ಪ್ರಥಮ ಪಂದ್ಯದಲ್ಲೇ ಅಂಧ್ರದ ವಿರುದ್ಧ ೮೩ ಮತ್ತು ೯೪ ಓಟಗಳನ್ನು ಗಳಿಸಿದರು. ಚೊಚ್ಚಲ ಋತುವನ್ನು ೫೧.೪೧ ಸರಾಸರಿಯಲ್ಲಿ ೬೧೭ ಓಟಗಳೊಂದಿಗೆ ಮುಗಿಸಿದರು. ದುರ್ಬಲ ತಂಡಗಳ ವಿರುದ್ಧ ಚೆನ್ನಾಗಿ ಆಡುತ್ತಿದ್ದ ಮಿಥುನ್, ಬಲಶಾಲಿ ತಂಡಗಳ ವಿರುದ್ಧ ಮುಗ್ಗರಿಸುತ್ತಿದ್ದರು. ಒತ್ತಡವಿದ್ದಾಗ ಅವರ ದಾಂಡಿನಿಂದ ಓಟಗಳೇ ಬರುತ್ತಿರಲಿಲ್ಲ. ನಂತರದ ಋತುವಿನಲ್ಲಿ ಮಿಥುನ್ ತುಂಬಾ ಕಳಪೆಯಾಗಿ ಆಡಿದರು. ಆದರೂ ಕರ್ನಾಟಕದ ಪರವಾಗಿ ೨ ಋತುಗಳಲ್ಲಿ ಆಡಿದ ಮಿಥುನ್ ಸರಾಸರಿ ಮಾತ್ರ ೩೬ ರಷ್ಟಿತ್ತು. ಕರ್ನಾಟಕಕ್ಕೆ ಉತ್ತಮ ಆರಂಭವೂ ದೊರೆಯುತ್ತಿತ್ತು ಆದರೆ ಇದರ ಹಿಂದೆ ಅರುಣ್ ಕುಮಾರ್ ಅವರ ಯೋಗದಾನ ಹೆಚ್ಚು ಇರುತ್ತಿತ್ತು. ಈ ಎರಡೂ ಋತುಗಳಲ್ಲಿ ಕರ್ನಾಟಕ ತಂಡದ ಮ್ಯಾನೇಜರ್ ಆಗಿದ್ದವರು ರಘುನಾಥ್ ಬೀರಾಲ.

ರಘುನಾಥ್ ಬೀರಾಲರವರು ಎಲ್ಲಾ ಕಡೆ ಓಡಾಡಿ, ಬೇಕಾದೆಲ್ಲೆಡೆ ಮಾತಾಡಿ, ಅವಶ್ಯವಿದ್ದವರನ್ನು ಪುಸಲಾಯಿಸಿ ಮಗ ರಾಜ್ಯ ತಂಡಕ್ಕೆ ಆಯ್ಕೆಯಾಗುವುದನ್ನು ಖಾತ್ರಿಪಡಿಸಿದ್ದರು. ಬಡಪಾಯಿ ಸುಜಿತ್ ಸೋಮಸುಂದರ್ ಜಾಗ ಖಾಲಿಮಾಡಬೇಕಾಯಿತು. ಹಾಗೆ ನೋಡಿದರೆ ಸುಜಿತ್ ಆ ವೇಳೆಯಲ್ಲಿ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದರು. ಬಟ್ ಎಟ್ ಎನಿ ಗಿವನ್ ಟೈಮ್, ಸುಜಿತ್ ಸೋಮಸುಂದರ್ ಮಿಥುನ್ ಬೀರಾಲಕ್ಕಿಂತ ಒಳ್ಳೆಯ ಆಟಗಾರನಾಗಿದ್ದರು.

ಕರ್ನಾಟಕ ೧೯೯೮-೯೯ ರಣಜಿ ಟ್ರೋಫಿ ಗೆದ್ದ ಋತುವಿನಲ್ಲಿ ತಂಡದಲ್ಲಿದ್ದರೂ ಒಂದೇ ಒಂದು ಪಂದ್ಯವನ್ನು ಮಿಥುನ್ ಆಡಿರಲಿಲ್ಲ. ಮಿಥುನ್ ಸ್ವಭಾವದಿಂದ ಬಹಳ ಸೌಮ್ಯ ವ್ಯಕ್ತಿ. ಅಪ್ಪನಿಗಿರುವ ಜಂಭ, ಕೊಬ್ಬು ಮತ್ತು ಸೊಕ್ಕು ಮಗನಿಗಿಲ್ಲ. ಆದರೆ ಅಪ್ಪನ ಪ್ರಭಾವೀ ಸಂಪರ್ಕಗಳಿಂದ ತಂಡದಲ್ಲಿ ಸ್ಥಾನ ಗಿಟ್ಟಿಸಿದ್ದ ಮಿಥುನ್ ಗೆ ಸಹ ಆಟಗಾರರಿಂದ ಸಿಗುವ ಗೌರವ ಅಷ್ಟರಲ್ಲೇ ಇತ್ತು, ಎಷ್ಟೇ ಚೆನ್ನಾಗಿ ಆಡಿದರೂ! ತಾನು ತನ್ನ ಪ್ರಥಮ ಋತುವಿನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ತನ್ನ ಬಗ್ಗೆ ಸಹ ಆಟಗಾರರಿಗಿದ್ದ ಅಸಹನೆ ಮಿಥುನ್ ಆಟದಲ್ಲಿ ಮುಂದಿನ ಋತುವಿನಲ್ಲಿ ಕಾಣಬಂತು. ಈ ಋತುವಿನಲ್ಲಿ ಮಿಥುನ್ ತುಂಬಾನೇ ಕಳಪೆಯಾಗಿ ಆಡಿದರು. ಮೊದಲಿದ್ದ ಆತ್ಮವಿಶ್ವಾಸ ಅವರ ಆಟದಲ್ಲಿ ನಂತರ ಬರಲೇ ಇಲ್ಲ. ತನ್ನ ನೈಜ ಆಟ ಪ್ರದರ್ಶಿಸುವುದರಲ್ಲಿ ಮಿಥುನ್ ಸಂಪೂರ್ಣವಾಗಿ ವಿಫಲರಾದರು.
ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಮಿಥುನ್ ಒಬ್ಬ ಭರವಸೆಯ ಆರಂಭಿಕ ಆಟಗಾರನಾಗಿದ್ದರು. ಮಲ್ಲೇಶ್ವರಂ ಜಿಮ್ಖಾನದ ಪರವಾಗಿ ಇನ್ನೊಂದೆರಡು ಋತುಗಳನ್ನು ಅವರು ಆಡಿದ್ದರೆ ತಾನಾಗಿಯೇ ಕರ್ನಾಟಕ ತಂಡಕ್ಕೆ ಆಯ್ಕೆಯಾಗುತ್ತಿದ್ದರೇನೋ. ಆದರೆ ರಘುನಾಥ್ ಬೀರಾಲ ದುಡುಕಿಬಿಟ್ಟರು. ಮಗನಿಗೆ ತನ್ನ ಆಟವನ್ನು ಇನ್ನಷ್ಟು ಸುಧಾರಿಸುವ ಅವಕಾಶ ನೀಡದೆ ತನ್ನ ಸಂಪರ್ಕಗಳನ್ನು ಬಳಸಿ ಕರ್ನಾಟಕಕ್ಕಾಗಿ ಆಡಿಸಿದರು. ಸಹಜವಾಗಿಯೇ ಮಿಥುನ್ ಹೆಚ್ಚು ದಿನ ಆಡಲಾಗಲಿಲ್ಲ. ಸ್ವಲ್ಪ ಸಂಯಮ ರಘುನಾಥ್ ರಿಗಿದ್ದಿದ್ದರೆ ಕರ್ನಾಟಕಕ್ಕೆ ಒಬ್ಬ ಉತ್ತಮ ಆರಂಭಿಕ ಆಟಗಾರ ಸಿಗುತ್ತಿದ್ದನೇನೊ. ಯಾವ್ಯಾವ ರೀತಿಯಲ್ಲಿ ಪ್ರತಿಭಾವಂತ ಆಟಗಾರರನ್ನು ಕರ್ನಾಟಕ ಕಳೆದುಕೊಳ್ಳುತ್ತಿದೆ ಎಂಬುದಕ್ಕೆ ಇದು ಮತ್ತೊಂದು ಉದಾಹರಣೆ.

ಆದರೆ ಮಿಥುನ್ ಅದೃಷ್ಟ ಹೆಚ್ಚು ದಿನ ಓಡಲಿಲ್ಲ. ೨೦೦೨-೦೩ ಋತುವಿನಲ್ಲಿ ಅವರು ಆಯ್ಕೆಯಾಗಲಿಲ್ಲ. ನಂತರವೂ ಇದುವರೆಗೆ ಅವರು ಕರ್ನಾಟಕಕ್ಕಾಗಿ ಆಯ್ಕೆಯಾಗಿಲ್ಲ. ರಘುನಾಥ್ ಬೀರಾಲ ಎಲ್ಲಾ ಪ್ರಯತ್ನವನ್ನೂ ಮಾಡಿದರು ಮತ್ತು ಛಲ ಬಿಡದೆ ಇನ್ನೂ ಮಾಡುತ್ತಾ ಇದ್ದಾರೆ ಆದರೆ ಸತತ ವೈಫಲ್ಯವನ್ನು ಅನುಭವಿಸುತ್ತಿದ್ದ ಆಟಗಾರರು ಯಾರೂ ಇರಲಿಲ್ಲವಲ್ಲ!

೨೦೦೫-೦೬ ಋತುವಿನಲ್ಲಿ ರಘುನಾಥ್, ಮಗನನ್ನು ಪ್ಲೇಟ್ ಲೀಗ್-ನ ರನ್ನರ್ಸ್ ಅಪ್ ಆದ ರಾಜಸ್ಥಾನದ ಪರವಾಗಿ ಆಡಿಸಿದರು. ಕೊನೆಯ ಲೀಗ್ ಪಂದ್ಯ, ಪ್ಲೇಟ್ ಸೆಮಿ ಫೈನಲ್ ಮತ್ತು ಪ್ಲೇಟ್ ಫೈನಲ್ ಹೀಗೆ ೩ ಪಂದ್ಯಗಳಲ್ಲಿ ಮಿಥುನ್ ಆಡಿದರು. ಗಳಿಸಿದ್ದು ೨೭.೨೫ ಸರಾಸರಿಯಲ್ಲಿ ೧೦೯ ಓಟಗಳನ್ನು. ಕಳೆದ ಋತುವಿನಲ್ಲಿ (೨೦೦೬-೦೭) ರಾಜಸ್ಥಾನದ ಪರವಾಗಿ ಆಡಲು ಇಂಗ್ಲಂಡ್ ನಿಂದ ವಿಕ್ರಮ್ ಸೋಳಂಕಿ ಆಗಮಿಸಿದ್ದರಿಂದ ಮಿಥುನ್ ಮಲ್ಲೇಶ್ವರಂ ಜಿಮ್ಖಾನಕ್ಕೆ ಹಿಂತಿರುಗಬೇಕಾಯಿತು.

ಪ್ರಸಕ್ತ ಋತುವಿನಲ್ಲಿ ಮಿಥುನ್, ಹರ್ಯಾನದ ಪರವಾಗಿ ಆಡುತ್ತಿದ್ದಾರೆ. ಕಳೆದ ಋತುವಿನಲ್ಲಿ ಉದಯಪುರದಲ್ಲೊಂದು ಪಂದ್ಯ ನಡೆಯಿತು. ಪ್ಲೇಟ್ ಲೀಗ್ ನ ಕೊನೆಯ ಸುತ್ತಿನ ಪಂದ್ಯಗಳಲ್ಲೊಂದು ಪಂದ್ಯವಾಗಿತ್ತು ಇದು. ರಾಜಸ್ಥಾನದ ಎದುರಾಳಿ ಅಸ್ಸಾಮ್. ರಾಜಸ್ಥಾನದ ಪರವಾಗಿ ಆಡುತ್ತಿದ್ದರು ಕರ್ನಾಟಕದ ಮಾಜಿ ಆರಂಭ ಆಟಗಾರ ಮಿಥುನ್ ಬೀರಾಲ. ಅಸ್ಸಾಮ್ ಪರವಾಗಿ ಆಡುತ್ತಿದ್ದರು ಕರ್ನಾಟಕದ ಮತ್ತೊಬ್ಬ ಮಾಜಿ ಆರಂಭ ಆಟಗಾರ ಅರುಣ್ ಕುಮಾರ್. ಈ ಪಂದ್ಯದ ಮ್ಯಾಚ್ ರೆಫ್ರೀ ಯಾರಾಗಿದ್ದರು ಗೊತ್ತೇ? ಅವರ ಹೆಸರು ರಘುನಾಥ್ ಬೀರಾಲ! ಮಿಥುನ್ ಮತ್ತು ಅರುಣ್ ೨ ಋತುಗಳಲ್ಲಿ ಕರ್ನಾಟಕದ ಆರಂಭಿಕ ಆಟಗಾರರಾಗಿ ಜೊತೆಯಾಗಿ ಆಡಿದ್ದರು. ಈ ಎರಡೂ ಋತುಗಳಲ್ಲಿ ಕರ್ನಾಟಕ ತಂಡದ ಮ್ಯಾನೇಜರ್ ಆಗಿದ್ದವರು ರಘುನಾಥ್ ಬೀರಾಲಾ. ಈಗ ಮೂವ್ವರೂ ಮತ್ತೆ ಒಂದೇ ಮೈದಾನದಲ್ಲಿ ಆದರೆ ಬೇರೆ ಬೇರೆ ಸಾಮರ್ಥ್ಯದಲ್ಲಿ! ಇಟ್ ಇಸ್ ಇಂಡೀಡ್ ಅ ಸ್ಮಾಲ್ ವರ್ಲ್ಡ್.

ಶುಕ್ರವಾರ, ನವೆಂಬರ್ 23, 2007

ಕರ್ನಾಟಕ ಕ್ರಿಕೆಟ್ ೬ - ಚಂದ್ರಶೇಖರ್ ರಘು


ಕರ್ನಾಟಕಕ್ಕೆ ಬೇಕಾಗಿದ್ದ ಭರವಸೆಯ ದಾಂಡಿಗ. ರಣಜಿಗೆ ಪಾದಾರ್ಪಣ ೨೦೦೨-೦೩ ಋತುವಿನಲ್ಲಿ ಮಾಡಿದರೂ ಸ್ಥಿರವಾಗಿ ತಂಡದಲ್ಲಿರಲು ರಘು ಪರದಾಡುತ್ತಿದ್ದರು. ಸಿಕ್ಕ ಅವಕಾಶಗಳನ್ನು ಉಪಯೋಗಿಸಿಕೊಳ್ಳದೇ ತಂಡದಲ್ಲಿದ್ದರೂ ಅಂತಿಮ ಹನ್ನೊಂದರಲ್ಲಿ ಅವಕಾಶ ಸಿಗುತ್ತಿರಲಿಲ್ಲ. ೪ ಋತುಗಳಲ್ಲಿ ಆಡಿದ್ದು ೯ ಪಂದ್ಯಗಳಲ್ಲಿ. ಆಗ ರಘು ಆಯ್ಕೆಯಾಗುತ್ತಿದ್ದು, ಆಫ್ ಸ್ಪಿನ್ ಬೌಲಿಂಗ್ ಮಾಡಬಲ್ಲ ಬೌಲರ್ ಮತ್ತು ಸಾಧಾರಣವಾಗಿ ಬ್ಯಾಟಿಂಗ್ ಮಾಡಬಲ್ಲ ಆಟಗಾರನಾಗಿಯೇ ವಿನ: ಪಕ್ಕಾ ಬ್ಯಾಟ್ಸ್-ಮನ್ ಆಗಿ ಅಲ್ಲ!

ಕರ್ನಾಟಕಕ್ಕಾಗಿ ತನ್ನ ಪ್ರಥಮ ಪಂದ್ಯವನ್ನು ೨೦೦೨-೦೩ನೇ ಋತುವಿನಲ್ಲಿ ಬೆಂಗಳೂರಿನಲ್ಲಿ ಜಮ್ಮು ಕಾಶ್ಮೀರದ ವಿರುದ್ಧ ಆಡಿದರು. ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ. ಬೌಲಿಂಗ್ ನೀಡಲಿಲ್ಲ. ಒಂದು ಕ್ಯಾಚ್ ಹಿಡಿದದ್ದು ಮತ್ತು ಕ್ಷೇತ್ರರಕ್ಷಣೆ ಮಾಡಿದ್ದು ಬಿಟ್ಟರೆ ತನ್ನ ಚೊಚ್ಚಲ ಪಂದ್ಯದಲ್ಲಿ ರಘು ಬೇರೇನು ಮಾಡಲಿಲ್ಲ. ನಂತರದ ಪಂದ್ಯಗಳಲ್ಲಿ ಮಧ್ಯ ಪ್ರದೇಶದ ವಿರುದ್ಧ ೨೨; ೦ ಔಟಾಗದೆ, ವಿದರ್ಭದ ವಿರುದ್ಧ ೨೪;೦ ಮತ್ತು ಪ್ಲೇಟ್ ಫೈನಲ್ ನಲ್ಲಿ ಕೇರಳ ವಿರುದ್ಧ ೮ ಓಟಗಳು. ಈ ಋತುವಿನಲ್ಲಿ ಆಡಿದ ೪ ಪಂದ್ಯಗಳಲ್ಲಿ ೫ ಸಾರಿ ಬ್ಯಾಟಿಂಗ್ ಮಾಡಿ ಒಂದು ಬಾರಿ ನಾಟೌಟ್ ಆಗಿ ಉಳಿದು ಗಳಿಸಿದ್ದು ೧೩.೫ ಸರಾಸರಿಯಲ್ಲಿ ಕೇವಲ ೫೪ ಓಟಗಳನ್ನು. ಬೌಲಿಂಗ್ ನಲ್ಲಿ ಶೂನ್ಯ ಸಂಪಾದನೆ.

೨೦೦೩-೦೪ ಋತುವಿನಲ್ಲಿ ಆಡಿದ್ದು ಒಂದೇ ಪಂದ್ಯ, ಹೈದರಾಬಾದ್ ವಿರುದ್ಧ. ಗಳಿಕೆ ಔಟಾಗದೆ ೧೬ ಓಟಗಳು ಮತ್ತು ಶೂನ್ಯ. ೨೦೦೪-೦೫ ಋತುವಿನಲ್ಲಿ ೩ ಪಂದ್ಯಗಳು. ೭.೦೦ ಸರಾಸರಿಯಲ್ಲಿ ೨೧ ಓಟಗಳು. ಈ ಋತುವಿನಲ್ಲಿ ರಘು ಬೌಲಿಂಗನಲ್ಲಿ ೬೬.೦೦ ಸರಾಸರಿಯಲ್ಲಿ ೩ ಹುದ್ದರಿ ಗಳಿಸಿದ್ದರು. ಒಟ್ಟಾರೆ ಮತ್ತೆ ಕಳಪೆ ಪ್ರದರ್ಶನ. ೨೦೦೫-೦೬ ಋತುವಿಗೆ ಮತೆ ಆಯ್ಕೆಯಾದರು ಆದರೆ ಆಡಿದ್ದು ಒಂದೇ ಪಂದ್ಯ. ಗಳಿಸಿದ್ದು ೧೧ ಓಟಗಳನ್ನು.

೪ ಋತುಗಳು. ೯ ಪಂದ್ಯಗಳು. ೧೦.೨ ಸರಾಸರಿಯಲ್ಲಿ ೧೦೨ ಓಟಗಳು. ಸುಮಾರು ೭೫ರ ಸರಾಸರಿಯಲ್ಲಿ ೩ ಹುದ್ದರಿಗಳು. ಇವು ರಘು ಸಾಧನೆ. ಈ ಅಂಕಿ ಅಂಶಗಳ ಹಿಂದೆ ಆಯ್ಕೆಗಾರರ ಕೊಡುಗೆಯೂ ಇದೆ. ರಘು ತಾನ್ನು ಆಡಿದ ೯ ಪಂದ್ಯಗಳಲ್ಲಿ ಸ್ಥಿರವಾಗಿ ಒಂದೇ ಕ್ರಮಾಂಕದಲ್ಲಿ ಆಡಲಿಲ್ಲ. ಅವರ ಜವಾಬ್ದಾರಿ ಏನು ಎಂಬುದು ಅವರಿಗೇ ತಿಳಿಹೇಳಲಾಗಲಿಲ್ಲ. ಯುವ ಆಟಗಾರನಿಗೆ ಒಂದು ಸಲ ನಾಲ್ಕನೇ ಕ್ರಮಾಂಕದಲ್ಲಿ ಆಡಿಸಿದರೆ ಮುಂದಿನ ಪಂದ್ಯದಲ್ಲಿ ೮ನೇ ಕ್ರಮಾಂಕ! ಬೌಲಿಂಗ್ ವಿಭಾಗದಲ್ಲೂ ಸರಿಯಾಗಿ ರಘು ಅವರನ್ನು ಬಳಸಲಿಲ್ಲ.

ಬೆಂಗಳೂರು ಕೆ.ಎಸ್.ಸಿ.ಎ ಲೀಗ್-ನಲ್ಲಿ ಕೆನರಾ ಬ್ಯಾಂಕ್ ಪರ ರಘು ಆಡುತ್ತಾರೆ. ಉಡುಪಿಯಲ್ಲಿ ಎರಡು ವರ್ಷಗಳ ಹಿಂದೆ ನಡೆದ ಕ್ರಿಕೆಟ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳಲು ರಘು ಬಂದಿದ್ದರು. ಕೆನರಾ ಬ್ಯಾಂಕ್ ತಂಡದ ಪ್ರತಿಯೊಂದು ಪಂದ್ಯವನ್ನು ತಪ್ಪದೇ ವೀಕ್ಷಿಸಿದ್ದೆ. ರಘು ಅವರ ಆಟದ ಶೈಲಿ ಬಹಳ ಇಷ್ಟವಾಗಿತ್ತು.

ಹೀಗೆ ರಘು ಕ್ರಿಕೆಟ್ ಭವಿಷ್ಯ ಒಟ್ಟಾರೆ ಗೊಂದಲಮಯವಾಗಿದ್ದಾಗ ೨೦೦೬-೦೭ನೇ ಋತುವಿಗೆ ವೆಂಕಟೇಶ್ ಪ್ರಸಾದ್ ತಂಡದ ಕೋಚ್ ಆಗಿ ನೇಮಕಗೊಂಡರು. ಇವೆಲ್ಲದರ ನಡುವೆ ೨೦೦೫-೦೬ ಋತುವಿನ ದಕ್ಷಿಣ ವಲಯ ಏಕದಿನ ಪಂದ್ಯಗಳಲ್ಲಿ ರಘು ಭರ್ಜರಿ ಪ್ರದರ್ಶನ ನೀಡಿದರು. ಅವರನ್ನು ಸತತವಾಗಿ ಒಂದು ನಿರ್ದಿಷ್ಟ ಕ್ರಮಾಂಕದಲ್ಲಿ ಆಡಿಸಲಾಯಿತು. ಆಯ್ಕೆಗಾರರು ಅವರಲ್ಲಿ ನಂಬಿಕೆಯಿರಿಸಿದಾಗ ರಘು ಭರವಸೆಯ ಆಟ ತೋರ್ಪಡಿಸಿದರು. ಎಲ್ಲಾ ಪಂದ್ಯಗಳಲ್ಲಿ ನಾಲ್ಕನೇ ಕ್ರಮಾಂಕದಲ್ಲಿ ಆಡಿದ ರಘು, ೭ ಪಂದ್ಯಗಳಲ್ಲಿ ೨ ಶತಕದ ಬಾರಿಗಳೊಂದಿಗೆ ೫೭.೦೦ ಸರಾಸರಿಯಲ್ಲಿ ೩೪೨ ಓಟಗಳನ್ನು ಕಲೆಹಾಕಿದರು. ಅವರ ಈ ನಿರ್ವಹಣೆಯನ್ನು ಗಮನದಲ್ಲಿರಿಸಿ ವೆಂಕಿ ರಣಜಿ ಪಂದ್ಯಗಳಲ್ಲಿ ರಘುವನ್ನು ೩ನೇ ಕ್ರಮಾಂಕದಲ್ಲಿ ಆಡಿಸಿದರು. ಕಳೆದ ಋತುವಿನಲ್ಲಿ ಅತ್ಯುತ್ತಮ ಆಟ ಪ್ರದರ್ಶಿಸಿದ ರಘು, ಕೋಚ್ ತನ್ನ ಮೇಲಿಟ್ಟ ನಂಬಿಕೆಗೆಗೆ ನಿರಾಸೆ ಮಾಡಲಿಲ್ಲ.

ಕಳೆದ ಋತುವಿನ ಎಲ್ಲಾ ಪಂದ್ಯಗಳಲ್ಲೂ ಆಡಿದ ರಘು, ೩೫.೮ ಸರಾಸರಿಯಲ್ಲಿ ೫೩೭ ಓಟಗಳನ್ನು ಗಳಿಸಿದರು. ಒಟ್ಟಾರೆ ಸರಾಸರಿ ಕಡಿಮೆಯಂತೆ ಕಾಣುತ್ತದೆ ಆದರೆ ರಘು ಪ್ರದರ್ಶಿಸಿದ ಆಟ ಉನ್ನತ ಮಟ್ಟದ್ದಾಗಿತ್ತು. ಉತ್ತರ ಪ್ರದೇಶದ ವಿರುದ್ಧ ಪಂದ್ಯ ನಡೆಯುತ್ತಿತ್ತು. ಗೆಲ್ಲಲು ೧೨೨ ಓಟಗಳನ್ನು ಬೆಂಬತ್ತಿದ ಕರ್ನಾಟಕ ೩ನೇ ದಿನದ ಆಟ ಮುಗಿದಾಗ ೫ ಹುದ್ದರಿ ಕಳಕೊಂಡು ೫೩ ಓಟಗಳನ್ನು ಗಳಿಸಿತ್ತು. ರಘು ಮತ್ತು ಬೇಜವಾಬ್ದಾರಿ ಆಟಗಾರ ಸ್ಟುವರ್ಟ್ ಬಿನ್ನಿ ಮರುದಿನ ಆಟ ಮುಂದುವರಿಸಿದರು. ಎಂದಿನಂತೆ ಸ್ಟುವರ್ಟ್ ಬೇಗನೆ ನಿರ್ಗಮಿಸಿದರು. ಆಗ ತಂಡದ ಮೊತ್ತ ೫೮ ಕ್ಕೆ ೬. ನಂತರ ಸುನಿಲ್ ಜೋಶಿ ನಿರ್ಗಮಿಸಿದಾಗ ಸ್ಕೋರ್ ೭೩ಕ್ಕೆ ೭. ಇನ್ನೂ ೪೯ ರನ್ನು ಗಳ ಅವಶ್ಯಕತೆ. ಗೆಲ್ಲಲೇಬೇಕು ಎಂಬ ಛಲದಿಂದ ಆಡಿದ ರಘು, ಅಖಿಲ್ ಜೊತೆಗೂಡಿ ಅಮೂಲ್ಯ ೪೭ ಓಟಗಳನ್ನು ಕಲೆಹಾಕಿ, ಗೆಲ್ಲಲು ಕೇವಲ ೨ ಓಟಗಳ ಅವಶ್ಯಕತೆ ಇದ್ದಾಗ ಔಟಾದರು. ಗಳಿಸಿದ್ದು ಅತ್ಯುತ್ತಮ ೫೦ ಓಟಗಳನ್ನು. ಆ ಪಂದ್ಯ ಕರ್ನಾಟಕ ಗೆದ್ದಿದ್ದೇ ರಘು ಆಟದಿಂದ.

ರಘು ಅವರ ಆಟದ ಮತ್ತೊಂದು ಅತ್ಯುತ್ತಮ ಪ್ರದರ್ಶನವಾದದ್ದು ಬಂಗಾಲ ವಿರುದ್ಧ ಸೆಮಿ ಫೈನಲ್ ನಲ್ಲಿ. ಪ್ರಥಮ ಬಾರಿಯಲ್ಲಿ ಜುಜುಬಿ ಮೊತ್ತಕ್ಕೆ ತನ್ನ ಇನ್ನಿಂಗ್ಸ್ ಮುಗಿಸಿದ್ದರಿಂದ ಕರ್ನಾಟಕ ಭಾರೀ ಮೊತ್ತದಿಂದ ಹಿನ್ನಡೆಯಲ್ಲಿತ್ತು. ವೇಗವಾಗಿ ಓಟಗಳನ್ನು ಗಳಿಸುವ ಅವಶ್ಯಕತೆ ಇದ್ದಲ್ಲಿ ಬಂಗಾಲದ ಬೌಲರ್ ಗಳು ಲೆಗ್-ಸ್ಟಂಪ್ ಹೊರಗೆ ಬೌಲ್ ಮಾಡುತ್ತಿದ್ದರು. ಆದರೂ ತಾಳ್ಮೆ, ಸಂಯಮ ಕಳಕೊಳ್ಳದೆ ಆಡಿದ ರಘು ಉತ್ತಮ ೮೫ ಓಟಗಳನ್ನು ಗಳಿಸಿದ್ದರು.

ರಘು ಹೊಡೆಬಡಿಯ ಆಟಗಾರನಲ್ಲ. ಹಾಗೇನೆ ನೀರಸ ಆಟವನ್ನೂ ಅವರು ಪ್ರದರ್ಶಿಸುವುದಿಲ್ಲ. ಅವಶ್ಯಕತೆಗೆ ತಕ್ಕಂತೆ ಆಡುವುದು ಅವರ ಶೈಲಿ. ಕಳೆದೆರಡು ಋತುಗಳಲ್ಲಿ ಅವರ ಬ್ಯಾಟಿಂಗ್ ಬಹಳ ಸುಧಾರಿಸಿದೆ. ತನ್ನ ಆಟವನ್ನು ಇನ್ನೂ ಸುಧಾರಿಸಿಕೊಳ್ಳುತ್ತಾ ಕರ್ನಾಟಕಕ್ಕೆ ಇನ್ನಷ್ಟು ಕಾಲ ಆಡುತ್ತಾ ಉತ್ತಮ ಪ್ರದರ್ಶನವನ್ನು ರಘು ನೀಡಲಿ.

ಮಂಗಳವಾರ, ನವೆಂಬರ್ 13, 2007

ಕಲಾವಳಿ - ಕರಾವಳಿಯ ಕಲಾವಿದರ ಸಂಗಮ


ಗೆಳೆಯ ದಿನೇಶ್ ಹೊಳ್ಳ ಕಳೆದ ಒಂದು ತಿಂಗಳಿನಿಂದ ಭಾರೀ ಬ್ಯುಸಿ. ಎಲ್ಲಾದರು ಚಾರಣ ಕಾರ್ಯಕ್ರಮವಿದೆಯೇ ಎಂದು ಫೋನಾಯಿಸಿದರೆ, 'ಓಓಓಓ...' ಎನ್ನುವ ರೀತಿ ನೋಡಿದರೆ ಚಾರಣ ಎಂಬ ಹವ್ಯಾಸವೇ ಮರೆತುಹೋಗಿದೆಯೇ ಎಂಬ ಸಂಶಯ ಬರುತ್ತಲಿದೆ. ಹೊಳ್ಳರು ಬ್ಯುಸಿ ಆದರೆ ಆ ತಿಂಗಳ ಮಂಗಳೂರು ಯೂತ್ ಹಾಸ್ಟೆಲ್ ಚಾರಣ ಹಳ್ಳ ಹಿಡಿದಂತೆ. ಈಗ ಸದ್ಯಕ್ಕೆ ಚಾರಣವಂತೂ ದೂರದ ಮಾತು. ನವೆಂಬರ್ ೨೫ರ ವರೆಗಂತೂ ಅವರಲ್ಲಿ ಮಾತನಾಡಲೂ ಸಮಯವಿಲ್ಲ.

ಕರಾವಳಿಯ ಕಲಾವಿದರೆಲ್ಲಾ ಸೇರಿ ನವೆಂಬರ್೨೪ ಮತ್ತು ೨೫, ೨೦೦೭ರಂದು ಒಂದು ಪ್ರಶಂಸನೀಯ ಕಾರ್ಯಕ್ರಮವನ್ನು ಆಯೋಜಿಸಲಿದ್ದಾರೆ. ಆ ೨ ದಿನಗಳಂದು ಮಂಗಳೂರಿನ ಕದ್ರಿ ಪಾರ್ಕ್ ಬಳಿ ಕರಾವಳಿಯ ಎಲ್ಲಾ ಕಲಾವಿದರನ್ನು ಒಂದೆಡೆ ಸೇರಿಸಿ ಪ್ರತಿ ಕಲಾವಿದನಿಗೂ ಒಂದು ಪ್ರತ್ಯೇಕ 'ಸ್ಟಾಲ್' ನೀಡಿ ಅಲ್ಲಿ ಅಯಾ ಕಲಾವಿದರು ರಚಿಸಿರುವ ಚಿತ್ರಗಳನ್ನು ಪ್ರದರ್ಶನ/ ಮಾರಾಟಕ್ಕೆ ಇಟ್ಟು ಸಂಪೂರ್ಣ ಪ್ರೋತ್ಸಾಹವನ್ನು ಪ್ರತಿ ಕಲಾವಿದನಿಗೆ ನೀಡುವುದು. ಈ ಮಧ್ಯೆ ಅಲ್ಲೇ ಇರುವ 'ಸ್ಟೇಜ್' ನಲ್ಲಿ ವಿವಿಧ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ. ಕದ್ರಿ ಪಾರ್ಕ್ ನ ಪಾರ್ಶ್ವದಲ್ಲಿರುವ ಸುಮಾರು ೧.೫ಕಿಮಿ ಉದ್ದದ ರಸ್ತೆಯಲ್ಲಿ ಈ ೨ ದಿನಗಳಂದು ವಾಹನ ಓಡಾಟ ಇರಲಾರದು. ರಸ್ತೆಯ ೨ ತುದಿಗಳಲ್ಲಿ ಸ್ವಾಗತ ಕಮಾನು. ರಸ್ತೆಯ ಇಕ್ಕೆಲಗಳಲ್ಲಿ ಆಯಾ ಕಲಾವಿದರ 'ಸ್ಟಾಲ್'ಗಳು. ಸುಮಾರು ೨೫೦ ಕಲಾವಿದರು ಪಾಲ್ಗೊಳ್ಳಲಿದ್ದಾರೆ. ಪ್ರತಿ ಕಲಾವಿದ ತನ್ನ ಚಿತ್ರಗಳನ್ನು ಪ್ರದರ್ಶಿಸಲಿದ್ದಾನೆ.

ತನಗಾಗಿ ಕಾದಿರಿಸಿದ 'ಸ್ಟಾಲ್'ನ ಬಾಡಿಗೆಯಾಗಿ ಸಣ್ಣ ಮೊತ್ತವನ್ನು ಪಾವತಿಸಿವುದನ್ನು ಹೊರತುಪಡಿಸಿ, ತಾನು ರಚಿಸಿರುವ ಚಿತ್ರಗಳ ಮಾರಾಟದಿಂದ ಗಳಿಸಿದ ಹಣದಲ್ಲಿ ಆಯೋಜಕರಿಗೆ ಒಂದು ನಯಾ ಪೈಸೆಯನ್ನೂ ಯಾವುದೇ ಕಲಾವಿದ ನೀಡಬೇಕಾಗಿಲ್ಲ. ಉತ್ತಮ ಕಲೆಗಾರಿಕೆಯಿದ್ದೂ ತನ್ನ ಚಿತ್ರಗಳನ್ನು ಪ್ರದರ್ಶಿಸಲು ಹೆಣಗಾಡುವ ಕಲಾವಿದರಿಗೆ ಇದೊಂದು ಸುವರ್ಣಾವಕಾಶ.

ವಿಜಯ ಕರ್ನಾಟಕದಲ್ಲಿ ತನ್ನ 'ಸೂರ್ಯಕಾಂತಿ' ಅಂಕಣಕ್ಕಾಗಿ ಕರಾವಳಿಯ ಎಲ್ಲಾ ಕಲಾವಿದರನ್ನು ದಿನೇಶ್ ವ್ಯಕ್ತಿಗತವಾಗಿ ಭೇಟಿ ಮಾಡಬೇಕಾಗಿತ್ತು. ನೂರಕ್ಕಿಂತಲೂ ಅಧಿಕ ಕಲಾವಿದರನ್ನು ಭೇಟಿ ಮಾಡಿ ಮಾತನಾಡಿಸಿರುವ ಮತ್ತು ಸ್ವತ: ಉತ್ತಮ ಕಲಾವಿದನಾಗಿರುವ ದಿನೇಶ್, ಕಲಾವಿದರ ಬವಣೆಗಳನ್ನು ಸಮೀಪದಿಂದ ಬಲ್ಲರು. ಬಡ ಕಲಾವಿದರಿಗಿರುವ ಆರ್ಥಿಕ ಮುಗ್ಗಟ್ಟು, ಪ್ರೋತ್ಸಾಹದ ಕೊರತೆ, ರಾಜಕೀಯ ಇತ್ಯಾದಿಗಳನ್ನು ಸೂಕ್ಷ್ಮವಾಗಿ ಅರ್ಥ ಮಾಡಿಕೊಂಡಿರುವ ದಿನೇಶ್, ತನ್ನಂತೆ ಕಲೆ ಮತ್ತು ಕಲಾವಿದರನ್ನು ಪ್ರೋತ್ಸಾಹಿಸುವ ಕೋಟಿ ಪ್ರಸಾದ್ ಆಳ್ವ, ಕರುಣಾಕರ ಎಮ್. ಎಚ್ ಇವರೊಂದಿಗೆ ಸೇರಿ ಈ ದೊಡ್ಡ ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದ್ದಾರೆ. ಈ ಬಗ್ಗೆ ನನ್ನ ಕೊರೆತ ಇಷ್ಟು ಸಾಕೆನಿಸುತ್ತಿದೆ. ಇನ್ನು ಕೆಳಗೆ ಇರುವ ಹೆಚ್ಚಿನ ಮಾಹಿತಿಯನ್ನು 'ಕುಡ್ಲ ಕಲಾವಳಿ'ಯ 'ಮಾಹಿತಿ ಪುಟ' ದಿಂದ ನೇರವಾಗಿ ಕದ್ದು ಬರೆದಿದ್ಡೇನೆ.

ಇವತ್ತಿನ ಸಮಕಾಲೀನ ಸಂದರ್ಭದಲ್ಲಿ ಎಲ್ಲಾ ಕ್ಷೇತ್ರಗಳ ಹಾಗೆ ಚಿತ್ರಕಲಾ ಕ್ಷೇತ್ರದಲ್ಲೂ ಸಾಕಷ್ಟು ಪ್ರಗತಿ, ಬದಲಾವಣೆಗಳು ಆಗಿವೆಯಾದರೂ, ಅವನ್ನು ಎದುರಿಸುವ ಸವಾಲುಗಳೂ ಕಲಾವಿದರ ಮುಂದೆ ಸಾಕಷ್ಟು ಬೆಳೆದು ನಿಂತಿವೆ. ಇವೆಲ್ಲವುಗಳಿಗೂ ಉತ್ತರಗಳನ್ನು ಕಂಡುಕೊಳ್ಳುವ ದೃಷ್ಟಿಯಿಂದ ಹಾಗೂ ಇಂದಿನ ಅಗತ್ಯತೆಗಳನ್ನು ಕುರಿತು ಗಮನ ಹರಿಸುವಂತಹ ದೊಡ್ಡ ಪ್ರಮಾಣದ ಸಾಮೂಹಿಕ ಕಲಾ ಚಟುವಟಿಕೆಯನ್ನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಆಯೋಜಿಸಲು ಇಲ್ಲಿನ ಎಲ್ಲಾ ಕಲಾವಿದರು ನಿರ್ಧಾರ ಮಾಡಿಕೊಂಡಿದ್ದೇವೆ. ಈ ನಿಟ್ಟಿನಲ್ಲಿ ಬದಲಾದ ಜಾಗತೀಕರಣ ಸಂದರ್ಭದಲ್ಲಿ ಮತ್ತು ಇಂತಹ ಪ್ರಗತಿಪರ ಕೇಂದ್ರದಲ್ಲಿ 'ಕುಡ್ಲ ಕಲಾವಳಿ'ಯಂಥ ಬೃಹತ್ ಕಲಾಮೇಳವನ್ನು ಪ್ರಪ್ರಥಮ ಬಾರಿಗೆ ಹಮ್ಮಿಕೊಳ್ಳಲು ಎಲ್ಲಾ ಕಲಾವಿದರು ಸಂಕಲ್ಪ ಮಾಡಿದ್ದೇವೆ. ಇದು ನಮ್ಮ ಸಂಕಲ್ಪ ಮಾತ್ರವಲ್ಲ, ಸಾಂಸ್ಕೃತಿಕವಾಗಿ ಕಲಾ ಸಂಸ್ಕಾರವನ್ನು ಬಿತ್ತಿ ಬೆಳೆಯಿಸುವ ಧ್ಯೇಯವನ್ನು ನಾವು ಹೊಂದಿದ್ದೇವೆ. ಇದನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಇಲ್ಲಿನ ಕಲಾವಲಯದ ಪ್ರಮುಖರನೇಕರು ಸೇರಿ 'ಕುಡ್ಲ ಕಲಾವಳಿ' ಕಲಾಮೇಳವನ್ನು ೨೦೦೭ನೇ ನವೆಂಬರ್ ೨೪ ಮತ್ತು ೨೫ರಂದು ಮಂಗಳೂರಿನ 'ಕದ್ರಿ ಪಾರ್ಕ್'ನಲ್ಲಿ ನಡೆಸಲು ನಿಶ್ಚಯಿಸಲಾಗಿದೆ. ಇಂತಹ ಒಂದು ಪರಿಕಲ್ಪನೆಯನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಂಗಳೂರಿನ ಎಸ್.ಎಸ್.ಕ್ರಿಯೇಶನ್ಸ್ ಬೆನ್ನೆಲುಬಾಗಿ ನಿಂತಿದೆ.

'ಕುಡ್ಲ ಕಲಾವಳಿ'ಯಲ್ಲಿ ಕರಾವಳಿಯ ಕಲಾವಿದರ ಚಿತ್ರಕಲೆ, ಶಿಲ್ಪಕಲೆ, ಭಿತ್ತಿ ಕಲೆ, ಛಾಯಾ ಚಿತ್ರಕಲೆ ಹಾಗೂ ಕರಕುಶಲ ಕಲೆಗಳ ಪ್ರದರ್ಶನಕ್ಕಾಗಿ ಸುಮಾರು ೨೦೦ ಕಲಾ ಪ್ರದರ್ಶನ ಮಳಿಗೆಗಳನ್ನು ನಿರ್ಮಿಸಿಕೊಡಲಾಗುವುದು. ೨೫೦ಕ್ಕೂ ಹೆಚ್ಚು ಕಲಾವಿದರು ಮತ್ತು ೭೦೦ಕ್ಕೂ ಹೆಚ್ಚು ಚಿತ್ರಕಲಾ ಸ್ಪರ್ಧಾಳುಗಳು ಭಾಗವಹಿಸಲಿದ್ದಾರೆ. ಅಲ್ಲದೇ, 'ಕುಡ್ಲ ಕಲಾವಳಿ'ಯ ಪ್ರಮುಖ ಅಂಗವಾಗಿ ಚಿತ್ರಕಲಾ ಪ್ರದರ್ಶನ, ಛಾಯಾಚಿತ್ರಕಲಾ ಪ್ರದರ್ಶನ, ಚಿತ್ರಕಲಾ ಸ್ಪರ್ಧೆ ಹಾಗೂ ಕಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು.

ಮುಖ್ಯ ಉದ್ದೇಶಗಳು:

  • ಸಮಾಜಿಕವಾಗಿ ಕಲೆಯನ್ನು ಮತ್ತು ಕಲಾಕೃತಿಗಳನ್ನು ಜನಸಮಾನ್ಯರಿಗೆ ತಲುಪಿಸುವುದು

  • ದೃಶ್ಯಕಲೆಯ ವಿವಿಧ ಕಲಾ ಪ್ರಕಾರಗಳನ್ನು ಪರಿಚಯಿಸುವುದು

  • ಪ್ರತಿಭಾವಂತ ಕಲಾವಿದರನ್ನು ಮತ್ತು ಅವರ ಕಲಾಕೃತಿಗಳನ್ನು ಒಂದೇ ವೇದಿಕೆಯಲ್ಲಿ ಪರಿಚಯಿಸುವುದು

  • ಯುವ ಹಾಗೂ ಬೆಳಕಿಗೆ ಬಾರದ ಪ್ರತಿಭಾವಂತ ಕಲಾವಿದರನ್ನು ಗುರುತಿಸಿ ಪ್ರೋತ್ಸಾಹಿಸುವುದು

  • ಸಮಕಾಲೀನ ಕಲಾಕೃತಿಗಳ ಪರಿಚಯ

  • ಕುಶಲಕಲೆಯ ಅಭಿವ್ಯಕ್ತಿಯ ಅಂಶಗಳನ್ನು ಬಿಂಬಿಸುವುದು

  • ಆಧುನಿಕ ಕಲಾ ಬೆಳವಣಿಗೆಗಳ ಪರಿಚಯ

  • ಕಲಾ ಪ್ರಾತ್ಯಕ್ಷಿಕೆಗಳ ಮುಖಾಂತರ ಕಲಾ ತಂತ್ರಗಳನ್ನು ಪರಿಚಯಿಸುವುದು

  • ಹಿರಿಯ ಕಲಾವಿದರೊಬ್ಬರನ್ನು ಸನ್ಮಾನಿಸುವುದು


  • ಕಲಾ ಪ್ರಾತ್ಯಕ್ಷಿಕೆ:

  • ನಿಸರ್ಗ ಚಿತ್ರಣ (Landscape Painting)

  • ಭಿತ್ತಿ ಚಿತ್ರ/ಶಿಲ್ಪ (Murals)

  • ಕೋಲಾಜ್ ಚಿತ್ರ (Collage Works)

  • ಭಾವ ಚಿತ್ರ (Portrait Painting)

  • ಪ್ರತಿಷ್ಠಾಪನಾ ಕಲೆ (Installation Art)

  • ಛಾಯಾ ಚಿತ್ರ (Photography)

  • ಕಾರ್ಯದರ್ಶಿ - ದಿನೇಶ್ ಹೊಳ್ಳ; ಅಧ್ಯಕ್ಷರು - ಗಣೇಶ್ ಸೋಮಯಾಜಿ ಬಿ.; ಸಂಚಾಲಕರು - ಎನ್.ಎಸ್.ಪತ್ತಾರ್; ಸಹ ಸಂಚಾಲಕರು - ರಾಜೇಂದ್ರ ಕೇದಿಗೆ

    ಕುಡ್ಲ ಕಲಾವಳಿ - ಕರುಣಾಕರ್ ಎಮ್.ಎಚ್.; ದೂರವಾಣಿ - (೦೮೨೪) ೪೨೬೯೮೯೬; ವಿ ಅಂಚೆ - kudlakalavali@yahoo.co.in

    ಭಾನುವಾರ, ನವೆಂಬರ್ 11, 2007

    ೨೦೦೭-೦೮ ರಣಜಿ ಋತು ಮತ್ತು ಕರ್ನಾಟಕ

    ೭೪ನೇ ರಣಜಿ ಋತು ನವೆಂಬರ್ ೩ ರಂದು ಆರಂಭಗೊಂಡಿದೆ. ಈ ಬಾರಿಯಾದರೂ ಮುಂಬೈ ಬಿಟ್ಟು ಬೇರೆ ತಂಡ ರಣಜಿ ಟ್ರೋಫಿ ಗೆಲ್ಲುವುದೋ ... ಕಾದು ನೋಡಬೇಕು. ಕಳೆದ ಋತುವಿನಲ್ಲಿ ಸೆಮಿಫೈನಲ್ ನಲ್ಲಿ ತನ್ನ ಅಭಿಯಾನ ಮುಗಿಸಿದ ಕರ್ನಾಟಕ, ಈ ಋತುವಿನಲ್ಲಿ ಸೆಮಿಫೈನಲ್ ಪ್ರವೇಶಿಸಿದರೆ ಅದೇ ದೊಡ್ಡ ಸಾಧನೆ. ಕಳೆದ ಋತುವಿನಲ್ಲಿ ಕರ್ನಾಟಕದ ಉತ್ತಮ ಪ್ರದರ್ಶನಕ್ಕೆ ಕಾರಣ ರಾಬಿನ್ ಉತ್ತಪ್ಪ. ಪ್ರಮುಖ ಪಂದ್ಯಗಳಲ್ಲಿ ರಾಬಿನ್ ನೀಡಿದ ಉತ್ತಮ ಆರಂಭದಿಂದ ಕರ್ನಾಟಕ ಉತ್ತಮ ಮೊತ್ತಗಳನ್ನು ಕಲೆಹಾಕುವಲ್ಲಿ ಯಶಸ್ವಿಯಾಗಿತ್ತು. ಆದ್ದರಿಂದ ಬೌಲರ್ ಗಳಿಗೂ ಉತ್ತಮ ಮೊತ್ತದ ಬೆಂಬಲವಿದ್ದರಿಂದ ಎದುರಾಳಿ ತಂಡಗಳನ್ನು ಕಬಳಿಸುವಲ್ಲಿ ಕರ್ನಾಟಕ ಸಾಕಷ್ಟು ಯಶಸ್ವಿಯಾಗಿತ್ತು.

    ಅದೇನು ಯೇಸು ಕ್ರಿಸ್ತನ ಮಾಯೆಯೋ, ಆ ರೋಲಂಡ್ ಬ್ಯಾರಿಂಗ್ಟನ್ ಮತ್ತೆ ತಂಡದಲ್ಲಿ ಸ್ಥಾನ ಪಡೆದದ್ದು ಮಹಾದಾಶ್ಚರ್ಯ! ಕಳೆದೆರಡು ಋತುವಿನಲ್ಲಿ ಕಳಪೆ ಪ್ರದರ್ಶನ ನೀಡಿದರೂ ಬ್ಯಾರಿಂಗ್ಟನ್ ಮತ್ತೆ ತನ್ನ ಸ್ಥಾನ ಕಾಯ್ದುಕೊಂಡಿದ್ದಾರೆ. ರೋಲಂಡ್ ಬ್ಯಾರಿಂಗ್ಟನ್ ಒಬ್ಬ ಕಲಾತ್ಮಕ ಆರಂಭಿಕ ಆಟಗಾರ. ತನ್ನಲ್ಲಿರುವ ಪ್ರತಿಭೆಗೆ ತಕ್ಕಂತೆ ಆಡಿದರೆ ಈತನನ್ನು ಔಟ್ ಮಾಡಲು ಎದುರಾಳಿ ಬೌಲರ್ ಗಳು ಹೆಣಗಾಡಬೇಕಾಗುತ್ತದೆ. ಆದರೆ ಕಳೆದೆರಡು ಋತುಗಳಿಂದ ಕ್ರಿಕೆಟ್ ಬಗ್ಗೆ ಮಾತನಾಡುವುದು ಮತ್ತು ಯೋಚಿಸುವುದನ್ನು ಬಿಟ್ಟು ತನ್ನ ಧರ್ಮದ ಬಗ್ಗೆ ಅತಿಯಾಗಿ ಮಾತನಾಡುವುದು ಮತ್ತು ಯೋಚಿಸುವುದನ್ನು ಮಾಡುತ್ತಿರುವುದರಿಂದ ಬ್ಯಾರಿಂಗ್ಟನ್ ಆಟದ ಮೇಲೆ ಗಮನ ಕಳೆದುಕೊಳ್ಳುತ್ತಿದ್ದಾರೆ. ಬ್ಯಾರಿಂಗ್ಟನ್ ಈಗ ಸೀನಿಯರ್ ಆಟಗಾರ. ಅದರಂತೆಯೇ ಅವರು ನಡೆದುಕೊಳ್ಳುವುದೂ ಲೇಸು. ಈ ಋತುವಿನಲ್ಲಾದರೂ ರೋಲಂಡ್, ಕರ್ನಾಟಕಕ್ಕೆ ಒಂದೆರಡಾದರೂ ಉತ್ತಮ ಆರಂಭವನ್ನು ದೊರಕಿಸಿಕೊಡಲಿ. ಆಮೆನ್.

    ಸಿಕ್ಕಿದ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡಿದ್ದ ಭರತ್ ಚಿಪ್ಲಿ ತಂಡದಲ್ಲಿಲ್ಲ! ಆಕರ್ಷಕ ಆಟಗಾರ ಭರತ್, ಕಳೆದ ರಣಜಿ ಋತು ಮತ್ತು ಹಾಲಿ ಕೆ.ಎಸ್.ಸಿ.ಎ ಬೆಂಗಳೂರು ಲೀಗ್ ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಅವರ ಆಯ್ಕೆ ಆಗದಿರುವುದು ಕೆ.ಎಸ್.ಸಿ.ಎ ಯಲ್ಲಿ ಚುಕ್ಕಾಣಿ ಹಿಡಿಯುವವರು ಬದಲಾದರೂ, ಶಿಫಾರಸಿನ ಮತ್ತು ರಾಜಕೀಯದ ಹಳೇ ಚಾಳಿ ಬದಲಾಗಿಲ್ಲ ಎಂಬುದಕ್ಕೆ ನಿದರ್ಶನ. ಸಾಗರದವರಾದ ಭರತ್ ಚಿಪ್ಲಿಗೆ ಬೆಂಗಳೂರಿನಲ್ಲಿ, ಯಾರೂ 'ಗಾಡ್ ಫಾದರ್'ಗಳಿಲ್ಲ. ಈ ಹಿನ್ನಡೆಯಿಂದ ಎದೆಗುಂದದೆ ಭರತ್, ಇನ್ನಷ್ಟು ಉತ್ತಮ ಪ್ರದರ್ಶನ ನೀಡಿ ತಂಡಕ್ಕೆ ಮರಳಿ ಬರಲಿ.

    ಆರಕ್ಕಿಂತ ಮೇಲೇರದ ಮತ್ತು ೩ಕ್ಕಿಂತ ಕೆಳಗಿಳಿಯದ ತಿಲಕ್ ನಾಯ್ಡುವಿಗೇ ಮತ್ತೆ ಮಣೆ ಹಾಕಲಾಗಿದೆ. ಈ ನಾಯ್ಡುಗಾರುಗೆ 'ಇನ್-ಫ್ಲುಯನ್ಸ್'ಗೇನೂ ಕಡಿಮೆ ಇಲ್ಲ. ಕಳೆದ ಋತುವಿನಲ್ಲಿ ದೇವರಾಜ್ ಪಾಟೀಲ್ ರೂಪದಲ್ಲಿ ಪ್ರತಿಸ್ಪರ್ಧಿಯೊಬ್ಬ ತಂಡದಲ್ಲಿದ್ದರಿಂದಲೇ ತಿಲಕ್, ತನ್ನ ರಣಜಿ ಜೀವನದ ಉತ್ತಮ ಋತುವನ್ನು ಆಡಿದ್ದರು. ಅದೇ ಕಾರಣದಿಂದ ಈಗ ತಂಡದಲ್ಲಿದ್ದಾರೆ. ಕಳೆದ ಋತುವಿನ ೨೦-೨೦ ರಾಷ್ಟ್ರೀಯ ಪಂದ್ಯಾವಳಿಯಲ್ಲಿ ಕರ್ನಾಟಕದ ವಿಕೆಟ್ ಕೀಪರ್ ಆಗಿ ಪಾಟೀಲ್ ಆಡಿದ್ದರು. ವಿಕೆಟ್ ಹಿಂದೆ ಉತ್ತಮ ನಿರ್ವಹಣೆ ತೋರಿದ್ದಲ್ಲದೇ, ಆರಂಭಿಕ ಆಟಗಾರನಾಗಿ ಬಿರುಸಿನ ಆರಂಭವನ್ನೂ ನೀಡಿ ಪಾಟೀಲ್ ಗಮನ ಸೆಳೆದಿದ್ದರು. ಕಳೆದ ಋತುವಿನಲ್ಲಿ ತಂಡದಲ್ಲಿದ್ದೂ ಒಂದೇ ಪಂದ್ಯವನ್ನಾಡದ ದೇವರಾಜ್ ಪಾಟೀಲ್-ಗೆ ಈ ಬಾರಿಯಾದರೂ ತಿಲಕ್ ನಾಯ್ಡು ಜಾಗದಲ್ಲಿ ಒಂದೆರಡು ಅವಕಾಶ ನೀಡಿದರೆ, ಕರ್ನಾಟಕಕ್ಕೆ ಒಬ್ಬ ಉತ್ತಮ ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್-ಮನ್ ದೊರಕಿದಂತಾಗುವುದು.

    ಕರ್ನಾಟಕಕ್ಕೆ ಮತ್ತೊಮ್ಮೆ ರಣಜಿ ಟ್ರೋಫಿ ಸಿಗುವವರಗೆ ತಾನು ನಿವೃತ್ತನಾಗುವುದಿಲ್ಲ ಎಂದು ಸುನಿಲ್ ಜೋಶಿ ಪಣತಟ್ಟಿರುವಂತೆ ತೋರುತ್ತಿದೆ. ಸ್ಪಿನ್ ವಿಭಾಗದಲ್ಲಿ ಅಪ್ಪಣ್ಣ, ಜೋಶಿಗೆ ಉತ್ತಮ ಜೊತೆ ನೀಡಬಲ್ಲರು. ಕೊಡಗಿನ ಪಾಲಿಬೆಟ್ಟದ ಸಮೀಪ ಕಾಲಹರಣ ಮಾಡುತ್ತಿದ್ದ ಅಪ್ಪಣ್ಣ, ಕಳೆದ ಋತುವಿನಲ್ಲಿ ರಣಜಿಗೆ ಪಾದಾರ್ಪಣ ಮಾಡಿ, ಭಾರತ ೧೯ ವರ್ಷದೊಳಗಿನವರ ತಂಡಕ್ಕೆ ಆಡುವಷ್ಟರ ಮಟ್ಟಕ್ಕೆ ಬೆಳೆದದ್ದು ಸೋಜಿಗದ ಕತೆ. ಇನ್ನು ದಾವಣಗೆರೆಯ ವಿನಯ್ ಕುಮಾರ್, ಕೊಡಗಿನ ಅಯ್ಯಪ್ಪ ಮತ್ತು ಮೈಸೂರಿನ ಧನಂಜಯ ವೇಗದ ಬೌಲರ್ ಗಳು.

    ಕರ್ನಾಟಕದ ಬ್ಯಾಟಿಂಗ್ ರಘು ಮತ್ತು ಯೆರೆ ಗೌಡರನ್ನೇ ನೆಚ್ಚಿಕೊಂಡಿದೆ. ಇವರಿಬ್ಬರೊಂದಿಗೆ ಯುವ ಆಟಗಾರ ಪವನ್, ನಾಯ್ಡು ಮತ್ತು ಸವ್ಯಸಾಚಿ ಬಾಲಚಂದ್ರ ಅಖಿಲ್. ಕಳೆದ ಋತುವಿನಲ್ಲಿ ಬ್ಯಾಟಿಂಗ್-ನಲ್ಲಿ ಉತ್ತಪ್ಪ ಬಳಿಕ ಮಿಂಚಿದವರು ರಘು ಮತ್ತು ನಾಯಕ ಯೆರೆ ಗೌಡ. ಈ ಬಾರಿ ಇವರಿಬ್ಬರು ಚೆನ್ನಾಗಿ ಆಡಿದರೆ ಮಾತ್ರ ಕರ್ನಾಟಕಕ್ಕೆ ಉಳಿಗಾಲ. ಮುಂಬೈ ವಿರುದ್ಧ ಕಳೆದ ವಾರ ನಡೆದ ಪಂದ್ಯದಲ್ಲಿ ಕರ್ನಾಟಕವನ್ನು ಪಾರು ಮಾಡಿದ್ದೇ ರಾಹುಲ್ ದ್ರಾವಿಡ್. ರಾಹುಲ್ ದ್ವಿಶತಕ ಮತ್ತು ಪವನ್ ಜತೆ ಅವರ ಶತಕದ ಜೊತೆಯಾಟದಿಂದ ಕರ್ನಾಟಕ ಪಂದ್ಯವನ್ನು ೧೪೨ ರನ್ನುಗಳ ಹಿನ್ನಡೆಯಿದ್ದರೂ ಡ್ರಾ ಮಾಡಿಕೊಂಡು ಒಂದು ಅಂಕವನ್ನು ಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ರಾಹುಲ್ ಇನ್ನು ಒಂದು ಪಂದ್ಯಕ್ಕೆ ಮಾತ್ರ ಲಭ್ಯವಿರುವರು. ತನ್ನ ಎರಡನೇ ರಣಜಿ ಪಂದ್ಯವನ್ನಾಡುತ್ತಿದ್ದ ಯುವ ಆಟಗಾರ ಪವನ್, ದ್ರಾವಿಡ್ ನಂತಹ ಮಹಾನ್ ಆಟಗಾರನ ಜೊತೆ ಶತಕದ ಜೊತೆಯಾಟದಲ್ಲಿ ಪಾಲ್ಗೊಂಡು, ಇನ್ನಿಂಗ್ಸ್ ಹೇಗೆ ಆಡಬೇಕು ಎಂಬ ಪಾಠ ಕಲಿಯಲು ಸಿಕ್ಕಿದ್ದು ಅವರ ಅದೃಷ್ಟ. ಪಾಕಿಸ್ತಾನ ಮತ್ತು ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯಗಳಿಗೆ ರಾಬಿನ್ ಉತ್ತಪ್ಪ ಆಯ್ಕೆಯಾಗಲಾರರು ಎಂದಾದರೆ ಕರ್ನಾಟಕದ ಎರಡನೇ ಪಂದ್ಯದ ನಂತರ ಅವರು ಲಭ್ಯವಿರಬಹುದು. ಮೊದಲೆರಡು ಪಂದ್ಯಗಳಿಗೆ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಲಭ್ಯವಿರುವರು.

    ಮತ್ತೊಂದು ಸಂತೋಷದ ಸುದ್ದಿಯೆಂದರೆ ಉದಿತ್ ಪಟೇಲ್ ಮತ್ತು ಸ್ಟುವರ್ಟ್ ಬಿನ್ನಿ ತಂಡದಲ್ಲಿಲ್ಲ. ಇಂಡಿಯನ್ ಕ್ರಿಕೆಟ್ ಲೀಗ್ ಸೇರಿದ್ದರಿಂದ ಬಿನ್ನಿ, ತಾನಾಗಿಯೇ ಆಯ್ಕೆಗೆ ತನ್ನನ್ನು ಅನರ್ಹಗೊಳಿಸಿಕೊಂಡರೆ (ಆಯ್ಕೆಯಾಗಲಾರೆನು ಎಂದು ತಿಳಿದ ಬಳಿಕ ಇಂಡಿಯನ್ ಕ್ರಿಕೆಟ್ ಲೀಗ್ ಸೇರಿರಬೇಕು!) ಉದಿತ್ ಆಯ್ಕೆಯಾಗಲಿಲ್ಲ (ದೇವರ ದಯೆ). ಸುಧೀಂದ್ರ ಶಿಂದೆ ಮತ್ತೆ ಮರಳಿ ತಂಡಕ್ಕೆ ಬಂದಿದ್ದಾರೆ. ಇವರೊಬ್ಬ ಉತ್ತಮ ಆಟಗಾರ. ಈ ಬಾರಿಯಾದರೂ ಸಿಕ್ಕಿದ ಅವಕಾಶಗಳನ್ನು ಶಿಂದೆ ಸರಿಯಾಗಿ ಉಪಯೋಗಿಸಿಕೊಂಡು ತಂಡದಲ್ಲಿ ತನ್ನ ಸ್ಥಾನ ಭದ್ರಗೊಳಿಸಲಿ.

    ತಂಡ: ಅನಿಲ್ ಕುಂಬ್ಳೆ, ರಾಹುಲ್ ದ್ರಾವಿಡ್, ಎನ್.ಸಿ.ಅಯ್ಯಪ್ಪ, ಸುನಿಲ್ ಜೋಶಿ, ಯೆರೆ ಗೌಡ, ಸಿ.ರಘು, ಬ್ಯಾರಿಂಗ್ಟನ್ ರೋಲಂಡ್, ಕೆ.ಬಿ.ಪವನ್, ಶ್ರೀನಿವಾಸ ಧನಂಜಯ, ಆರ್.ವಿನಯ್ ಕುಮಾರ್, ಸುಧೀಂದ್ರ ಶಿಂದೆ, ಬಾಲಚಂದ್ರ ಅಖಿಲ್, ಕೆ.ಪಿ.ಅಪ್ಪಣ್ಣ, ದೇವರಾಜ ಪಾಟೀಲ್, ತಿಲಕ್ ನಾಯ್ಡು ಮತ್ತು ರಾಬಿನ್ ಉತ್ತಪ್ಪ.

    ಇತರೆಡೆ ಕಳೆದ ಋತುವಿನಲ್ಲಿ ಪ್ಲೇಟ್ ಲೀಗ್-ನಲ್ಲಿ ಅಸ್ಸಾಮ್ ತಂಡವನ್ನು ನಾಯಕನಾಗಿ ಪ್ರತಿನಿಧಿಸಿದ್ದ ಕರ್ನಾಟಕದ ಮಾಜಿ ಆರಂಭಿಕ ಆಟಗಾರ ಜಗದೀಶ್ ಅರುಣ್ ಕುಮಾರ್, ಈ ಋತುವಿನಲ್ಲಿ ಪ್ಲೇಟ್ ಲೀಗ್-ನಲ್ಲಿ ಗೋವಾದ ಪರವಾಗಿ ಆಡಲಿದ್ದಾರೆ. ಅರುಣ್, ಗೋವಾವನ್ನು ನಾಯಕನಾಗಿ ಮುನ್ನಡೆಸಲಿದ್ದಾರೆ ಮತ್ತು ಈ ಋತುವಿನ ಮೊದಲ ಪಂದ್ಯದಲ್ಲಿ ಅರುಣ್ ನಾಯಕತ್ವದಲ್ಲಿ ಗೋವಾ ತನ್ನ ಮೊದಲ ಪಂದ್ಯವನ್ನು ಹರ್ಯಾನಾ ವಿರುದ್ಧ ಗೆದ್ದಿದೆ. ೨೦೦೫-೦೬ ಋತುವಿನಲ್ಲಿ ರಾಜಸ್ಥಾನದ ಪರವಾಗಿ ೩ ಪಂದ್ಯಗಳನ್ನು ಆಡಿದ್ದ ಕರ್ನಾಟಕದ ಮತ್ತೋರ್ವ ಮಾಜಿ ಆರಂಭಿಕ ಆಟಗಾರ ಮಿಥುನ್ ಬೀರಾಲ ಈ ಋತುವಿನಲ್ಲಿ ಹರ್ಯಾನವನ್ನು ಪ್ರತಿನಿಧಿಸಲಿದ್ದಾರೆ.

    ಅಂತೆಯೇ ಅರುಣ್ ಕುಮಾರ್ ತೆರವುಗೊಳಿಸಿದ ಅಸ್ಸಾಮ್ ತಂಡದ ನಾಯಕತ್ವವನ್ನು ತಮಿಳುನಾಡಿನ ಶ್ರೀಧರನ್ ಶರತ್ ವಹಿಸಿಕೊಂಡಿದ್ದಾರೆ. ಕಳೆದ ಋತುವಿನ ಅಂತ್ಯದಲ್ಲಿ ಪ್ರಥಮ ದರ್ಜೆ ಕ್ರಿಕೆಟ್-ನಿಂದ ನಿವೃತ್ತಿ ಘೋಷಿಸಿದ್ದ ಶರತ್, ಈಗ ನಿವೃತ್ತಿಯಿಂದ ಹೊರಬಂದು ಅಸ್ಸಾಮ್ ತಂಡದ ಚುಕ್ಕಾಣಿ ಹಿಡಿದಿದ್ದಾರೆ. ಅವರೊಂದಿಗೆ ಮಾಜಿ ಭಾರತ ಮತ್ತು ತಮಿಳುನಾಡಿನ ಆರಂಭಿಕ ಆಟಗಾರ ಸದಗೋಪನ್ ರಮೇಶ್ ಕೂಡಾ ಅಸ್ಸಾಮ್ ಪರವಾಗಿ ಆಡುತ್ತಿದ್ದಾರೆ.

    ಕರ್ನಾಟಕದ ಪಂದ್ಯಗಳು:
    ೧. ನವೆಂಬರ್ ೩ ರಿಂದ ೬ - ಮುಂಬೈ ವಿರುದ್ಧ ಮುಂಬೈನಲ್ಲಿ
    ೨. ನವೆಂಬರ್ ೧೫ ರಿಂದ ೧೮ - ಹಿಮಾಚಲ ಪ್ರದೇಶ ವಿರುದ್ಧ ಬೆಂಗಳೂರಿನಲ್ಲಿ
    ೩. ನವೆಂಬರ್ ೨೩ ರಿಂದ ೨೬ - ತಮಿಳುನಾಡು ವಿರುದ್ಧ ಚೆನ್ನೈನಲ್ಲಿ
    ೪. ಡಿಸೆಂಬರ್ ೧ ರಿಂದ ೪ - ರಾಜಸ್ಥಾನ ವಿರುದ್ಧ ಬೆಂಗಳೂರಿನಲ್ಲಿ
    ೫. ಡಿಸೆಂಬರ್ ೯ ರಿಂದ ೧೨ - ಸೌರಾಷ್ಟ್ರ ವಿರುದ್ಧ ಬೆಂಗಳೂರಿನಲ್ಲಿ
    ೬. ಡಿಸೆಂಬರ್ ೧೭ ರಿಂದ ೨೦ - ದೆಹಲಿ ವಿರುದ್ಧ ಬೆಂಗಳೂರಿನಲ್ಲಿ
    ೭. ಡಿಸೆಂಬರ್ ೨೫ ರಿಂದ ೨೮ - ಮಹಾರಾಷ್ಟ್ರ ವಿರುದ್ಧ ಪುಣೆ/ ಕೊಲ್ಲಾಪುರ/ ನಾಸಿಕ್ ನಲ್ಲಿ

    ಭಾನುವಾರ, ನವೆಂಬರ್ 04, 2007

    ಮತ್ತೊಂದು ಜಲಧಾರೆ


    ಈ ಬಾರಿ ನನ್ನೊಂದಿಗಿದ್ದವರು ವಿನಯ್. ಹೊಸ್ಮಾರು ಎಂಬಲ್ಲಿ ಮಂಗಳೂರಿನಿಂದ ಬರಬೇಕಾಗಿದ್ದ ವಿನಯ್ ತನ್ನ ಪಲ್ಸರ್ ಬೈಕಿನಲ್ಲಿ ಮೊದಲೇ ಬಂದು ನನಗಾಗಿ ಕಾಯುತ್ತಿದ್ದರು. ನನ್ನ ಯಮಾಹಾ ಸ್ವಲ್ಪ ತೊಂದರೆ ಕೊಡುತ್ತಿದ್ದರಿಂದ ಅಂದು ಸ್ವಲ್ಪ ನಿಧಾನವಾಗಿ ಚಲಾಯಿಸಿ ತಡವಾಯಿತು.

    ಒಂದೆಡೆ ತಿರುವು ತಗೊಂಡು ೪ ಕಿಮಿ ಬಳಿಕ ರಸ್ತೆ ಕೊನೆಗೊಳ್ಳುತ್ತದೆ. ಇಲ್ಲೇ ನಮ್ಮ ಬೈಕುಗಳನ್ನಿಟ್ಟು ಜಲಪಾತದೆಡೆ ನಡೆಯಲಾರಂಭಿಸಿದೆವು. ಸುಮಾರು ದೂರ 'ಜೀಪ್ ಟ್ರ್ಯಾಕ್' ನಲ್ಲಿ ದಾರಿ ಸಾಗಿದರೆ ನಂತರದ ಹಾದಿ ಕಾಲುದಾರಿ. ಸುಮಾರು ೪೦ ನಿಮಿಷಗಳ ಬಳಿಕ ಬಲಕ್ಕೆ ಸಿಗುವ ಸಣ್ಣ ತೋಟವೊಂದು 'ಲ್ಯಾಂಡ್ ಮಾರ್ಕ್'. ಇಲ್ಲೇ ಸ್ವಲ್ಪ ಮುಂದೆ ಎಡಕ್ಕೆ ಸಿಗುವ ಕಾಲುದಾರಿಯಲ್ಲಿ ಕಣಿವೆಯಲ್ಲಿಳಿದರೆ ದಾರಿ ಜಲಪಾತದ ಮೇಲ್ಭಾಗಕ್ಕೆ ಬಂದು ಕೊನೆಗೊಳ್ಳುತ್ತದೆ. ೨ ವರ್ಷಗಳ ಹಿಂದೆ ಇಲ್ಲಿಗೆ ಬಂದಾಗ ಕೆಳಗಿಳಿಯಲು ದಾರಿ ಗೊತ್ತಾಗದೆ ಮೇಲಿನಿಂದಲೇ ಕತ್ತು ಕೊಂಕಿಸಿ ನೀರು ಕೆಳಗೆ ಧುಮುಕುವುದನ್ನು ನೋಡಿ ಅಸಮಾಧಾನದಿಂದಲೇ ಹಿಂತಿರುಗಿದ್ದೆ. ಕೆಳಗಿಳಿದು ನೋಡಬೇಕು ಎಂದೇ ಈ ಬಾರಿಯ ಭೇಟಿಯನ್ನು ಹಮ್ಮಿಕೊಂಡಿದ್ದು.


    ಕೆಳಗಿಳಿಯಲು ದಾರಿಯೇ ಇರಲಿಲ್ಲ. ಮುಳ್ಳುಕಂಟಿಗಳ ನಡುವೆ ಸಣ್ಣ ದಾರಿ ಮಾಡಿಕೊಂಡು ವಿನಯ್ ಸ್ವಲ್ಪ ಮುಂದೆ ಹೋಗಿ ನಂತರ ದಾರಿ ಮಾಡಲೂ ಸಾಧ್ಯವಿರಲಿಲ್ಲವಾದ್ದರಿಂದ ಹಿಂತಿರುಗಿದರು. ಜಲಪಾತದ ಪಾರ್ಶ್ವಕ್ಕೆ ಬಂದು, ಸ್ವಲ್ಪ ಕೆಳಗಿಳಿದು ಪ್ರಯತ್ನಿಸಿದರೂ ನೋ ಸಕ್ಸೆಸ್. ಸಾಧ್ಯವಿಲ್ಲ ಎಂದು ಮರಳಿ ಮೇಲೇರುವಾಗ, ವಿನಯ್ ಅಲ್ಲೇ ಬದಿಯಲ್ಲಿ ಸಣ್ಣ 'ಓಪನಿಂಗ್'ನೊಳಗೆ ಹೇಗೋ ನೂರಿ, ಮುಳ್ಳುಕಂಟಿಗಳನ್ನು ಬದಿಗೆ ಸರಿಸಿ ದಾರಿ ಮಾಡಿಕೊಂಡು ಮುನ್ನಡೆದರು. ಹೆದರಿಕೆಯಾಗುತ್ತಿದ್ದರೂ, ತೋರ್ಗೊಡದೆ ಮೌನವಾಗಿ ಅವರನ್ನು ಹಿಂಬಾಲಿಸಿದೆ. ಕಗ್ಗತ್ತಲಿನಂತಿದ್ದ ಜಾಗ. ಮರಗಳ ಬುಡದಲ್ಲಿ ಏನೇನೋ ಗೂಡುಗಳು. ಇಳಿಜಾರಿನ ದಾರಿಯಾಗಿತ್ತು. ಕೊನೆಯ ೫ ಅಡಿಯಷ್ಟು ಅಂತರವನ್ನು ಬಹಳ ಕಷ್ಟದಿಂದ ದಾಟಿ, ೧೫ ನಿಮಿಷದಲ್ಲಿ ಜಲಪಾತದ ಬುಡದಲ್ಲಿದ್ದೆವು.

    ವಿನಯ್ ಜೊತೆಯಿರದಿದ್ದರೆ ನನ್ನಿಂದ ಜಲಪಾತದ ಬುಡಕ್ಕೆ ತೆರಳಲು ಸಾಧ್ಯವಿರುತ್ತಿರಲಿಲ್ಲ. ಇಲ್ಲಿಂದ ಸಿಕ್ಕ ನೋಟ ಅದ್ಭುತ. ಮೇಲಿನಿಂದ ನೇರವಾಗಿ ಧುಮುಕುತ್ತಿರುವಂತೆ ಕಾಣುತ್ತಿದ್ದ ಜಲಪಾತ, ಕೆಳಗಿನಿಂದ ನೋಡಿದಾಗ ೧೨೦ ಡಿಗ್ರೀ ಆಕಾರದಲ್ಲಿದ್ದು ತನ್ನ ನಿಜವಾದ ರೂಪವನ್ನು ತೋರ್ಪಡಿಸಿತ್ತು. ಈ ಜಲಧಾರೆ ಕುದುರೆಮುಖ ರಕ್ಷಿತಾರಣ್ಯದ ಪರಿಧಿಯೊಳಗಡೆ ಇದೆ.


    ಜಲಪಾತ ೩ ಹಂತಗಳನ್ನೊಳಗೊಂಡಿದೆ. ನಾವು ಬಂದಿದ್ದು ೨ನೇ ಹಂತದ ಬುಡಕ್ಕೆ. ಇನ್ನೂ ಕೆಳಗೆ ಇಳಿಯುವುದು ಅಪಾಯಕಾರಿಯಾಗಿದ್ದರಿಂದ ಆ ವಿಚಾರವನ್ನು ಕೈಬಿಟ್ಟೆವು. ಜಲಪಾತದ ಒಟ್ಟಾರೆ ಎತ್ತರ ೧೨೦ ಅಡಿಗಳಷ್ಟು ಇರಬಹುದು.

    ಮಾಹಿತಿ: ಉಮೇಶ ನಡ್ತಿಕಲ್

    ಭಾನುವಾರ, ಅಕ್ಟೋಬರ್ 28, 2007

    ಹಳ್ಳಿಯೊಂದರಲ್ಲಿರುವ ಜಲಧಾರೆಗಳು


    ಈ ಹಳ್ಳಿಯ ಜನರು ತಮಗೆ ಸಾಕಾಗುವಷ್ಟು ವಿದ್ಯುತ್ತನ್ನು ಯಾರ ನೆರವಿಲ್ಲದೇ ಉತ್ಪಾದಿಸಿಕೊಳ್ಳುವ ಬಗ್ಗೆ ಲೇಖನವೊಂದು 'ತರಂಗ'ದಲ್ಲಿ ಬಂದಿತ್ತು. ಗೆಳೆಯ ದಿನೇಶ್ ಹೊಳ್ಳರ ಆಫೀಸಿನಲ್ಲಿ ಅವರ ಚಾರಣ ಸಂಬಂಧಿತ ಲೇಖನ ಸಂಗ್ರಹದೆಡೆ ಕಣ್ಣಾಡಿಸುತ್ತಿರುವಾಗ ಈ ಲೇಖನ ಸಿಕ್ಕಿತು. ಆ ಲೇಖನದಲ್ಲಿದ್ದ ಚಿತ್ರವೊಂದರಲ್ಲಿ ನಾಲ್ಕಾರು ಜನರು ನಿಂತಿದ್ದರೆ ಅವರ ಹಿಂದೆ ಅಸ್ಪಷ್ಟವಾಗಿ ಜಲಧಾರೆಯೊಂದು ಗೋಚರಿಸುತ್ತಿತ್ತು. ಜಲಪಾತ ಕಂಡೊಡನೆ ಇನ್ನಷ್ಟು ಆಸಕ್ತಿಯಿಂದ ಕಣ್ಣಾಡಿಸಿದಾಗ ಎಳನೀರು, ಸಂಸೆಯ ಸಮೀಪವಿರುವುದೆಂದು ತಿಳಿಯಿತು.

    ಈ ಎಳೆಯನ್ನು ಹಿಡಿದು ೨೦೦೪ರ ಫೆಬ್ರವರಿ ತಿಂಗಳ ಅದೊಂದು ರವಿವಾರ ಯಮಾಹಾವನ್ನು ಈ ಹಳ್ಳಿಯತ್ತ ಓಡಿಸಿದೆ. ಜಲಪಾತದಿಂದ ಹರಿದು ಬರುವ ನೀರನ್ನು ದಾಟಿಹೋಗಲು ಇರುವ ಸಣ್ಣ ಸೇತುವೆಯನ್ನು ದಾಟಿದ ಕೂಡಲೇ ಸಿಗುವ ಮೊದಲ ಮನೆ ಶ್ರೀ ಸತ್ಯೇಂದ್ರ ಹೆಗಡೆಯವರದ್ದು. ಇವರ ಮನೆಯ ಹಿಂಭಾಗದಲ್ಲಿರುವ ತೋಟದಲ್ಲಿ ಒಂದೈದು ನಿಮಿಷ ಮೇಲೇರಿದರೆ ಮಾವಿನಸಸಿ ಹೊಳೆಯಿಂದ ನಿರ್ಮಿತವಾಗುವ ಈ ಜಲಪಾತದೆಡೆ ತಲುಪಬಹುದು. ಜಲಧಾರೆ ಸಂಪೂರ್ಣವಾಗಿ ಒಣಗಿತ್ತು. ಇದೊಂದು ಮಳೆಗಾಲದ ಜಲಧಾರೆ ಎಂಬ ವಿಷಯ ತಿಳಿದಿರಲಿಲ್ಲ. 'ಮಳೆ ಬಿದ್ದ ಮೇಲೆ ಬನ್ನಿ. ಚೆನ್ನಾಗಿರುತ್ತೆ', ಎಂದು ಹೆಗ್ಡೆಯವರು ನನ್ನನ್ನು ಬೀಳ್ಕೊಟ್ಟರು. ಆ ವರ್ಷ ಮಳೆರಾಯ ಬೇಗನೇ ಆಗಮಿಸಿದ್ದರಿಂದ ಮೇ ತಿಂಗಳ ಕೊನೆಗೆ ಮತ್ತೂಮ್ಮೆ ಈ ಹಳ್ಳಿಗೆ ಭೇಟಿ ನೀಡಿದೆ. ಮತ್ತೆ ಹೆಗ್ಡೆಯವರು ಆದರದಿಂದ ಬರಮಾಡಿಕೊಂಡರು. ಆದರೆ ಮಾವಿನಸಸಿಹೊಳೆ ಜಲಪಾತದಲ್ಲಿ ನೀರಿನ ಪ್ರಮಾಣ ಕಡಿಮೆ ಇತ್ತು. 'ಬಹಳ ಬೇಗನೇ ಬಂದ್ಬಿಟ್ರಿ. ಒಂದೆರಡು ತಿಂಗಳು ಬಿಟ್ಟು ಬರ್ಬೇಕಿತ್ತು', ಎನ್ನುತ್ತಾ ಮತ್ತೊಮ್ಮೆ ಹೆಗ್ಡೆಯವರು ಬೀಳ್ಕೊಟ್ಟರು.

    ಜೂನ್ ೨೦೦೪ರ ಕೊನೇ ವಾರದಲ್ಲಿ ಗೆಳೆಯ ದಿನೇಶ್ ಹೊಳ್ಳ, 'ನಿಮ್ಮಲ್ಲಿ ಮಾವಿನಸಸಿಹೊಳೆ ಜಲಪಾತದ ಫೋಟೊ ಇದೆಯಾ' ಎಂದು ಕೇಳಿದಾಗ, 'ಇದೆ, ಆದರೆ ಹೆಚ್ಚು ನೀರಿರಲಿಲ್ಲ ಅಲ್ಲಿ. ಬೇಕಿದ್ದರೆ ಮತ್ತೊಮ್ಮೆ ಹೊಗೋಣ' ಎಂದಾಗ ಅವರು ಒಪ್ಪಿದರು. ಶನಿವಾರ ನಮಗೆ 'ಹಾಫ್ ಡೇ' ಆಗಿರುವುದು ಚಾರಣ/ಪ್ರಯಾಣ ಕಾರ್ಯಕ್ರಮಗಳಿಗೆ ಬಹಳ ಉಪಯುಕ್ತವಾಗುತ್ತದೆ. ಜುಲಾಯಿ ೩, ೨೦೦೪ ರಂದು ಮತ್ತೆ ಈ ಹಳ್ಳಿಯೆಡೆ ಹೊರಟೆ. ಈ ಬಾರಿ ಜೊತೆಯಲ್ಲಿ ದಿನೇಶ್ ಇದ್ದರು. ನಾವಿಬ್ಬರೂ ಮಂಗಳೂರಿನಿಂದ ಹೊರಟಾಗಲೇ ಮಧ್ಯಾಹ್ನ ೧.೩೦ ಆಗಿತ್ತು. ಮೂಡಬಿದ್ರೆಯಲ್ಲಿ ಟಯರ್ ಪಂಕ್ಚರ್ ಆಗಿ, ಸರಿ ಮಾಡಿಸಿ ಹೊರಟಾಗ ೩.೩೦. ರಭಸವಾಗಿ ಮಳೆ ಸುರಿಯುತ್ತಿದ್ದರಿಂದ ನಿಧಾನವಾಗಿ ಬೈಕನ್ನು ಚಲಾಯಿಸಬೇಕಾಯಿತು. ಹಳ್ಳಿ ತಲುಪಿದಾಗ ಸಂಜೆ ೬ ಆಗಿತ್ತು.


    ಮತ್ತೊಮ್ಮೆ ಸತ್ಯೇಂದ್ರ ಹೆಗ್ಡೆ ನನ್ನನ್ನು ಬರಮಾಡಿಕೊಂಡರು. ಅಂತೂ ನನ್ನ ೩ನೇ ಭೇಟಿಯಲ್ಲಿ ಏನು ನೋಡಬೇಕಿತ್ತೋ ಅದು ಸಾಧ್ಯವಾಯಿತಲ್ಲಾ ಎಂದು ಅವರಿಗೆ ಖುಷಿ. ಮಾವಿನಸಸಿಹೊಳೆ ಜಲಪಾತ ಭೋರ್ಗರೆಯುತ್ತಿತ್ತು. ವಿದ್ಯುತ್ ಉತ್ಪಾದಿಸುವ ಪಂಪ್ ಹೌಸ್ ಬಳಿ ನಿಧಾನವಾಗಿ ಕೆಳಗಿಳಿದು, ರಭಸವಾಗಿ ಹರಿಯುತ್ತಿದ್ದ ಮಾವಿನಸಸಿಹೊಳೆಯಲ್ಲಿ ಕಾಲಿಟ್ಟೆವು. ತಂಪು ತಂಪು ತಂಪು. ಹಾಕಿದ್ದ ರೈನ್ ಕೋಟ್ ನ್ನು ಭೇದಿಸಿ ಚಳಿಗಾಳಿ ಮೈಯನ್ನು ಕೊರೆಯುತ್ತಿತ್ತು. ಈ ನೀರು ಇನ್ನಷ್ಟು ತಂಪಾಗಿದ್ದು, ನೀರಲ್ಲಿ ಹೆಜ್ಜೆಯಿಟ್ಟು ಮುನ್ನಡೆಯಲು ಕಷ್ಟವಾಗುತ್ತಿತ್ತು. ಮೇಲೆ ಸುಮಾರು ೪೦ಅಡಿಯಷ್ಟು ಎತ್ತರದಿಂದ ಧುಮುಕುವ ಮಾವಿನಸಸಿಹೊಳೆ ಜಲಪಾತ ನಂತರ ಇಳಿಜಾರಿನಲ್ಲಿ ರಭಸವಾಗಿ ಕೆಳಗೆ ಹರಿಯುತ್ತದೆ. ಈ ಇಳಿಜಾರನ್ನೂ ಸೇರಿಸಿದರೆ ಒಟ್ಟಾರೆ ಎತ್ತರ ಸುಮಾರು ೭೦ಅಡಿಯಷ್ಟು ಆಗಬಹುದು. ಸರಿಯಾಗಿ ಜಲಪಾತದ ಮುಂದೆ ನಿಂತರೆ ಅದೊಂದು ಮೋಹಕ ದೃಶ್ಯ. ಬೇಕಾದ ಫೋಟೋಗಳನ್ನು ಕ್ಲಿಕ್ಕಿಸಿ, ಅಲ್ಲೊಂದು ೧೫ನಿಮಿಷ ಕಳೆದು ಮರಳಿ ಹೆಗ್ಡೆಯವರ ಮನೆಗೆ ಬಂದೆವು.


    ಆಗ ಹೆಗ್ಡೆಯವರು ಅವರ ಮನೆಯ ಮುಂದಿರುವ ಗುಡ್ಡದಲ್ಲಿ, ಕಾಡಿನ ಮರೆಯಲ್ಲಿ ಅಡಗಿರುವ ಮತ್ತೊಂದು ಜಲಪಾತವನ್ನು ತೋರಿಸಿದರು. ಒಂದು ಜಲಧಾರೆ ನೋಡಲು ಬಂದ ನಮಗೆ ಇದೊಂದು ಬೋನಸ್. ಈ ಜಲಪಾತದ ಹೆಸರು ಬಡಮನೆ ಅಬ್ಬಿ ಜಲಪಾತ ಎಂದು. ಬಡಮನೆ ಎಂಬ ಹಳ್ಳಿಯಿಂದ ಹರಿದು ಬರುವ ಹಳ್ಳದಿಂದ ಉಂಟಾಗಿರುವುದರಿಂದ ಈ ಜಲಪಾತಕ್ಕೆ ಆ ಹೆಸರು. ಅವರ ಮನೆಯಿಂದ ೫ನಿಮಿಷ ನಡೆದು, ೧೫ ನಿಮಿಷ ಕಠಿಣ ಏರುದಾರಿಯನ್ನು ಹತ್ತಿ, ಈ ಜಲಪಾತದ ಪಾರ್ಶ್ವಕ್ಕೆ ಬರಬಹುದು. ಸುಮಾರು ೬೦ಅಡಿ ಎತ್ತರವಿರುವ ಒಂದೇ ಜಿಗಿತದ ಜಲಧಾರೆ, ನಂತರ ಮುಂದೆ ೧೦೦ಅಡಿಗಳಷ್ಟು ಕೆಳಗೆ ಅಡ್ಡಾದಿಡ್ದಿಯಾಗಿ ಹರಿದು, ಮಾವಿನಸಸಿಹೊಳೆ ಜಲಪಾತದಿಂದ ಹರಿದು ಬರುವ ನೀರನ್ನು ಸೇರಿಕೊಳ್ಳುತ್ತದೆ. ಹಳ್ಳಿಯಿಂದ ಸುಮಾರು ಒಂದು ತಾಸು ನಡೆದರೆ ಬಂಗ್ರಬಲಿಗೆ ಎಂಬಲ್ಲಿ ಇನ್ನೊಂದು ಸಣ್ಣ ಜಲಪಾತವಿದೆ ಎಂದು ಹೆಗ್ಡೆಯವರು ತಿಳಿಸಿದಾಗ ನನಗಿನ್ನೂ ಸಂತೋಷವಾಯಿತು. ಅಂದು ಅದಾಗಲೇ ಕತ್ತಲಾಗುತ್ತಿದ್ದರಿಂದ 'ಮುಂದಿನ ಸಲ ಬಂದಾಗ ಕರೆದೊಯ್ಯುವೆ' ಎಂದು ನಮ್ಮನ್ನು ಬೀಳ್ಕೊಟ್ಟರು ಹೆಗ್ಡೆಯವರು.

    ನಾವು ಹಳ್ಳಿಯಿಂದ ಹೊರಟಾಗ ೭.೧೫ ಆಗಿತ್ತು. ಘಾಟಿಯಲ್ಲಿ ದಟ್ಟವಾದ ಮಂಜು. ಏನೇನೂ ಕಾಣಿಸುತ್ತಿರಲಿಲ್ಲ. ರಸ್ತೆಯ ಅಂಚಿನಲ್ಲಿ ಬೆಳೆದಿರುವ ಹುಲ್ಲು ಮಾತ್ರ 'ಹೆಡ್ ಲೈಟ್' ಬೆಳಕಿನಲ್ಲಿ ಮುಂದಿನ ಚಕ್ರದ ಪಕ್ಕದಲ್ಲಿ ಮಾತ್ರ ಕಾಣಿಸುತ್ತಿತ್ತು. ಅದನ್ನೇ ಆಧಾರವಾಗಿಟ್ಟುಕೊಂಡು ಬಹಳ ನಿಧಾನವಾಗಿ ಬೈಕು ಚಲಾಯಿಸುತ್ತಾ ಬಂದೆವು. ೧೦ಕಿಮಿ ಕ್ರಮಿಸಲು ೪೦ ನಿಮಿಷ ಬೇಕಾದವು. ಹಾಗಿತ್ತು ಮಂಜಿನ ಹಿತವಾದ ಹಾವಳಿ. ಮಂಗಳೂರು ತಲುಪುವಷ್ಟರಲ್ಲಿ ಉಡುಪಿಗೆ ಕೊನೆಯ ಬಸ್ಸು ಹೊರಟಾಗಿರುತ್ತದೆ ಎಂದು, ಪಡುಬಿದ್ರೆ ಎಂಬಲ್ಲಿಗೆ ಬಂದಾಗ ೧೦.೩೦ ಆಗಿತ್ತು. ಇಲ್ಲಿಂದ ನಾನು ಬಸ್ಸಿನಲ್ಲಿ ಉಡುಪಿಗೆ ಬಂದರೆ ದಿನೇಶ್ ನನ್ನ ಬೈಕನ್ನು ಚಲಾಯಿಸಿ ಮಂಗಳೂರಿನೆಡೆ ತೆರಳಿದರು.

    ಇದೊಂದು ಶಾಂತ ಮತ್ತು ಸುಂದರ ಹಳ್ಳಿ. ೨ ಗುಡ್ಡಗಳ ನಡುವೆ ಇರುವ ಈ ಹಳ್ಳಿಗೆ ದಾರಿ ಇರುವುದು ಬಲಬದಿಯ ಗುಡ್ಡದಿಂದ. ನಾಲ್ಕಾರು 'ಯು' ತಿರುವುಗಳನ್ನೊಳಗೊಂಡ ಈ ರಸ್ತೆಯನ್ನು ಹಳ್ಳಿಗರೇ ನಿರ್ಮಿಸಿಕೊಂಡಿದ್ದಾರೆ. ಯಾವಾಗಲೂ ಇರುವ ಮಂಜು, ನೀರಿನ ಸದ್ದು, ತಂಪಾದ ಗಾಳಿ, ೨ ಜಲಪಾತಗಳು, ಅನತಿ ದೂರದಲ್ಲಿ ದಟ್ಟವಾದ ಕಾಡು ಮತ್ತು ಯಾವಾಗಲೂ ನಗುನಗುತ್ತಾ ಸ್ವಾಗತಿಸುವ ಜನರು, ಇಷ್ಟೆಲ್ಲಾ ಇರುವ ಈ ಹಳ್ಳಿಗೆ ಸರಿಯಾದ ಹೆಸರೇ ಸಿಕ್ಕಿದೆ.

    ಹಳ್ಳಿಗೆ ವಿದ್ಯುತ್ ಸಂಪರ್ಕ ಇಲ್ಲ. ಅದ್ದರಿಂದ ಹಳ್ಳಿಗರು ಮಾವಿನಸಸಿಹೊಳೆ ಜಲಪಾತ ಧುಮುಕುವಲ್ಲಿ ಸಣ್ಣ ಟರ್ಬೈನ್ ಒಂದನ್ನು ಹಾಕಿ ೩೦ ಮನೆಗಳಿಗಾಗುವಷ್ಟು ವಿದ್ಯುತ್ತನ್ನು ಉತ್ಪಾದಿಸುತ್ತಾರೆ. ಆದರೆ ಈ ವ್ಯವಸ್ಥೆ ನವೆಂಬರ್ ತಿಂಗಳವರೆಗೆ ಮಾತ್ರ ಕಾರ್ಯಮಾಡುತ್ತದೆ. ಆನಂತರ ನೀರಿನ ಹರಿವು ಕಡಿಮೆಯಾಗುವುದರಿಂದ ನಂತರದ ೬-೭ ತಿಂಗಳು ಮತ್ತೆ ಕತ್ತಲೆ.

    ಹಳ್ಳಿಗೆ ದಾರಿ ಚಿಕ್ಕಮಗಳೂರು ಜಿಲ್ಲೆಯಿಂದ ಇದ್ದರೂ, ಅದು ಒಳಪಟ್ಟಿರುವುದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿಗೆ. ಘಟ್ಟದ ಕೆಳಗೆ ಬೆಳ್ತಂಗಡಿ ತಾಲೂಕಿನ ಕೊನೆಯ ಗ್ರಾಮವಾದ ದಿಡುಪೆಗೆ ಇಲ್ಲಿಂದ ಕೇವಲ ೯ ಕಿಮಿ ದೂರ. ಆದರೆ ಈ ದಾರಿಯಲ್ಲಿ ವಾಹನ ಓಡಾಡದು. ತಾಲೂಕು ಕೇಂದ್ರವಾದ ಬೆಳ್ತಂಗಡಿಗೆ ಬರಬೇಕಾದ್ದಲ್ಲಿ ಸುತ್ತುಬಳಸಿ, ೧೦೦ಕಿಮಿ ದೂರವನ್ನು ಕ್ರಮಿಸಬೇಕು. ದಿಡುಪೆ ಮೂಲಕವಾದರೆ ಕೇವಲ ೨೮ ಕಿಮಿ. ಈ ರಸ್ತೆಯನ್ನು, ಸರಿಪಡಿಸಬೇಕೆಂದು ಸರ್ಕಾರದ ಮುಂದಿಟ್ಟಿರುವ ಮನವಿ ಹಾಗೇ ಉಳಿದಿದೆ. ಈ ಕಡೆ ರಸ್ತೆ ಮಾಡಬಾರದೆಂದು ಅರಣ್ಯ ಇಲಾಖೆಯ ಕಟ್ಟಪ್ಪಣೆ.

    ಕೊನೆಗೂ ಬೇಸತ್ತ ಜನರು, ಹಾರೆ, ಗುದ್ದಲಿ ಇತ್ಯಾದಿ ಸಲಕರಣೆಗಳನ್ನು ಹಿಡಿದು, ಗುಪ್ತ ಕಾರ್ಯಾಚರಣೆಯೊಂದರಲ್ಲಿ ೨-೩ ವಾರ, ಪ್ರತಿ ದಿನ ರಾತ್ರಿ ಈ ರಸ್ತೆಯನ್ನು ಸರಿ ಮಾಡುವ ಕಾಯಕಕ್ಕಿಳಿದರು. ಇದು ನಡೆದದ್ದು ಸುಮಾರು ಒಂದು ವರ್ಷದ ಹಿಂದೆ. ಈ ವಿಷಯವನ್ನು ಬಲೂ ಗುಪ್ತವಾಗಿರಿಸಲಾಗಿತ್ತು. ೩-೪ ವಾರಗಳಲ್ಲಿ ರಸ್ತೆ ರೆಡಿಯಾಯಿತು. ಅರಣ್ಯ ಇಲಾಖೆಗೆ ತಿಳಿದು ಅವರು ಓಡೋಡಿ ಬಂದು, ರಸ್ತೆ ನೋಡಿ ಗುಟುರು ಹಾಕಿದರಷ್ಟೇ ವಿನ: ಮತ್ತೇನೂ ಮಾಡಲಾಗಲಿಲ್ಲ ಅವರಿಂದ. ಹಳ್ಳಿಗರಲ್ಲಿ ಕೇಳಿದರೆ, 'ನಮಗೆ ಗೊತ್ತಿಲ್ಲ ರಸ್ತೆ ಯಾರು ಮಾಡಿದರೆಂದು' ಎಂಬ ನಿರ್ಲಿಪ್ತ ಉತ್ತರ. ಕೇಸು ಹಾಕೋಣವೆಂದರೆ ಯಾರ ಮೇಲೆ? ಮತ್ತು, '೮-೯ ಕಿಮಿ ರಸ್ತೆ ಮಾಡುತ್ತಿರಬೇಕಾದರೆ, ಈ ಅರಣ್ಯ ಇಲಾಖೆ ಏನು ಮಾಡುತ್ತಿತ್ತು? ಗಾಢ ನಿದ್ರೆಯಲ್ಲಿತ್ತೇ' ಎಂಬ ಪ್ರಶ್ನೆಗಳಿಗೆ ಉತ್ತರ ನೀಡಿ ಮುಜುಗರಕ್ಕೊಳಬೇಕಾಗುವ ಸಂಧಿಗ್ದ ಪರಿಸ್ಥಿತಿ! ಈಗ ಈ ರಸ್ತೆಯಿಂದ ಹಳ್ಳಿಗರು ಜೀಪ್, ಬೈಕುಗಳನ್ನು ಸಲೀಸಾಗಿ ಓಡಿಸಿ ದಿಡುಪೆ ಮೂಲಕ ಸುಲಭದಲ್ಲಿ ತಾಲೂಕು ಕೇಂದ್ರ ಬೆಳ್ತಂಗಡಿಗೆ ತೆರಳುತ್ತಾರೆ.

    ಈ ಹಳ್ಳಿಗೆ ಮೊದಲು ಹೆಚ್ಚಿನವರು ಚಾರಣಕ್ಕೆಂದು ಬರುತ್ತಿರಲಿಲ್ಲ. ನಾನು ತೆರಳಿದ ನಂತರ, ಮಂಗಳೂರು ಯೂತ್ ಹಾಸ್ಟೆಲಿನ ೩ ಚಾರಣ ಕಾರ್ಯಕ್ರಮಗಳನ್ನು ಈ ಹಳ್ಳಿಗೆ, ಬಂಗ್ರಬಲಿಗೆ ಮತ್ತು ಹಿರಿಮರಿಗುಪ್ಪೆಗೆ ಆಯೋಜಿಸಲಾಗಿತ್ತು. ಈ ಚಾರಣಗಳಿಗೆ ಬಂದವರು ನಂತರ ಅವರಾಗಿಯೇ ಗುಂಪು ಕಟ್ಟಿಕೊಂಡು ಈ ಸ್ಥಳಗಳಿಗೆ ಹೋಗಿ ಬರಲು ಆರಂಭಿಸಿದರು. ಹಳ್ಳಿಯಿಂದ ಬಂಗ್ರಬಲಿಗೆ ದಾರಿಯಲ್ಲಿ ಸ್ವಲ್ಪ ದೂರ ಕಾಲಿಟ್ಟರೆ, ಅದು ಕುದುರೆಮುಖ ರಕ್ಷಿತಾರಣ್ಯಕ್ಕೆ ಒಳಪಟ್ಟಿರುವ ಜಾಗ. ಅದಲ್ಲದೇ ಹಳ್ಳಿಗೆ ಇಳಿಯುವಾಗ ಸಿಗುವ 'ಯು' ತಿರುವುಗಳಲ್ಲಿ ೨ ತಿರುವುಗಳು ಕುದುರೆಮುಖ ರಕ್ಷಿತಾರಣ್ಯದೊಳಗೇ ಇವೆ! ಎಲ್ಲಾಕಡೆ ಗೇಟುಗಳನ್ನು ಹಾಕಿ ರಕ್ಷಿತಾರಣ್ಯದೊಳಗೆ ಅಪ್ಪಣೆಯಿಲ್ಲದೆ ಯಾರಿಗೂ ಪ್ರವೇಶವಿಲ್ಲದಂತೆ ಮಾಡಿದ್ದ ಅರಣ್ಯ ಇಲಾಖೆಗೆ, ಈ ಹಳ್ಳಿಯ ಮುಖಾಂತರ ಇತ್ತೀಚೆಗೆ ಬಹಳಷ್ಟು ಚಾರಣ ಕುದುರೆಮುಖ ರಕ್ಷಿತಾರಣ್ಯದೊಳಗೆ ನಡೆಯುತ್ತಿದೆ ಎಂಬ ಮಾಹಿತಿ ದೊರಕಿತು.

    ನಮ್ಮೊಲ್ಲೊಬ್ಬರಾದ ಗಣಪತಿ ಭಟ್ಟರು ತನ್ನ ಕಾಲೇಜಿನ ಮಕ್ಕಳನ್ನು ಕರಕೊಂಡು ಒಂದು ದಿನದ ಚಾರಣಕ್ಕೆ ಇಲ್ಲಿಗೆ ತೆರಳಿದರೆ, ಇಳಿಜಾರಿನ ದಾರಿ ಶುರುವಾಗುವಲ್ಲೇ ಅರಣ್ಯ ಇಲಾಖೆಯ ಗೇಟು ಮತ್ತು ಆ ಗೇಟನ್ನು ಕಾಯಲು ಇಬ್ಬರು ಸಿಬ್ಬಂದಿಗಳು! ಅಪ್ಪಣೆಯಿಲ್ಲದೆ ಒಳಗೆ ಪ್ರವೇಶವಿಲ್ಲ ಎಂಬ ನಾಟಕ ಬೇರೆ. ಮೊನ್ನೆ ಎಪ್ರಿಲ್ ೨೦೦೭ರ ಅದೊಂದು ರವಿವಾರ ಗೆಳೆಯರಾದ ರಮೇಶ್ ಕಾಮತ್ ಮತ್ತು ಸುಧೀರ್ ಕುಮಾರ್ ಸಂಸಾರ ಸಮೇತ ಆದಿತ್ಯವಾರ ಕಳೆಯಲೆಂದು ಕುದುರೆಮುಖಕ್ಕೆ ತೆರಳಿದ್ದರು. ಪರಿಚಯವಿದ್ದುದರಿಂದ ಹಳ್ಳಿಗೆ ತೆರಳಿ ಹೆಗಡೆಯವರನ್ನು ಭೇಟಿ ಮಾಡಿ ಬರೋಣ ಎಂದು ಸಿಹಿತಿಂಡಿ ಇತ್ಯಾದಿಗಳನ್ನು ಮಂಗಳೂರಿನಿಂದಲೇ ಖರೀದಿಸಿ ತೆರಳಿದ್ದರು. ಆಗ ಅಲ್ಲಿ ಗೇಟ್ ಇರಲಿಲ್ಲ! ಅಲ್ಲೇ ವಾಹನ ನಿಲ್ಲಿಸಿ ಇಳಿಜಾರಿನ ಹಾದಿಯಲ್ಲಿ ನಡೆಯುತ್ತಾ ಸಾಗುತ್ತಿರುವಾಗ, ಕೆಳಗೆ ಸತ್ಯೇಂದ್ರ ಹೆಗಡೆಯವರು ತಮ್ಮ ಮನೆಯ ಮೇಲೇರಿ ಹೆಂಚುಗಳನ್ನು ಸರಿಪಡಿಸುತ್ತಿರುವುದನ್ನು ಇವರು ನೋಡಿದ್ದಾರೆ. ಇವರು ಬರುತ್ತಿರುವುದನ್ನು ಕಂಡ ಹೆಗಡೆಯವರು ಅವಸರದಿಂದ ಕೆಳಗಿಳಿದು ಮನೆಯೊಳಗೆ ತೆರಳಿದ್ದನ್ನೂ ಇವರು ನೋಡಿದ್ದಾರೆ. ಮನೆಗೆ ತೆರಳಿದರೆ ಹೆಗಡೆಯವರ ಮಕ್ಕಳಿಬ್ಬರು 'ಅಪ್ಪ ಅಮ್ಮ ಇಬ್ಬರೂ ಇಲ್ಲ' ಎಂದು ಇವರು ಕೇಳುವ ಮೊದಲೇ ಹೇಳಿದ್ದಾರೆ.

    ಬಹುಶ: ಅರಣ್ಯ ಇಲಾಖೆಯ ಗತ್ತಿನ ಅಧಿಕಾರಿಗಳು ಹೆಗಡೆಯವರಿಗೆ ಬಹಳ ಕಿರುಕುಳ ಕೊಟ್ಟಿರಬೇಕು. ಯಾರು ಬಂದಿರುವುದು, ಯಾಕೆ ಬಂದಿದ್ದರು, ನೀವ್ಯಾಕೆ ಅವರನ್ನು ಅಲ್ಲಿಲ್ಲಿ ಕರಕೊಂಡು ಜಾಗಗಳನ್ನು ತೋರಿಸುತ್ತಿದ್ದೀರಿ ...ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳಿ ಬಹಳ ಕಾಟ ಕೊಟ್ಟಿರಬೇಕು. ದೂರದಲ್ಲಿ ನನ್ನ ಬೈಕ್ ಕಂಡೊಡನೆ ಮನೆಯಿಂದ ಹೊರಬಂದು ಮಂದಹಾಸ ಬೀರುತ್ತಾ ಸ್ವಾಗತಿಸುತ್ತಿದ್ದ ಸತ್ಯೇಂದ್ರ ಹೆಗಡೆಯವರು, ತಾನು ಮನೆಯೊಳಗಿದ್ದೂ, ಮಕ್ಕಳಿಂದ 'ಇಲ್ಲ' ಎಂದು ಹೇಳಿಸಬೇಕಾದರೆ ಈ ಅರಣ್ಯ ಇಲಾಖೆಯ ದರಿದ್ರ ಸಿಬ್ಬಂದಿಗಳು ಅವರನ್ನು ಯಾವ ಪರಿ ಕಾಡಿರಬೇಡ.

    ಈಗ ನಮ್ಮಲ್ಲಿ ಯಾರೂ ಈ ಹಳ್ಳಿಯೆಡೆ ಹೋಗುವ ಮಾತನ್ನಾಡುತ್ತಿಲ್ಲ. ನಮ್ಮಿಂದ ಹಳ್ಳಿಗರಿಗೆ ತೊಂದರೆಯುಂಟಾಗುವುದಾದರೆ ನಾವು ಅಲ್ಲಿಂದ ದೂರ ಉಳಿಯುವುದೇ ಒಳಿತು.

    ಮಾಹಿತಿ: ಯು.ಬಿ.ರಾಜಲಕ್ಷ್ಮೀ

    ಭಾನುವಾರ, ಅಕ್ಟೋಬರ್ 21, 2007

    ಇನ್ನೆರಡು ಜಲಧಾರೆಗಳು


    ಮನೆಯೊಂದರ ತೋಟದಲ್ಲಿ ೧೦ ನಿಮಿಷ ನಡೆದರೆ ಸುಂದರ ಜಲಪಾತದ ದರ್ಶನವಾಗುವುದು. ಸುಮಾರು ೧೨೫ ಆಡಿಯಷ್ಟು ಎತ್ತರದಿಂದ ಒಂದೇ ನೆಗೆತದಲ್ಲಿ ಧುಮುಕುವ ಈ ಜಲಪಾತದಲ್ಲಿ ಬೇಸಗೆಯಲ್ಲೂ ನೀರಿರುವುದು. ಜಲಪಾತವನ್ನು ಸಮೀಪದಿಂದ ನೋಡಬೇಕಿದ್ದಲ್ಲಿ ಹಳ್ಳವನ್ನು ಸಾವಕಾಶವಾಗಿ ಎಚ್ಚರಿಕೆಯಿಂದ ದಾಟಿ ಹೋಗಬೇಕು.

    ಜಲಧಾರೆ ಇರುವ ಜಾಗಕ್ಕೆ ೩ ಕಿಮಿ ದಾರಿ ಕಚ್ಚಾ ರಸ್ತೆಯಾಗಿದ್ದು, ನಡೆದುಕೊಂಡು ಕ್ರಮಿಸುವುದೇ ಲೇಸು. ಸ್ವಲ್ಪವಾದರೂ ಚಾರಣ ಮಾಡಿದಂತಾಗುತ್ತದೆ. ಈ ದಾರಿಯಲ್ಲಿ ಸ್ವಲ್ಪ ದೂರ ಬೈಕ್ ಓಡಿಸಿದ ನಾವು ನಂತರ ಮನೆಯೊಂದರ ಬಳಿ ಬೈಕ್ ಇಟ್ಟು ಅಲ್ಲಿಂದ ಕಾಲ್ನಡಿಗೆಯಲ್ಲಿ ತೆರಳಿದೆವು. ಐದಾರು ಮನೆಗಳು ಒಂದೇ ಕಡೆ ಸುಂದರ ಪರಿಸರದಲ್ಲಿ ಕಾಣಬಂದಾಗ ಜಲಪಾತದ ದಾರಿ ಕೇಳಿದೆವು. ಇಲ್ಲಿ 'ಮರಾಠೆ ಮನೆ' ಎಂಬ ಹೆಸರಿನ ಮನೆಯೊಂದಿದೆ. ಅನುಮತಿ ಪಡೆದು ಇವರ ತೋಟದಲ್ಲಿ ಹತ್ತು ನಿಮಿಷ ನಡೆದು ಸುಂದರ ಆನಡ್ಕ ಜಲಪಾತದ ಬಳಿ ಬಂದೆವು. ಮರಾಠೆಯವರ ತೋಟದಲ್ಲಿ ನಡೆಯುತ್ತಿರುವಾಗ ಮೇಲೆ ಬಹಳ ಎತ್ತರದಲ್ಲಿ ಇದೇ ಹಳ್ಳ ಮತ್ತೆರಡು ಜಲಪಾತಗಳನ್ನು ಸೃಷ್ಟಿಸಿರುವುದು ಕಾಣಬರುವುದು.

    ನೀರಿನ ಹರಿವು ಸಾಧಾರಣ ಮಟ್ಟದಲ್ಲಿದ್ದರಿಂದ ಹಳ್ಳವನ್ನು ದಾಟಿ ಜಲಪಾತದ ಮುಂದೆ ಬಂದು ಒಂದು ತಾಸು ವಿಶ್ರಮಿಸಿ ಪ್ರಕೃತಿಯ ಸೌಂದರ್ಯವನ್ನು ಮನಸಾರೆ ಆಸ್ವಾದಿಸಿದೆವು. ಹೆಚ್ಚು ಕಷ್ಟಪಡದೆ ಸುಂದರ ಜಲಪಾತವೊಂದನ್ನು ಸಂದರ್ಶಿಸಿ ಒಂದಷ್ಟು ಹೊತ್ತನ್ನು ಪ್ರಕೃತಿಯ ಮಡಿಲಲ್ಲಿ ನೀರಿಗೆ ಮೈಯೊಡ್ಡಿ ಕಳೆಯುವ ಇಚ್ಛೆಯಿದ್ದವರಿಗೆ ಈ ಜಲಪಾತ ಹೇಳಿ ಮಾಡಿಸಿದಂತಿದೆ. ಈ ಜಲಪಾತಕ್ಕೆ ಮತ್ತೊಂದು ಹೆಸರು ಕಡಮೆಗುಂಡಿ ಜಲಪಾತ ಎಂದು.


    ಸಮೀಪದಲ್ಲೇ ಇದೆ ಇನ್ನೊಂದು ಜಲಧಾರೆ. ವಿಜಯ ಕರ್ನಾಟಕದಲ್ಲಿ ಈ ಜಲಧಾರೆಯ ಚಿತ್ರ ಬಂದಿತ್ತು. ದೇವಯ್ಯ ಗೌಡರ ಮನೆಯಿಂದ ಅವರ ತೋಟದಲ್ಲಿ ಒಂದೈದು ನಿಮಿಷ ನಡೆದರೆ ಈ ಜಲಧಾರೆ.

    ಶಿವರಾಜಕುಮಾರನ ಯಾವುದೋ ಚಲನಚಿತ್ರದ ಚಿತ್ರೀಕರಣ ಈ ಜಲಧಾರೆಯ ಸಮೀಪ ನಡೆದಿದ್ದರಿಂದ ಅಲ್ಲಿವರೆಗೂ ರಸ್ತೆ ಮಾಡಲಾಗಿತ್ತು. ಈಗ ಆ ರಸ್ತೆಯನ್ನು ಗೌಡರು ಮುಚ್ಚಿದ್ದಾರೆ. ಬದಿಯಿಂದಲೇ ಮೇಲೇರಿ ಜಲಧಾರೆಯ ಮೇಲ್ಭಾಗಕ್ಕೆ ತಲುಪಬಹುದು. ಇದು ೨ ಹಂತಗಳುಳ್ಳ ಸುಮಾರು ೬೫-೭೦ ಅಡಿಯಷ್ಟೆತ್ತರವಿರುವ ಜಲಧಾರೆ. ದೊಡ್ಡ ಗಾತ್ರದ ಮೀನುಗಳು ಈ ಜಲಧಾರೆಯ ಗುಂಡಿಯಲ್ಲಿ ಅರಾಮವಾಗಿ ಈಜಾಡಿಕೊಂಡಿವೆ. ಮನಸಾರೆ ಜಲಕ್ರೀಡೆಯಾಡಬಹುದು ಇಲ್ಲಿ.

    'ಎರ್ಮಾಯಿ' ಎಂಬ ಹೆಸರು ಬರಲು ಒಂದು ಕಾರಣವಿದೆ. ಬಹಳ ಹಿಂದೆ ಒಂದು ಎತ್ತು (ತುಳು ಭಾಷೆಯಲ್ಲಿ 'ಎರು') ಇಲ್ಲಿ ಕಣ್ಮರೆ (ತುಳು ಭಾಷೆಯಲ್ಲಿ 'ಮಾಯಿ') ಆಗಿತ್ತು. ಹಾಗೆ 'ಎರ್ಮಾಯಿ ಎಂಬ ಹೆಸರು. ಏಳುವರೆ ಹಳ್ಳ ಎಂಬ ವಿಚಿತ್ರ ಹೆಸರು ಈ ಹಳ್ಳಕ್ಕೆ. ಕಡ್ತಕುಮೇರು ಶ್ರೇಣಿಯ ಬೆಟ್ಟ ಗುಡ್ಡಗಳಿಂದ ಏಳು ಹಳ್ಳಗಳು ಕೆಳಗೆ ಹರಿದು ಬಂದು ಜತೆಗೂಡಿ, ಅವುಗಳೊಂದಿಗೆ ಒಂದು ಸಣ್ಣ ಹಳ್ಳವೂ ಜತೆಗೂಡಿ ಈ ಹಳ್ಳ ನಿರ್ಮಿತವಾಗಿರುವುದರಿಂದ 'ಏಳುವರೆ ಹಳ್ಳ' ಎಂಬ ಹೆಸರು.

    ಭಾನುವಾರ, ಅಕ್ಟೋಬರ್ 14, 2007

    ಎರಡು ಜಲಧಾರೆಗಳಿಗೆ ಚಾರಣ


    ದೂರದಲ್ಲಿ ಎರಡು ಗುಡ್ಡಗಳು ಸಂಧಿಸುವಲ್ಲಿ ಜಲಧಾರೆಯೊಂದು ಧುಮುಕುವುದನ್ನು ಈ ಸ್ಥಳಕ್ಕೆ ನನ್ನ ಪ್ರಥಮ ಭೇಟಿಯಿಂದಲೇ ನೋಡುತ್ತಿದ್ದೆ. ನನಗೆ ಅದೊಂದು ಅನಾಮಿಕ ಜಲಧಾರೆಯಾಗಿತ್ತು. ಅದರ ಹೆಸರು ಗೊತ್ತಿರಲಿಲ್ಲ, ಎಲ್ಲೂ ಅದರ ಬಗ್ಗೆ ಓದಿರಲಿಲ್ಲ. ೨೦೦೭ ಅಗೋಸ್ಟ್ ತಿಂಗಳ ಉಡುಪಿ ಯೂತ್ ಹಾಸ್ಟೆಲ್ ಮೀಟಿಂಗು ನಡೆದಿತ್ತು. ಮೀಟಿಂಗಿಗೆ ನಾನು ಗೈರುಹಾಜರಾಗಿದ್ದೆ. ಹೊಸ ತಾಣಕ್ಕೆ ಹೋಗುವ ಬಗ್ಗೆ ಫೋನಿನಲ್ಲೇ ಚರ್ಚಿಸಲಾಯಿತು. ಈ ಜಲಧಾರೆಯ ನೆನಪಾಗಿ ಅಲ್ಲಿಗೆ ತೆರಳುವ ಪ್ರಸ್ತಾಪ ಮಾಡಿದೆ. ಹಾಗೇ ಸಮಯವಿದ್ದಲ್ಲಿ ಸಮೀಪವಿರುವ ಇನ್ನೊಂದು ಜಲಧಾರೆಗೂ ಹೋಗಿ ಬರೋಣವೆಂದಾಗ ಎಲ್ಲರೂ 'ಜೈ' ಎಂದುಬಿಟ್ಟರು.

    ನಮ್ಮ ಅಸಾಮಾನ್ಯ ಲೀಡರ್ ಶ್ರೀ ಸೂರ್ಯನಾರಾಯಣ ಅಡಿಗರ ನೇತೃತ್ವದಲ್ಲಿ ೨೦೦೭ ಅಗೋಸ್ಟ್ ೧೮ರ ಶನಿವಾರ ನಾವು ಇಲ್ಲಿ ತಲುಪಿದಾಗ ಸಂಜೆ ೫.೪೫ ಆಗಿತ್ತು. ವಾಹನದಿಂದ ಇಳಿದ ಕೂಡಲೇ ತಮ್ಮ ಶಿಷ್ಯ ರಾಕೇಶ್ 'ಜಿರಾಫೆ' ಹೊಳ್ಳನೊಂದಿಗೆ ಅಡಿಗರು ೨ ಕಿ.ಮಿ ದೂರವಿರುವ ರಾತ್ರಿ ಉಳಿದುಕೊಳ್ಳುವ ಸ್ಥಳದತ್ತ ವೇಗವಾಗಿ ಹೆಜ್ಜೆ ಹಾಕಿದರು. ಉಳಿದವರು ತಲುಪುವಷ್ಟರಲ್ಲಿ ಚಹಾ ಮತ್ತು ತಿಂಡಿ ರೆಡಿಯಾಗಿತ್ತು! ದೇವಸ್ಥಾನದ ಬಳಿ ಇರುವ ಜಲಧಾರೆಯಲ್ಲಿ ಮೀಯಲು ಕೆಲವರು ತೆರಳಿದರೆ, ಅಡಿಗರು ರಾತ್ರಿಯ ಊಟದ ತಯಾರಿ ಮಾಡತೊಡಗಿದರು. ಈ ಅಡಿಗರು ಅಡಿಗೆ ಮಾಡುವುದರಲ್ಲಿ ಎತ್ತಿದ ಕೈ. ಒಬ್ಬರೇ ಪಾದರಸದಂತೆ ಅತ್ತಿತ್ತ ಓಡಾಡುತ್ತ ಅಡಿಗೆ ತಯಾರಿಯಲ್ಲಿ ತೊಡಗಿಕೊಳ್ಳುತ್ತಾರೆ.

    ಸಾಮಾನ್ಯವಾಗಿ ಸರಾಸರಿ ೨೫ ಜನರಿಗೆ ಎರಡು ಊಟ ಮತ್ತು ೨ ಉಪಹಾರಗಳಿಗಾಗುವಷ್ಟು ಅಡಿಗೆಯ ವಸ್ತುಗಳನ್ನು ಹಲವಾರು ಸಣ್ಣ ಸಣ್ಣ ಪೊಟ್ಟಣಗಳಲ್ಲಿ ತಮ್ಮ ಮನೆಯಿಂದಲೇ ಶ್ರೀ ಅಡಿಗರು ಕಟ್ಟಿಕೊಂಡು ಬಂದಿರುತ್ತಾರೆ. ಎರಡು ದಿನಗಳ ಮಟ್ಟಿಗಾದರೂ ಕೆಡದೆ ಇರುವಂತಹ ಅದ್ಭುತ ರುಚಿಯ ಪಲ್ಯವನ್ನು ಮನೆಯಲ್ಲೇ ಮಾಡಿ, ಡಬ್ಬಿಯೊಂದರಲ್ಲಿ ತುಂಬಿಸಿ ತರುತ್ತಾರೆ. ಈ ಪಲ್ಯದ ರುಚಿ ಮಾತ್ರ ಅಹಾಆಆಆಆ! ಎಲ್ಲರೂ ಮತ್ತೆ ಮತ್ತೆ ಬಡಿಸಿ ತಿನ್ನುವುದನ್ನೊಮ್ಮೆ ನೋಡಬೇಕು. ಹೆಚ್ಚಾಗಿ ರಾತ್ರಿಗೆ ಭರ್ಜರಿ ಊಟದ ತಯಾರಿ, ಬೆಳಗ್ಗೆ ಗಂಜಿ ಮತ್ತು ಮಧ್ಯಾಹ್ನಕ್ಕೆ ಚಿತ್ರಾನ್ನ ಅಥವಾ ಪಲಾವ್ ಮಾಡುವುದು ಅಡಿಗಾ ಸ್ಟೈಲ್. ಇದೆಲ್ಲಾ ಈ ಹಿರಿಯರ ನಿಸ್ವಾರ್ಥ ಸೇವೆ. ಊಟ, ತಿಂಡಿ, ಚಹಾ ಇವುಗಳಿಗೆಲ್ಲಾ ಒಂದು ಪೈಸೆಯನ್ನೂ ಅಡಿಗರು ತಗೊಳ್ಳುವುದಿಲ್ಲ. ಎಳಗ್ಗಿನ ಜಾವ ೪ ಗಂಟೆಗೇ ಎದ್ದು ಅಡಿಗರು ಗಂಜಿ ಮತ್ತು ಕಟ್ಟಿಕೊಂಡು ಒಯ್ಯಬೇಕಾಗಿದ್ದ ಅಪರಾಹ್ನದ ಊಟ - ಚಿತ್ರಾನ್ನದ ತಯಾರಿಯನ್ನು ಶುರುಮಾಡಿಯಾಗಿತ್ತು. ಪಾತ್ರೆಯೊಂದರಲ್ಲಿ ಚಿತ್ರಾನ್ನವನ್ನು ಚೆನ್ನಾಗಿ 'ಪ್ಯಾಕ್' ಮಾಡಿ ಆ ಅನಾಮಿಕ ಜಲಧಾರೆಯತ್ತ ಹೊರಟೆವು.

    ಆ ದಾರಿಯಾಗಿ ಸಿಗುವ ಕೊನೆಯ ಮನೆಯ ಬಳಿ ಪೋರನೊಬ್ಬ ಕಾಣಸಿಕ್ಕಿದ. ಅವನಲ್ಲಿ ಆ ಜಲಧಾರೆಯ ಬಗ್ಗೆ ಕೇಳಿದರೆ 'ನಾನು ಈ ಊರಿನವನಲ್ಲ. ನನ್ನ ಮಾಮನನ್ನು ಕೇಳಿ' ಎಂದು ತನ್ನ ಮಾಮನನ್ನು ಕರೆದ. ಸುಂದರ ಯುವಕನೊಬ್ಬ ನನ್ನೆಡೆಗೆ ಬರಲು ಆತನಲ್ಲಿ ಈ ಜಲಧಾರೆಯ ಬಗ್ಗೆ ಕೇಳಿದೆ. ತಾನು ಈಗ ಸಂತೆಗೆ ಹೊರಟಿರುವುದಾಗಿಯೂ, ಆದ್ದರಿಂದ ಮಾರ್ಗದರ್ಶಿಯಾಗಿ ಬರಲಾಗುವುದಿಲ್ಲವೆಂದೂ ತನ್ನ ಅಸಹಾಯಕತೆಯನ್ನು ಹೇಳಿಕೊಂಡ. ಆತನ ಹೆಸರು ಗಣಪತಿ. ಮತ್ತೆ ನಾನು ಪರಿಪರಿಯಾಗಿ ವಿನಂತಿಸಿ, 'ಕಾಡಿನಲ್ಲಿ ಸ್ವಲ್ಪ ದೂರದವರೆಗಾದರೂ ಬಂದು ದಾರಿ ತೋರಿಸಿದರೆ ನಂತರ ನಾವೇ ಹೇಗಾದರೂ ಮಾಡಿ ಜಲಧಾರೆಯನ್ನು ಹುಡುಕಿಕೊಳ್ಳುತ್ತೇವೆ. ದೂರದಿಂದ ನಿಮ್ಮೂರಿನ ಈ ಜಲಧಾರೆಯನ್ನು ನೋಡಲು ಬಂದಿದ್ದೇವೆ' ಎಂದಾಗ, ಗಣಪತಿ ಒಪ್ಪಿಕೊಂಡು, ಕತ್ತಿಯೊಂದನ್ನೆತ್ತಿಕೊಂಡು ಮುನ್ನಡೆದರು. ಅವರೊಂದಿಗೆ ಆ ಪೋರನೂ ಬಂದ. ಈತನ ಹೆಸರು ಸಂತೋಷ.

    ಗಣಪತಿ ಇಲ್ಲಿಗೆ ಬಂದು ನೆಲೆಸಿ ೧೫ ವರ್ಷಗಳಾದವಂತೆ. ಆದರೆ ಈ ಜಲಧಾರೆಯನ್ನು ನೋಡಲು ಈವರೆಗೆ ಯಾರೂ ಬಂದಿಲ್ಲವಂತೆ. ನಾವೇ ಮೊದಲಿಗರಂತೆ. ಈ ಮಾತನ್ನು ನಾನು ನಂಬದಿದ್ದರೂ, ಒಂದು ಕ್ಷಣ ಇದ್ದರೂ ಇರಬಹುದೆಂದು ಯೋಚಿಸಿ ಸಂತೋಷವೆನಿಸಿತು. ಕಾಡಿನಲ್ಲಿ ಅರ್ಧ ಗಂಟೆ ನಮ್ಮೊಂದಿಗೆ ಗಣಪತಿ ದಾರಿ ತೋರಿಸುತ್ತಾ ಮುನ್ನಡೆದರು. ಅವರನ್ನು ಬರುವಂತೆ ಕೇಳಿಕೊಂಡಿದ್ದು ಒಳ್ಳೆಯದೇ ಆಯಿತು. ದಟ್ಟ ಕಾಡಿನಲ್ಲಿ ದಾರಿಯೇ ಇರಲಿಲ್ಲ. ಮರಗಳ ನಡುವೆ ನುಸುಳಿಕೊಂಡು, ಬಂಡೆಗಳನ್ನು ಏರಿ, ಕೊರಕಲನ್ನು ಇಳಿದು ಹತ್ತಿ ಒಂದೆಡೆ ಬಂದಾಗ ಗಣಪತಿ, 'ನಾನಿಲ್ಲಿಂದ ಹಿಂತಿರುಗುತ್ತೇನೆ' ಎಂದಾಗ ನನಗೆ ದಿಗಿಲಾಯಿತು. ಮುಂದೆ ಕಡಿದಾದ ಏರು. ಒಂದೊಂದಕ್ಕೆ ತಾಗಿಕೊಂಡೇ ಇದ್ದ ಮರಗಳು. ದೊಡ್ಡ ಗಾತ್ರದ ಬಳ್ಳಿಗಳು. ಹನಿಹನಿಯಾಗಿ ಎಲೆಗಳ ನಡುವಿನಿಂದ ತನ್ನದೇ ಆದ ಗತ್ತಿನಲ್ಲಿ ಧರೆಗಿಳಿಯುತ್ತಿದ್ದ ಜಿಟಿ ಜಿಟಿ ಮಳೆಯ ನೀರು. ತಮ್ಮಲ್ಲೇ ಅದೇನೋ ಪಿಸುಗುಟ್ಟುತ್ತಿರುವಂತೆ ಕಾಣುತ್ತಿದ್ದ ಮಳೆಯಲ್ಲಿ ಮಿಂದಿದ್ದ ವೃಕ್ಷಗಳು. ನೆಲವನ್ನು ಮರೆಮಾಚಿದ್ದ ಒದ್ದೆಯಾಗಿದ್ದ ಕಪ್ಪು ತರಗೆಲೆಗಳು. ಕತ್ತಲೆಯ ವಾತಾವರಣ ಮತ್ತು ಅದಕ್ಕೆ ತಕ್ಕುದಾಗಿ ಮಳೆಯ ಶಬ್ದ.


    'ಇನ್ನೇನು ದೂರವಿಲ್ಲ. ಹೀಗೆ ಮೇಲಕ್ಕೇರಿ, ಎಡಕ್ಕೆ ಮತ್ತೆ ಮೇಲಕ್ಕೇರಿ, ಬಲಕ್ಕೆ ಸ್ವಲ್ಪ ದೂರ ನಡೆದು ಕೆಳಗಿಳಿದರಾಯಿತು', ಎಂದು ಗಣಪತಿ ಹಿಂತಿರುಗಿದರು. ಸಂತೋಷ ನಮ್ಮೊಂದಿಗೆ ಮುನ್ನಡೆದ. ಆತನೂ ನಮ್ಮಂತೆ ಮೊದಲ ಬಾರಿ ಇಲ್ಲಿಗೆ ಬರುತ್ತಿದ್ದ. ಗಣಪತಿ ಅಂದಂತೆ ಅಲ್ಲಲ್ಲಿ ಮೇಲೇರಿ, ಅಚೀಚೆ ನಡೆಯುತ್ತಾ ಮುನ್ನಡೆದೆವು. ಏರುದಾರಿಯಲ್ಲಿ, ನೆಲವೆಲ್ಲಾ ಒದ್ದೆಯಾಗಿದ್ದರಿಂದ ಜಾರುತ್ತಿತ್ತು. ಜಾರಿ ಬೀಳದವರಿಲ್ಲ ನಮ್ಮಲ್ಲಿ. ಗೊತ್ತಿಲ್ಲದ ಕಾಡಿನ ಹಾದಿಯಲ್ಲಿ ಹಾಗೆ ಮುನ್ನಡೆದೆವು. ಕೆಲವರಂತೂ ಹಲ್ಲಿಗಳಂತೆ ಏರುದಾರಿಯಲ್ಲಿ ಮೇಲಕ್ಕೆ ಬರುತ್ತಿದ್ದರು. ಆಗಾಗ ಜಾರಿ ಕೆಳಗೆ ಹೋಗುತ್ತಿದ್ದರೂ, ಪಟ್ಟು ಬಿಡದೆ ಮತ್ತೆ ಮೇಲೆ ಬರುತ್ತಿದ್ದರು. ಬಟ್ಟೆಯನ್ನೆಲ್ಲಾ ಕಪ್ಪು ಮಣ್ಣು ಮೆತ್ತಿಕೊಂಡಿತ್ತು.

    ಏರುಹಾದಿ ಮುಗಿದ ಬಳಿಕ ಒಂದೆರಡು ನಿಮಿಷ ಸಮತಟ್ಟಾದ ಹಾದಿಯಲ್ಲಿ ನಡೆದ ಬಳಿಕ ಇಳಿಜಾರು. ಇಳಿಜಾರಿನ ಕೊನೆಯಲ್ಲಿ ಕಾಣುತ್ತಿತ್ತು ಜಲಧಾರೆ. 'ಅಬ್ಬಾ. ಅಂತೂ ಸಿಕ್ಕಿತು' ಎಂದುಕೊಂಡೆ. ಇಳಿಜಾರಿನ ಹಾದಿ ಕಷ್ಟಕರವಾಗಿತ್ತು. ಹೆಜ್ಜೆ ತಪ್ಪಿದರೆ ಉರುಳಿ ಬೀಳುವ ಅಪಾಯ. ಮರಗಳೆಡೆಯಿಂದ ಅಸ್ಪಷ್ಟವಾಗಿ ಗೋಚರಿಸುತ್ತಿತ್ತು ಜಲಧಾರೆ. ಕೆಳಗೆ ತಲುಪಿದಾಗ ಉಂಟಾದ ಸಂತೋಷ ವರ್ಣಿಸಲಸಾಧ್ಯ. ಬರೀ ೫೦ ಅಡಿ ಎತ್ತರವಿರುವ ಜಲಧಾರೆಯಾದರೂ ಚಾರಣದ ಹಾದಿ ಅತ್ಯುತ್ತಮವಾಗಿತ್ತು. ಹಾಗೆ ಮುಂದೆ ಈ ಜಲಧಾರೆ ಇನ್ನೆರಡು ಹಂತಗಳನ್ನು ಹೊಂದಿದೆ. ದಟ್ಟವಾದ ಕಾಡಿನ ನಡುವೆ ಸಣ್ಣ ತೆರೆದ ಜಾಗವೊಂದರಲ್ಲಿ ತನ್ನಷ್ಟಕ್ಕೆ, ಯಾರ ಗೋಜಿಗೂ ಹೋಗದೆ, ಯಾರ ಕಣ್ಣಿಗೂ ಬೀಳದೆ, ಲಜ್ಜಾವತಿಯಾಗಿ ಧುಮುಕುತ್ತಿರುವ ಈ ಜಲಧಾರೆಯನ್ನು ಕಣ್ತುಂಬಾ ನೋಡಿ ಆನಂದಿಸಿದೆ.


    ೯೦ ನಿಮಿಷದಲ್ಲಿ ಮರಳಿ ಗಣಪತಿಯವರ ಮನೆ ಬಳಿ ಬಂದಾಗ, ಅವರಿನ್ನೂ ಸಂತೆಗೆ ಹೊರಟಿರಲಿಲ್ಲ. ಈ ಜಲಧಾರೆಗೆ 'ಕಲ್ಲುಶಂಖ' ಜಲಧಾರೆ ಎನ್ನುತ್ತಾರೆಂದೂ, ಜಲಧಾರೆಗಿಂತ ಸ್ವಲ್ಪ ಮೇಲೆ ಸರಳಾ ನದಿಯ ಉಗಮವಾಗುತ್ತದೆಂದೂ ತಿಳಿಸಿದರು. ಕಲ್ಲುಶಂಖ ಎಂಬ ಹೆಸರು ಯಾಕೆ ಬಂತು ಎಂಬುದು ಅವರಿಗೆ ಗೊತ್ತಿರಲಿಲ್ಲ.

    ಗಣಪತಿಯವರು ನಮ್ಮನ್ನು ಕಲ್ಲುಶಂಖ ಜಲಧಾರೆಯೆಡೆಗೆ ಕರೆದೊಯ್ಯುತ್ತಿರುವಾಗ ಜೊತೆಗೆ ಬಂದಿದ್ದ ಸಂತೋಷನೊಂದಿಗೆ ಮಾತಿಗಿಳಿದಾಗ ಆತ ೬ನೇ ತರಗತಿ ಓದುತ್ತಿದ್ದಾನೆಂದೂ, ಊರು ಬಿಳಚಿಗೋಡು ಎಂದೂ, ಇಲ್ಲಿ ತನ್ನ ಮಾಮನ ಮನೆಗೆ ಮುನ್ನಾ ದಿನ ಬಂದಿದ್ದು, ಮರುದಿನ ತನ್ನೂರಿಗೆ ಮರಳಲಿದ್ದಾನೆಂದೂ ತಿಳಿಯಿತು. ಸಂತೋಷನೊಂದಿಗೆ ಹಾಗೆ ಮಾತು ಮುಂದುವರಿಸಿ, 'ಈ ಬಿಳಚಿಗೋಡು ಎಲ್ಲಿ ಬರುತ್ತೆ?' ಎಂದು ಕೇಳಲು, ಆತ 'ಕಟ್ಟಿನಕಾರು ಬಳಿ' ಎಂದಾಗ ನನ್ನ ಕಿವಿಗಳು ನೆಟ್ಟಗಾದವು. ಯಾಕೆಂದರೆ ನಾವು ನೋಡಬೇಕೆಂದಿದ್ದ ಮತ್ತೊಂದು ಜಲಧಾರೆ ಇರುವುದು ಈ ಕಟ್ಟಿನಕಾರು ಬಳಿಯೇ!

    'ಕಟ್ಟಿನಕಾರಿಗೆ ಹೋಗಿದ್ದೀಯಾ' ಎಂದು ಕೇಳಿದಾಗ, 'ದಿನಾಲೂ ಹೋಗ್ತಿರ್ತೀನಿ. ಅಲ್ಲೇ ನಾನು ಶಾಲೆಗೆ ಹೋಗೋದು' ಎಂದುಬಿಟ್ಟ. ನನ್ನ ಮುಂದಿನ ಪ್ರಶ್ನೆಗೆ ಈತ 'ಹೌದು' ಎಂದು ಉತ್ತರ ಕೊಟ್ಟುಬಿಟ್ಟರೆ ಈತನನ್ನೇ ಮಾರ್ಗದರ್ಶಿಯನ್ನಾಗಿ ಮಾಡಿ ಗೂದನಗುಂಡಿಗೆ ಹೋಗುವುದು ಎಂದು ಮನದಲ್ಲೇ ನಿರ್ಧರಿಸಿ ಪ್ರಶ್ನೆ ಕೇಳಿದೆ.
    'ಅಲ್ಲಿರುವ ಜಲಧಾರೆ ಗೊತ್ತಾ?'.
    'ಹೋಓಓಓಓಓಓ.... ಗೊತ್ತು. ಹೋಗಿದ್ದೀನಿ ಕೂಡಾ'.
    'ದಾರಿ ನೆನಪಿದೆಯಾ?'
    'ಹೌದು, ರಸ್ತೆ ಇದೆ . ನಂತರ ನದಿಗುಂಟ ಹೋದ್ರಾತು'.
    'ಹಾಗಿದ್ರೆ ನಂಜೊತೆ ಬಂದ್ಬಿಡು. ಜಲಧಾರೆ ನೋಡಿ ನಂತ್ರ ಬಿಳಚಿಗೋಡ್ನಲ್ಲಿ ನಿನ್ನ ಇಳಿಸ್ತೀವಿ' ಎಂದಾಗ ಹುಡ್ಗ ಸುಮ್ನಾದ. ನಂತರ ನಾನೂ ಸುಮ್ಮನಾದೆ. ನಮಗೆ ಅದಾಗಲೇ ನಂತರದ ಜಲಧಾರೆಗೆ 'ಗೈಡ್' ಸಿಕ್ಕ ವಿಷಯವನ್ನು ಅಡಿಗರಿಗೆ ತಿಳಿಸಿ, 'ಅವನನ್ನು ಅವನ ಮನೆಯವರ ಒಪ್ಪಿಗೆ ಪಡೆದು ಹೊರಡಿಸುವ ಜವಾಬ್ದಾರಿ ನಿಮ್ಮದು' ಎಂದು ಅಡಿಗರಲ್ಲಿ ಹೇಳಿದೆ.

    ಅಡಿಗರು ತಮ್ಮ 'ಮಾಸ್ತರಿಕೆ'ಯ ದಿನಗಳ ಅನುಭವಗಳನ್ನು ಬಳಸಿ ಸಂತೋಷನನ್ನೂ ಅವನ ಮಾಮನನ್ನೂ ಒಪ್ಪಿಸಿ, ಅವನನ್ನು ಕರೆತಂದರು. ಕಟ್ಟಿನಕಾರು ತಲುಪಿದಾಗ ೧೨.೩೦ ಆಗಿತ್ತು. ಅಲ್ಲಿಂದ ಪಡುಬೀಡು ಎಂಬಲ್ಲಿಗೆ ತೆರಳುವ ಹಾದಿಯಲ್ಲಿ ೪ ಕಿಮಿ ಕ್ರಮಿಸಿದ ಬಳಿಕ ವಾಹನ ನಿಲ್ಲಿಸುವಂತೆ ನಮ್ಮ ಯುವ ಗೈಡ್ ಸೂಚಿಸಿದ. ಎಲ್ಲಾ ಕಡೆ ಹಸಿರು ತುಂಬಿ ತುಳುಕುತ್ತಿದ್ದ ದಾರಿಯಲ್ಲಿ ಸಂತೋಷ ನಮ್ಮನ್ನು ಕರೆದೊಯ್ಯತೊಡಗಿದ್ದ. ಆಹ್ಲಾದಕರವಾದ ನಡಿಗೆಯಾಗಿತ್ತು. ಅಲ್ಲಲ್ಲಿ ಪುಟ್ಟ ಪುಟ್ಟ ನೀರಿನ ಝರಿಗಳು ದಾರಿಯ ಬದಿಯಲ್ಲಿ ಬಳುಕುತ್ತಾ ಹರಿಯತೊಡಗಿದ್ದವು. ಕಲ್ಲುಶಂಖದ ದಣಿವಿನ ದಾರಿಯ ನಂತರ ಈ ಹಸಿರಿನ ದಾರಿಯನ್ನು ತುಂಬಾ ಮೆಚ್ಚಿಕೊಂಡೆ. ಸುಮಾರು ಅರ್ಧ ಗಂಟೆಯ ನಡಿಗೆಯ ಬಳಿಕ ಒಂದೆಡೆ ಕುರುಚಲು ಸಸ್ಯಗಳು 'ತಾವು ರಸ್ತೆ ತಡೆ ನಡೆಸಿದ್ದೇವೆ' ಎಂಬಂತೆ ರಸ್ತೆಯನ್ನು ಸುಮಾರು ೫೦ ಮೀಟರುಗಳಷ್ಟು ದೂರದವರೆಗೆ ಸಂಪೂರ್ಣವಾಗಿ ಆವರಿಸಿಕೊಂಡಿದ್ದವು. ಈ ಅಂತರದಲ್ಲಿದ್ದಷ್ಟು ಇಂಬಳಗಳ ಸಾಂದ್ರತೆಯನ್ನು ಬೇರೆಲ್ಲೂ ನಾನು ಕಂಡಿಲ್ಲ. ೫೦ ಮೀಟರ್ ನಡೆದು ಆ ಸಸ್ಯರಾಶಿಯಿಂದ ಹೊರಬರುವಷ್ಟರಲ್ಲಿ ಎಲ್ಲರ ಕಾಲ ಮೇಲೂ ಏಳೆಂಟು ಇಂಬಳಗಳು!


    ನಂತರ ಒಂಥರಾ ಕತ್ತಲ ದಾರಿ. ರಸ್ತೆ ಹಾಗೆ ಅಂಕುಡೊಂಕಾಗಿ ಮುಂದುವರಿದಿತ್ತು. ಕಾಡಿನ 'ಕಪ್ಪು'ತನ ಅದುವರೆಗಿದ್ದ ಹಸಿರನ್ನು ಮರೆಮಾಚಿತ್ತು. ಎಲ್ಲೆಡೆ ವಿಜೃಂಭಿಸುತ್ತಿತ್ತು ಕಪ್ಪು ಬಣ್ಣ. ರಸ್ತೆಯ ಎರಡೂ ಬದಿಗಳಲ್ಲಿದ್ದ ಮರಗಳು, ರಸ್ತೆಯ ಮೇಲೆ ಉದುರಿದ್ದ ತರಗೆಲೆಗಳು, ಅಲ್ಲಲ್ಲಿ ಉರುಳಿಬಿದ್ದಿದ್ದ ಮರದ ಗೆಲ್ಲುಗಳು, ಆಗಸದಲ್ಲಿ ಮೂಡಿದ್ದ ಕರಿಮೋಡಗಳು, ಹೀಗೆ ಎಲ್ಲವೂ ಕಪ್ಪು. ಅಳಿದುಳಿದಿದ್ದ ಅಲ್ಪ ಸ್ವಲ್ಪ ಬೆಳಕನ್ನು ಕೂಡಾ ತಡೆಹಿಡಿದ ದಟ್ಟ ಕಾಡು ಕತ್ತಲ ಅನುಭವವನ್ನು ಮತ್ತಷ್ಟು ಹೆಚ್ಚಿಸಿತ್ತು. ನಿಧಾನವಾಗಿ ಹನಿಹನಿಯಾಗಿ ಬೀಳುತ್ತಿದ್ದ ಮಳೆ ಸೃಷ್ಟಿಸುತ್ತಿದ್ದ ಸದ್ದು ನನ್ನಿಂದ ವಿವರಿಸಲಸಾಧ್ಯ. ಕಾಡಿನ ಸದ್ದಿಗೆ ಈ ಮಳೆಯ ಸದ್ದು ಮತ್ತಷ್ಟು ರಂಗನ್ನು ನೀಡಿತ್ತು. ಈ ಹಾದಿಯನ್ನು ಸಂಪೂರ್ಣವಾಗಿ ಆನಂದಿಸುತ್ತಾ ೧೦ ನಿಮಿಷ ನಡೆದಂತೆ ಎದುರಾಯಿತು ಜಲಧಾರೆಯನ್ನು ನಿರ್ಮಿಸುವ ಹಳ್ಳ.

    ಹಳ್ಳ ಉಕ್ಕಿ ಹರಿಯುತ್ತಿತ್ತು. ಆ ಹರಿವಿನ ವೇಗ ಕಂಡು ನಮ್ಮ ಯುವ ಗೈಡ್ ಸಂತೋಷ ಸ್ವಲ್ಪ ಗಲಿಬಿಲಿಗೊಂಡ. ಆದರೂ ತೋರ್ಗೊಡದೆ ಹಳ್ಳಗುಂಟ ಒಂದೈದು ನಿಮಿಷ ನಮ್ಮನ್ನೆಲ್ಲ ಕರೆದೊಯ್ದ. ಆತ ಇಲ್ಲಿಗೆ ಬಂದದ್ದು ಹಳ್ಳದಲ್ಲಿ ನೀರಿನ ಪ್ರಮಾಣ ಬಹಳ ಕಡಿಮೆಯಿದ್ದಾಗ. ಆದ್ದರಿಂದ ಈಗ ಹಳ್ಳವನ್ನು ದಾಟುವುದೆಲ್ಲಿ ಎಂಬುದು ತಿಳಿಯದೆ ಚಡಪಡಿಸುತ್ತಿದ್ದ. ಕಡೆಗೆ ಒಂದೆಡೆ ೩ ಅಡಿಯಷ್ಟು ಆಳವಿದ್ದಲ್ಲಿ ಸುಮಾರು ೨೦ಅಡಿಯಷ್ಟು ದೂರಕ್ಕೆ ನಿಧಾನವಾಗಿ ದಾಟಿದೆವು. ನಂತರ ಮತ್ತೊಂದು ೩೦ಅಡಿಯಷ್ಟು ದೂರ ಜಾರುವ ಕಲ್ಲುಬಂಡೆಗಳ ರಾಶಿಯನ್ನು ದಾಟುವ ಸನ್ನಿವೇಶ. ಮರವೊಂದು ಅಲ್ಲೇ ಉರುಳಿಬಿದ್ದಿದ್ದರಿಂದ ಮತ್ತಷ್ಟು ಕಷ್ಟವಾಯಿತು.


    ಈಗ ಮತ್ತೆ ಕಾಡಿನ ಅಂಚಿನಲ್ಲಿದ್ದೆವು. ಹಳ್ಳ ತನ್ನ ಹರಿವನ್ನು ಅಂಕುಡೊಂಕಾಗಿ ಮುಂದುವರೆಸಿತ್ತು. ತನ್ನ ಅಧ್ಯಾಪಕರೊಂದಿಗೆ ಮತ್ತು ನಾಲ್ಕೈದು ಸಹಪಾಠಿಗಳೊಂದಿಗೆ ಡಿಸೆಂಬರ್ ತಿಂಗಳಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ಸಂತೋಷ, ಈಗ ದಾರಿ ತೋಚದವನಂತಾಗಿದ್ದ. ಎಲ್ಲರೂ ಆತನನ್ನು 'ಇನ್ನೂ ಎಷ್ಟು ದೂರ' ಎಂದು ಕೇಳುತ್ತಿದ್ದರು. ಅತನಂತೂ ಸಣ್ಣ ಹುಡುಗ. ಇನ್ನು ಎಷ್ಟು ದೂರವಿದೆ, ಎಂದು ಕೇಳಿದರೆ ಏನು ಉತ್ತರ ನೀಡಬಲ್ಲ? ಆತನ ನಿರುತ್ತರದಿಂದ ಸಹನೆ ಕಳಕೊಂಡು 'ಈ ಚಾರಣ ನಮಗೆ ಬೇಡವಾಗಿತ್ತು' ಎಂದು ನಮ್ಮಲ್ಲಿಯ ಹಿರಿತಲೆಗಳು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದರು. ಆದರೂ ಆತ ಸರಿಯಾದ ದಾರಿಯಲ್ಲೇ ಮುನ್ನಡೆಯುತ್ತಿದ್ದಾನೆ ಎಂದು ನನಗನಿಸತೊಡಗಿದ್ದರಿಂದ ಕಣ್ಣ ಸನ್ನೆಯಲ್ಲೇ ಆತನಿಗೆ ಮುಂದುವರಿಯಲು ಸೂಚಿಸಿದೆ.

    ಸಣ್ಣ ಏರುಹಾದಿಯಲ್ಲಿ ಸಂತೋಷ ಮುನ್ನಡೆದ. ಮಳೆಯಂತೂ ತನ್ನ ಹನಿಹನಿ ಪ್ರೋಕ್ಷಣೆ ಮುಂದುವರಿಸಿತ್ತು. ಇಲ್ಲಿ ದಾರೀನೇ ಇರಲಿಲ್ಲ. ಕೇವಲ ದಿಕ್ಕನ್ನು ಗಮನದಲ್ಲಿರಿಸಿ ಸಂತೋಷ ಮುನ್ನಡೆಯುತ್ತಿದ್ದ. ತುಂಬಾ ದಟ್ಟವಾದ ಕಾಡು. ಏರುಹಾದಿಯ ಮೇಲೆ ತಲುಪಿದಾಗ ಸಂತೋಷ ನನ್ನಲ್ಲಿ ಮೆಲ್ಲನೆ ಪಿಸುಗುಟ್ಟಿದ 'ಈಗ ಮತ್ತೊಮ್ಮೆ ನದಿ ದಾಟಬೇಕಾಗಬಹುದು' ಎಂದು. ಅದಾಗಲೇ ಬಹಳ ಕಷ್ಟಪಟ್ಟು 'ಉಸ್ಸಪ್ಪಾ' ಎಂದು ಎಲ್ಲರೂ ನದಿ ದಾಟಿದ್ದರು. ಉಳಿದವರಿಗೆ ಈ ಮಾತನ್ನು ತಿಳಿಸದೆ, ಆತನನ್ನು ಮತ್ತು ರಾಕೇಶ ಹೊಳ್ಳನನ್ನು ದಾರಿ ಹುಡುಕಿಕೊಂಡು ಬನ್ನಿ ಎಂದು ಮುಂದಕ್ಕೆ ಕಳಿಸಿದೆ. ಹತ್ತು ನಿಮಿಷದಲ್ಲಿ ಇಬ್ಬರೂ ಹಿಂತಿರುಗಿದರು. ಆ ದಾರಿಯಿಲ್ಲದ ದಾರಿಯಲ್ಲಿ ೧೫ ನಿಮಿಷ ನಡೆದ ಬಳಿಕ ಮತ್ತೆ ಹಳ್ಳ ಎದುರಾಯಿತು. ಹಳ್ಳ ದಾಟಲು ಪ್ರಶಸ್ತವಾದ ಸ್ಥಳವನ್ನು ಸಂತೋಷ ನೋಡಿಕೊಂಡು ಬಂದಿದ್ದರಿಂದ ಇಲ್ಲಿ ಸುಲಭವಾಯಿತು. ಆದರೂ ನೀರಿನ ಹರಿವಿನಲ್ಲಿ ವೇಗವಿದ್ದಿದ್ದರಿಂದ ಎಚ್ಚರಿಕೆಯಿಂದಲೇ ದಾಟಬೇಕಾಗಿತ್ತು. ಈ ಎರಡನೇ ಬಾರಿಯ ಹಳ್ಳ ದಾಟುವಿಕೆಯನ್ನು ಎಲ್ಲರೂ ಎಂಜಾಯ್ ಮಾಡಿದರು. ಕಡಿಮೆ ಆಳವಿದ್ದ ಸ್ಥಳವಾಗಿದ್ದ ಕಾರಣ ಹಳ್ಳ ಇಲ್ಲಿ ೪ ಕವಲುಗಳಲ್ಲಿ ವಿಶಾಲವಾಗಿ ಹರಿಯುತ್ತಿತ್ತು ಮತ್ತು ಸುಮಾರು ೩೦೦ ಅಡಿಗಳಷ್ಟು ದೂರದವರೆಗೆ ಹಳ್ಳವನ್ನು ದಾಟಬೇಕಾಗಿತ್ತು.


    ಈಗಂತೂ ಸಂತೋಷ ನಗುಮುಖದಿಂದ ಮುನ್ನಡೆಯುತ್ತಿದ್ದರಿಂದ ನಾವು ಜಲಧಾರೆಯ ಸಮೀಪಕ್ಕೆ ಬಂದಿದ್ದೇವೆ ಎಂದು ತಿಳಿದುಕೊಂಡೆ. ಇದನ್ನು ತಿಳಿಯದ ಹಲವರು ಇನ್ನೂ ನಕಾರಾತ್ಮಕವಾಗಿ ಮಾತನಾಡುತ್ತ ಆಯೋಜಕರಾದ ಶ್ರೀ ಅಡಿಗರ ತಲೆ ತಿನ್ನುತ್ತಿದ್ದರು. ಹಳ್ಳವನ್ನು ಎರಡನೇ ಬಾರಿ ದಾಟುವಾಗ, 'ಈಗ ದಾಟಿದ ನಂತರ ಅಲ್ಲಿ ಮೇಲೆ ಹತ್ತಿ ಕೆಳಗಿಳಿದರೆ ಗುಂಡಿ' ಎಂದು ಸಂತೋಷ ನನ್ನಲ್ಲಿ ಹೇಳಿದ್ದರಿಂದ ನಾನು, "ಇನ್ನೊಂದು ೧೫ ನಿಮಿಷ ಹೋಗೋಣ ಸರ್, ಫಾಲ್ಸ್ ಸಿಗದಿದ್ದರೆ ಅಲ್ಲೇ ಸಮೀಪದಲ್ಲೆಲ್ಲಾದರೂ ಕುಳಿತು ವಿಶ್ರಮಿಸಿ ಹಿಂತಿರುಗುವ" ಎಂದು ನನ್ನೆಡೆ 'ಏನು ಮಾಡುವುದೆಂದು ತೋಚದ' ನೋಟ ಬೀರುತ್ತಿದ್ದ ಅಡಿಗರಲ್ಲಿ ಎಲ್ಲರಿಗೆ ಕೇಳಿಸುವಂತೆ ಹೇಳಿದೆ.

    ಜಾರುವ ಏರುಹಾದಿಯಲ್ಲಿ ಮುನ್ನಡೆದೆವು. ಹತ್ತು ನಿಮಿಷದಲ್ಲಿ ಗೂದನಗುಂಡಿಯ ಮೇಲ್ಭಾಗಕ್ಕೆ ಬಂದು ತಲುಪಿದೆವು. ಇಲ್ಲಿ ಮತ್ತೊಮ್ಮೆ ಹಳ್ಳವನ್ನು ದಾಟಬೇಕಾಗಿತ್ತು. ವಿಶಾಲವಾದ ಹರಿವಾಗಿದ್ದರಿಂದ, ಆಳ ಕಡಿಮೆಯಿತ್ತು. ಇಲ್ಲಿ ಹಳ್ಳದ ಹರಿವಿನ ನೋಟ ಬಹಳ ಸುಂದರವಾಗಿದೆ. ಸ್ವಲ್ಪ ಮುಂದೆಯೇ ನೀರು ಕೆಳಗೆ ಧುಮುಕುವ ಶಬ್ದ ಕೇಳುತ್ತಿತ್ತು. ಅಲ್ಲಿ ತಲುಪಿ, ಕೆಳಗೆ ಇಣುಕಿ ನೋಡಿದಾಗ ಅಬ್ಬಾ ಚಾರಣ ಸಾರ್ಥಕ ಎಂಬ ಭಾವ ಮನದಲ್ಲಿ. ನೀರಿನ ಪ್ರಮಾಣ ವಿಪರೀತವಾಗಿದ್ದಿದ್ದರಿಂದ ಕೆಳಗೆ ಇಳಿಯುವ ಸಾಹಸ ಮಾಡಲಿಲ್ಲ. ಜಲಪಾತದ ಮೇಲ್ಭಾಗದಿಂದ ಸಿಗುವ ನೋಟಕ್ಕೇ ತೃಪ್ತಿಪಟ್ಟೆವು. ಮಂಜು ಪೂರ್ತಿಯಾಗಿ ಆವರಿಸಿದ್ದರಿಂದ ಸದ್ಯಕ್ಕೆ ನಮಗೆ ದೂರದ ನೋಟವೇನೂ ಕಾಣಿಸುತ್ತಿರಲಿಲ್ಲ. ಸ್ವಲ್ಪ ಮೋಡ ಕವಿದಿದ್ದರಿಂದ ಮಳೆ ಬಿರುಸಾಗಿ ಬೀಳಬಹುದೆಂದು, ಅಡಿಗರು ವೇಗವಾಗಿ ಊಟದ ತಯಾರಿ ನಡೆಸಿದರು. ಭೀಮೇಶ್ವರದಿಂದ ರಾಕೇಶ್ ಹೊಳ್ಳ ಹೊತ್ತುಕೊಂಡು ತಂದಿದ್ದ ಚಿತ್ರಾನ್ನದ ಪಾತ್ರೆಯಿಂದ ಎಲ್ಲರಿಗೂ ರುಚಿರುಚಿಯಾದ ಊಟವನ್ನು ಅಡಿಗರು ಹಂಚಿದರು.


    ಈಗ ಮಂಜು ಸರಿದು ಶುಭ್ರ ನೋಟ ಲಭ್ಯವಿತ್ತು. ಆಶ್ಚರ್ಯವೊಂದು ನನಗೆ ಕಾದಿತ್ತು. ಜಲಧಾರೆಯ ಮೇಲೆ ನಿಂತಾಗ ದೂರದಲ್ಲಿ ಕಡಲ ತೀರ ಕಾಣಿಸುತ್ತಿತ್ತು. ಈ ದೃಶ್ಯವನ್ನು ಅದೆಲ್ಲೋ ನೋಡಿದ ನೆನಪು ಬರತೊಡಗಿತು. ದೂರದಲ್ಲಿ ಕಾಣುವ ಊರು 'ಶಿರೂರು' ಎಂದು ಸಂತೋಷ ಹೇಳಿದಾಗ ನನ್ನ ಶಂಕೆ ಮತ್ತಷ್ಟು ಬಲವಾಯಿತು. ಸಮುದ್ರ ತೀರ ಕಾಣಿಸುವ ಜಲಧಾರೆ ಕರ್ನಾಟಕದಲ್ಲಿ ಒಂದೇ ಇರುವುದು ಮತ್ತು ಅದಿರುವುದು ಶಿರೂರಿನ ಸಮೀಪದಲ್ಲೇ ಮತ್ತು ಅದಾಗಲೇ ನಾನದನ್ನು ಭೇಟಿ ನೀಡಿಯಾಗಿತ್ತು ಕೂಡಾ! ಹೊಸ ಜಲಧಾರೆಯಿರಬಹುದು ಎಂದು ಇಲ್ಲಿಗೆ ಬಂದು, ನಾಲ್ಕು ವರ್ಷಗಳ ಹಿಂದೆ ತಳಭಾಗದಿಂದ ನೋಡಿದ್ದ ಜಲಧಾರೆಯ ಮೇಲ್ಭಾಗಕ್ಕೆ ಈಗ ಬಂದು ನಿಂತಿದ್ದೇನೋ ಎಂಬ ವಿಚಾರ ತಲೆಯೊಳಗೆ ಕೊರೆಯಲು ಆರಂಭವಾಯಿತು.

    ನೀರು ಇಲ್ಲಿ ಎಂದು ಕರೆಯಲ್ಪಡುವಲ್ಲಿ ಧುಮುಕಿ, ಸುಮಾರು ೧೫೦ ಅಡಿ ನೇರವಾಗಿ ಮುಂದಕ್ಕೆ ಹರಿದು ಮತ್ತೆ ಧುಮುಕುವಂತೆ ತೋರುತ್ತಿತ್ತು. ಸಂತೋಷನಲ್ಲಿ 'ಅಲ್ಲಿ ಮುಂದೆ ನೀರು ಮತ್ತೆ ಕೆಳಗೆ ಬೀಳುತ್ತಾ' ಎಂದು ಕೇಳಿದಾಗ ಆತ 'ಹೌದು, ಬಹಳ ಆಳಕ್ಕೆ ಬೀಳುತ್ತೆ ಮತ್ತೆ ಮುಂದೆ ಇನ್ನೂ ಕೆಳಕೆಳಗೆ ಬೀಳುತ್ತಾ ಹರಿಯುತ್ತೆ' ಎಂದ.


    ಆದರೂ ಕೆಳಗಿಳಿದು ಮುಂದೆ ನೀರು ಆಳಕ್ಕೆ ಧುಮುಕುವಲ್ಲಿ ಕೆಳಗಿನ ನೋಟವನ್ನೊಮ್ಮೆ ನೋಡಿದರೆ ನಿಸ್ಸಂದೇಹವಾಗಿ ಇದೇ ನಾನು ಈ ಮೊದಲೇ ಭೇಟಿ ನೀಡಿರುವ ಜಲಧಾರೆ ಎನ್ನಬಹುದು. ಕೆಳಗಿಳಿಯುವ ಹುಚ್ಚು ಸಾಹಸ ಮಾಡಲಿಲ್ಲ.

    ಈ ಚಾರಣ/ಪ್ರಯಾಣದ ಕಾರ್ಯಕ್ರಮ ಬಹಳ ಸೊಗಸಾಗಿತ್ತು. ಒಂದೇ ದಿನದಲ್ಲಿ ಎರಡು ಚಂದದ ಜಲಧಾರೆಗಳಿಗೆ ಪೈಲಟ್ ಟ್ರೆಕ್ಕಿಂಗ್ ಇಲ್ಲದೆ ಚಾರಣ ಮಾಡಿದ್ದು ವಿಶೇಷ. ಕಲ್ಲುಶಂಖ ಜಲಧಾರೆಗೆ ತೆರಳುವ ಇಳಿಜಾರಿನ ಹಾದಿಯಲ್ಲಿ ಮತ್ತು ಎರಡನೇ ಜಲಧಾರೆಯ ಹಾದಿಯಲ್ಲಿ ಮೊದಲ ಬಾರಿ ಹಳ್ಳ ದಾಟುವಾಗ ರಿಸ್ಕ್ ಇತ್ತು. ಆದರೆ ಏನೂ ಆಗದೇ ಸುರಕ್ಷಿತವಾಗಿ ಎಲ್ಲರೂ ಹಿಂತಿರುಗಿದ್ದು ನನಗೆ ಬಹಳ ಸಮಾಧಾನ ತಂದಿತು. ಸೊಗಸಾದ ನೆನಪುಗಳು.

    ಬುಧವಾರ, ಅಕ್ಟೋಬರ್ 10, 2007

    ನಾಮದ ಜಲಧಾರೆ


    ೨೦೦೩ರ ಜೂನ್ ತಿಂಗಳ ಅದೊಂದು ಆದಿತ್ಯವಾರ ನಾನು, ನನ್ನ ಸಂಬಂಧಿ ಅರುಣಾಚಲ ಹಾಗೂ ಆತನ ಗೆಳೆಯ ಅನಿಲ್ ಕಡ್ಲೆ ವಿಭೂತಿ ಜಲಧಾರೆಯತ್ತ ತೆರಳಿದ್ದೆವು. ಮುನ್ನಾ ದಿನ ಸಂಜೆಯೇ ನಾನು ಕುಮಟಾಗೆ ಬಂದಿದ್ದೆ.

    ಮಾಬಗೆಯಿಂದ ಮಣ್ಣಿನ ರಸ್ತೆಯಲ್ಲಿ ೧ಕಿಮಿ ಚಲಿಸಿದ್ದೇವಷ್ಟೇ, ನಾನು ಚಲಾಯಿಸುತ್ತಿದ್ದ ಅನಿಲನ ಬೈಕು ಆಚೀಚೆ ಓಲಾಡಲು ಶುರುವಾಯಿತು. ಪಂಕ್ಚರ್ ಆಗಿರಬಹುದು ಎಂದು ನಿಲ್ಲಿಸಿದರೆ, ಊಹೆ ಸರಿಯಾಗಿತ್ತು. ಮುಂದಿನ ಚಕ್ರದೊಳಗೆ ದೈತ್ಯಾಕಾರದ ಮುಳ್ಳೊಂದು ನುಗ್ಗಿತ್ತು. ಕೂಡಲೇ ಗಾಲಿಯನ್ನು ಕಳಚಿ, ಅರುಣಾಚಲನ ಬೈಕಿನಲ್ಲಿ ಆತ ಮತ್ತು ಅನಿಲ, ೩ಕಿಮಿ ದೂರವಿರುವ ಚನ್ನಗಾರಕ್ಕೆ ತೆರಳಿದರು. ಆದಿತ್ಯವಾರವಾಗಿದ್ದರಿಂದ ಪಂಕ್ಚರ್ ರಿಪೇರಿ ಮಾಡುವ ಅಂಗಡಿಯವನಿಗೆ ರಜೆ. ಆತನ ಮನೆ ಹುಡುಕಿಕೊಂಡು ಹೋದರೆ, ಆತ ಹಿಲ್ಲೂರಿಗೆ ಮದುವೆಯೊಂದಕ್ಕೆ ತೆರಳಿದ್ದಾನೆಂದು ತಿಳಿದುಬಂತು. ಇವರಿಬ್ಬರು ಪಂಕ್ಚರ್ ಆದ ಗಾಲಿ ಸಮೇತ ಅಲ್ಲಿಂದ ೧೧ಕಿಮಿ ದೂರದ ಹಿಲ್ಲೂರಿಗೆ ದೌಡಾಯಿಸಿದರು. ಅಲ್ಲಿ ಮದುವೆ ಮಂಟಪದೊಳಗೆ ಆ ಗಾಲಿ ಸಮೇತ ನುಗ್ಗಿ, ಆತನನ್ನು ಹುಡುಕಿ ತೆಗೆದರು. ನಂತರ ಆತನಿಗೆ 'ಡಬ್ಬಲ್ ಚಾರ್ಜ್' ಕೊಡುವುದಾಗಿ ಪುಸಲಾಯಿಸಿ, ಆತನನ್ನು ಮರಳಿ ಚನ್ನಗಾರಕ್ಕೆ ಕರೆಸಿ, ಅಂಗಡಿ ತೆರೆಸಿ, ಪಂಕ್ಚರ್ ರೆಪೇರಿ ಮಾಡಿ, ಮರಳಿ ನಾನು ಒಂಟಿ ಗಾಲಿಯ ಬೈಕಿನೊಂದಿಗೆ ಕಾಯುತ್ತಿದ್ದಲ್ಲಿಗೆ ಬಂದು, ರಿಪೇರಿಯಾದ ಗಾಲಿಯನ್ನು 'ಫಿಕ್ಸ್' ಮಾಡುವಷ್ಟರಲ್ಲಿ ೧೧೦ನಿಮಿಷ ಕಳೆದುಹೋಗಿತ್ತು.


    ಮತ್ತೊಂದು ಕಿಮಿ ಚಲಿಸಿದ ಬಳಿಕ ರಸ್ತೆ ಅಂತ್ಯ. ಅಲ್ಲೊಂದು ಮನೆ. ಬಳಿಯಲ್ಲೇ ಹರಿಯುತ್ತಿದ್ದ ಸಣ್ಣ ಪ್ರಮಾಣದ ನೀರು. ಇಲ್ಲಿಂದ ೨೦ ನಿಮಿಷ ನಡೆದ ಬಳಿಕ ಜಲಧಾರೆಯತ್ತ ಬಂದೆವು. ವರ್ಷಪೂರ್ತಿ ನೀರಿರುವ ವಿಭೂತಿ ಜಲಧಾರೆ ಈಗ ಮೈದುಂಬಿ ಭೋರ್ಗರೆಯುತ್ತಿತ್ತು. ಜಲಧಾರೆ ಕಂಡ ಕೂಡಲೇ ಬಟ್ಟೆ ಕಳಚುವ ಅನಿಲ, ಕ್ಷಣಾರ್ಧದಲ್ಲಿ ನೀರಿನಲ್ಲಿದ್ದ. ಅರುಣಾಚಲನಿಗೆ ನೀರಿಗಿಳಿದು ಜಲಕ್ರೀಡೆಯಾಡುವ ಆಸೆ ಆದರೆ ಅಷ್ಟೇ ಹೆದರಿಕೆ, ಯಾವುದಾದರೂ ಜಂತು ಕಚ್ಚಬಹುದೆಂದು!

    ದೇವನಳ್ಳಿ ಸಮೀಪದ ಕಾಡಿನಿಂದ ಮತ್ತು ಮಂಜುಗುಣಿ ಹಿಂಭಾಗದ ಕಾಡಿನಿಂದ ಹರಿದು ಬರುವ ಕೆಲವು ತೊರೆಗಳು ಯಾಣದ ಸಮೀಪ ಜೊತೆಗೂಡಿ ಉಂಟಾಗುವ ಹಳ್ಳ, ವಡ್ಡಿ ಹಳ್ಳಿಯ ಮೂಲಕ ಹರಿದು, ಘಟ್ಟದ ಕೆಳಗೆ ಬರುವಾಗ ಮಾಬಗೆ ಸಮೀಪ ಜಿಗಿದು ವಿಭೂತಿ ಜಲಧಾರೆಯನ್ನು ನಿರ್ಮಿಸುತ್ತದೆ. ಈ ಜಲಧಾರೆಗೆ ಮಾಬಗೆ ಜಲಧಾರೆಯೆಂದೂ ಕರೆಯುತ್ತಾರೆ. ನಂತರ ಈ ಹಳ್ಳವು ಹಾಗೆ ಮುಂದೆ ಚನ್ನಗಾರದ ಮೂಲಕ ಹರಿದು, ಹೊಸಕಂಬಿಯ ಬಳಿ, ಮಾಗೋಡಿನಲ್ಲಿ ಜಲಧಾರೆಯನ್ನು ನಿರ್ಮಿಸಿ ಹರಿದುಬರುವ ಗಂಗಾವಳಿ ನದಿಯನ್ನು ಸೇರುತ್ತದೆ.


    ಒಂದೆರಡು ಚಿತ್ರಗಳನ್ನು ತೆಗೆದು ಅಲ್ಲೇ ಬಂಡೆಯೊಂದರ ಮೇಲೆ ಕುಳಿತೆ. ಅನಿಲ ಉತ್ಸಾಹದಿಂದ ಜಲಕ್ರೀಡೆಯಾಡುತ್ತಿದ್ದರೆ, ಅರುಣಾಚಲ ನೀರಿಗಿಳಿಯಲೋ ಬೇಡವೋ ಎಂಬ ನಿರ್ಧಾರ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದ್ದ. ಕಡೆಗೂ ಆತ ನೀರಿಗಿಳಿಯಲಿಲ್ಲ. ಸುಮಾರು ೧೦೦ ಅಡಿ ಎತ್ತರವಿರುವ ಜಲಧಾರೆ ಸಮೀಪ ತೆರಳುವುದು ಮಳೆಗಾಲದಲ್ಲಿ ಕಷ್ಟ. ಸ್ವಲ್ಪ ದೂರ ನಿಂತೇ ನೋಡಬೇಕಾಗಬಹುದು. ನೀರು ಧುಮುಕುವಲ್ಲಿ ನೀರಿಗಿಳಿಯುವುದು ಅಪಾಯ. ಸ್ವಲ್ಪ ಮುಂದೆ ಗುಂಡಿಯೊಂದಿರುವುದು. ಇಲ್ಲಿ ಮನಸಾರೆ ಮೀಯಬಹುದು. ಜಲಧಾರೆಯ ಸದ್ದು ಮತ್ತು ಕಾಡಿನ ವಿಚಿತ್ರ ಮೌನ ಸದ್ದು. ಇವೆರಡರ ಮಧ್ಯೆ ನಾವು ಮೂವ್ವರು. ಸ್ವಲ್ಪ ಸಮಯ ಕಾಲ ಕಳೆದು ಮರಳಿದೆವು ಆ ಮನೆಯ ಬಳಿ. ಜಲಪಾತದಲ್ಲಿ ಜಳಕ ಮಾಡದ ಅರುಣಾಚಲ, ಇಲ್ಲಿ ಮನೆಯ ಬಳಿ ಹರಿಯುತ್ತಿದ್ದ ಸಣ್ಣ ಪ್ರಮಾಣದ ನೀರಿನಲ್ಲಿ, ಆ ಮನೆಯವರಿಂದ ಬಕೆಟೊಂದನ್ನು ಎರವಲು ಪಡೆದು, ನೀರನ್ನು ಪದೇ ಪದೇ ಆ ಬಕೆಟಿನಲ್ಲಿ ತುಂಬಿಸಿ ಸ್ನಾನ ಮಾಡಿದ! ನಂತರ ಸಮಯವಿದ್ದುದರಿಂದ ಮತ್ತಿಘಟ್ಟ ಮತ್ತು ಮಂಜುಗುಣಿಗೆ ಭೇಟಿ ನೀಡಿ, ರಾಗಿಹೊಸಳ್ಳಿಯ ಮೂಲಕ ಕುಮಟಾ ತಲುಪಿದೆವು.

    ಎಪ್ರಿಲ್ ೨೦೦೬ರ ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮವನ್ನು ಮರ್ಕಾಲ್ ಗುಡ್ಡ ಜಲಧಾರೆಗೆ ಎಂದು ನಿಗದಿಸಲಾಗಿತ್ತು. ಅಂತೆಯೇ ಎಪ್ರಿಲ್ ೨೩ರಂದು ಬೆಳಗ್ಗೆ ೭ ಗಂಟೆಗೆ ಉಡುಪಿ ಬಸ್ಸು ನಿಲ್ದಾಣದ ಸಮೀಪವಿರುವ ಯೂತ್ ಹಾಸ್ಟೆಲ್ ಕಚೇರಿಗೆ ಬಂದರೆ ಮಾಧವ್ ಮಾತ್ರ ಅಲ್ಲಿ ಇದ್ದರು. ಉಳಿದವರದ್ದು ಪತ್ತೆನೇ ಇಲ್ಲ. ಸ್ವಲ್ಪ ಸಮಯದ ಬಳಿಕ ಅನಂತ ಮತ್ತು ಸಂದೀಪ ಬಂದರು. ಗಂಟೆ ೮ ಆದರೂ ಇನ್ನೂ ಆಯೋಜಕರದ್ದು ಸುಳಿವಿಲ್ಲ. ಯೂತ್ ಹಾಸ್ಟೆಲ್ ಪದಾಧಿಕಾರಿಗಳ ಮತ್ತು ಸಂಬಂಧಪಟ್ಟವರ ಮೊಬೈಲ್ ಫೋನ್ ಎಲ್ಲಾ ಸ್ವಿಚ್ ಆಫ್. ನಾವ್ಯಾರೂ ಮರ್ಕಾಲ್ ಗುಡ್ಡಕ್ಕೆ ಹೋದವರಲ್ಲ. ಈ ಮೊದಲು ಹೋಗಿದ್ದ ಯೂತ್ ಹಾಸ್ಟೇಲಿನ ಆರೇಳು ಸದಸ್ಯರಲ್ಲಿ ಒಬ್ಬನಾದರೂ ಬಂದಿದ್ದರೆ ಸಾಕಿತ್ತು. ಆದರೆ ಒಬ್ಬನ ಸುಳಿವೂ ಇಲ್ಲ. ಕನಿಷ್ಟ ಪಕ್ಷ ಒಂದು ಫೋನಾದರೂ ಮಾಡಿ ಕಾರ್ಯಕ್ರಮ ರದ್ದಾಗಿದೆ ಎಂದು ತಿಳಿಸುವ ಸೌಜನ್ಯ/ ಜವಾಬ್ದಾರಿ ಕೂಡಾ ಇರಲಿಲ್ಲ. ಉಡುಪಿ ಯೂತ್ ಹಾಸ್ಟೆಲಿನ ಪ್ರಮುಖ ಸದಸ್ಯರಾಗಿರುವ ಶ್ರೀ ಸೂರ್ಯನಾರಾಯಣ ಅಡಿಗರು ಆ ಸಮಯದಲ್ಲಿ ಅಲ್ಲೆಲ್ಲೋ ಉತ್ತರ ಭಾರತದಲ್ಲಿ ಚಾರಣ ಮಾಡುತ್ತಿದ್ದರು. 'ಅವರಾದರೂ ಇದ್ದಿದ್ದರೆ' ಎಂದು ಮನಸ್ಸು ಪದೇ ಪದೇ ಹೇಳುತ್ತಿತ್ತು. ಇಂತಹ ಸನ್ನಿವೇಶ ಬಂದಾಗ ಅಡಿಗರು ಪರಿಚಯದವರ ತಂಡವೊಂದನ್ನು ಸಿದ್ಧಪಡಿಸಿ ಹೊರಟೇಬಿಡುತ್ತಿದ್ದರು. ಕಡೆಗೆ ಬೇರೆ ದಾರಿ ಕಾಣದೆ ನಾವು ನಾಲ್ಕು ಮಂದಿ ಸಮಾಲೋಚಿಸಿ ವಿಭೂತಿ ಜಲಧಾರೆಗೆ ಹೋಗುವ ನಿರ್ಧಾರ ಮಾಡಿದೆವು.


    ಎರಡು ಬೈಕುಗಳಲ್ಲಿ ೯ಕ್ಕೆ ಉಡುಪಿ ಬಿಟ್ಟ ನಾವು ಮಧ್ಯಾಹ್ನ ೩ ಗಂಟೆಗೆ ಮಾಬಗೆ ತೆಲುಪಿದೆವು. ಮಳೆಗಾಲದಲ್ಲಿ ವಿಶಾಲವಾಗಿ ನಾಲ್ಕೈದು ಕವಲುಗಳಲ್ಲಿ ಧುಮ್ಮಿಕ್ಕುವ ಜಲಧಾರೆ ಈಗ ಒಂದೇ ಕವಲಲ್ಲಿ ಕೆಳಗಿಳಿಯುತ್ತಿತ್ತು. ಈಗಿನ ಅಂದವೇ ಬೇರೆ. ಜಲಧಾರೆಯ ಸನಿಹಕ್ಕೆ ತೆರಳಿದೆವು. ಅಲ್ಲಿ ನೀರಿಗಿಳಿಯಲು ಯಾರಿಗೂ ಧೈರ್ಯ ಸಾಲಲಿಲ್ಲ. ಆ ಗುಂಡಿಯ ತಳ ಕಾಣುತ್ತಿರಲಿಲ್ಲ ಮತ್ತು ಅಲ್ಲಿ ಹಿಡಿದುಕೊಳ್ಳಲು ಯಾವುದೇ ಆಧಾರವಿರಲಿಲ್ಲ. ಮೆಲ್ಲಗೆ ಮೇಲೆ ಏರಿ ಜಲಧಾರೆಯ ನಡುವಿಗೆ ತೆರಳಿ ಅಲ್ಲಿ ಒಂದು ಸಣ್ಣ 'ಪ್ಲ್ಯಾಟ್-ಫಾರ್ಮ್'ನ ಮೇಲೆ ನಿಂತು ಸ್ನಾನ ಮುಗಿಸಿದರು. ಸಂಜೆ ೫ಕ್ಕೆ ಅಲ್ಲಿಂದ ಹೊರಟ ನಾವು, ದಾರಿಯಲ್ಲಿ ಸಿಗುವ ಮಿರ್ಜಾನ ಕೋಟೆಗೆ ಭೇಟಿ ನೀಡಿ ಉಡುಪಿ ತಲುಪಿದಾಗ ಮಧ್ಯರಾತ್ರಿ ೧೨. ಆ ತಿಂಗಳ ಉಡುಪಿ ಯೂತ್ ಹಾಸ್ಟೆಲ್ ಕಾರ್ಯಕ್ರಮ ಅಂತೂ ರದ್ದಾಗಲಿಲ್ಲ!

    ಮಾಹಿತಿ: ರಾಘವೇಂದ್ರ ಬೆಟ್ಟಕೊಪ್ಪ

    ಸೋಮವಾರ, ಅಕ್ಟೋಬರ್ 01, 2007

    ಒಂದು ವರ್ಷ


    ಗೆಳೆಯರೆ,

    ಇಂದಿಗೆ ನಾನು 'ಅಲೆಮಾರಿಯ ಅನುಭವಗಳ'ನ್ನು ತಮಗೆಲ್ಲರಿಗೂ ಹೇಳಿಕೊಳ್ಳಲು ಆರಂಭಿಸಿ ಒಂದು ವರ್ಷವಾಯಿತು. ಈ ಒಂದು ವರ್ಷದಲ್ಲಿ ಚಾರಣ/ಪ್ರಯಾಣದ ಬಗ್ಗೆ ಬರೆದಷ್ಟನ್ನು ಕಳೆದ ೩೪ ವರ್ಷಗಳಲ್ಲಿ ಬರೆದಿರಲಿಲ್ಲ. ಅನೇಕ ಪ್ರಕೃತಿ ಪ್ರಿಯ ಗೆಳೆಯರ ಪರಿಚಯವಾಗಿದೆ. ಇಲ್ಲಿಗೆ ಭೇಟಿ ನೀಡಿ, ಏನೇ ಬರೆದರೂ ಓದಿ, ಚೆನ್ನಾಗಿದ್ದಲ್ಲಿ ಟಿಪ್ಪಣಿ ಬರೆದು ಪ್ರೋತ್ಸಾಹ ನೀಡಿದ್ದೀರಿ. ನನ್ನ ಪ್ರಮುಖ ಉದ್ದೇಶ ಚೆನ್ನಾಗಿ ಬರೆಯುವುದಕ್ಕಿಂತ, ನಮ್ಮ ಕರ್ನಾಟಕದಲ್ಲಿ ನಾನು ಭೇಟಿ ನೀಡಿದ ಸ್ಥಳಗಳ ಬಗ್ಗೆ ಪ್ರಕೃತಿ ಪ್ರಿಯರಿಗೆ ತಿಳಿಸುವುದು. ಆ ನಿಟ್ಟಿನಲ್ಲಿ ಸಾಕಷ್ಟು ಮಟ್ಟಿಗೆ ಸಫಲನಾಗಿದ್ದೇನೆ ಎಂದು ನಾನು ಭಾವಿಸಿದ್ದೇನೆ.

    ಕೆಲವೊಮ್ಮೆ ಹೊಸ 'ಪೋಸ್ಟ್' ಹಾಕುವಲ್ಲಿ ತಡವಾದರೂ ತಾಳ್ಮೆಯಿಂದ ಕಾದಿದ್ದೀರಿ. ಟಿಪ್ಪಣಿ ಬರೆಯಲೂ ಏನೂ ಇಲ್ಲದಿದ್ದರೂ ಬರೆದು ಪ್ರೋತ್ಸಾಹ ನೀಡಿದವರು ಹಲವರು. ತಮ್ಮ ಬ್ಲಾಗಿನಿಂದ ಲಿಂಕ್ ಕೊಟ್ಟು ಸಹಕರಿಸಿದ್ದೀರಿ.

    ಸೆಪ್ಟೆಂಬರ್ ೨೦೦೬ರಲ್ಲಿ ಗೆಳೆಯ ವೇಣು ವಿನೋದ್ ತನ್ನ ಬ್ಲಾಗ್ ಬಗ್ಗೆ ಹೇಳಿದಾಗ, ನಾನೂ ಯಾಕೆ ನನ್ನ ತಿರುಗಾಟದ ಬಗ್ಗೆ ಬರೆಯಬಾರದು ಎಂದೆನಿಸಿತು. ಕೂಸಳ್ಳಿ ಘಟನೆಯ ಬಗ್ಗೆ ಯೋಚಿಸಿದಾಗ 'ಬೇಡ'ವೆಂದೆನಿಸತೊಡಗಿತು. ಸುಮಾರು ಯೋಚಿಸಿ ಕಡೆಗೂ ಬರೆಯೋಣ ಎಂದು ನಿರ್ಧರಿಸಿ 'ಅಲೆಮಾರಿಯ ಅನುಭವಗಳು' ಶುರುಮಾಡಿದೆ. ಒಂದು ವರ್ಷ ಬ್ಲಾಗ್ ಲೋಕದಲ್ಲಿ ಉತ್ತಮ ಪ್ರಯಾಣವಾಗಿದೆ. ಹಿತೈಷಿಗಳ ಪರಿಚಯವಾಗಿದೆ. ವೇಣುಗೆ ಧನ್ಯವಾದಗಳು.

    ಆಗುಂಬೆಯ ಸಂಜೆಯೂ ...... 'ಹ್ಹಿ ಹ್ಹಿ'ಯು ನಿಂದ ಆರಂಭಿಸಿ ಹೀಗೊಂದು ಊರಿನವರೆಗೆ ಪ್ರತಿಯೊಂದನ್ನೂ ಓದಿದವರು ಹಲವರು. ಆಯ್ದು ಓದಿದವರು ಕೆಲವರು. ಎಲ್ಲರ ಪ್ರೋತ್ಸಾಹಕ್ಕೆ ನಾನು ಋಣಿ.

    ಜೂನ್ ೧, ೨೦೦೩ರ ಮಡೆನೂರು ಪ್ರಯಾಣದಿಂದ ಶುರುಮಾಡಿ ಮೊನ್ನೆ ಸೆಪ್ಟೆಂಬರ್ ೮, ೨೦೦೭ರ ನಾಗಝರಿ ಜಲಪಾತಕ್ಕೆ ಚಾರಣದವರೆಗೆ ಭೇಟಿ ನೀಡಿದ ತಾಣಗಳು ಅದೆಷ್ಟೋ. ಇನ್ನೂ ಎಷ್ಟೋ ನೋಡಬೇಕಿದೆ. ಈ ನಾಲ್ಕು ವರ್ಷಗಳು ನಿಸ್ಸಂದೇಹವಾಗಿ ನನ್ನ ಜೀವನದ ಉತ್ತಮ ವರ್ಷಗಳು. ಸತತ ೭ ವಾರ ಪ್ರತಿ ವಾರಾಂತ್ಯದಲ್ಲಿ ಅಲೆದಾಡಿದ್ದಿದೆ. ಸತತ ೪ ವಾರಾಂತ್ಯ ಎಲ್ಲೂ ಹೋಗದೇ ನಿಷ್ಕ್ರಿಯವಾಗಿದ್ದೂ ಇದೆ. ಆದರೆ ಪ್ರಕೃತಿಯೊಂದಿಗೆ ಈ ನಾಲ್ಕು ವರ್ಷಗಳಲ್ಲಿ ನಾನು ಕಳೆದ ಸಮಯವಿದೆಯಲ್ಲಾ, ಅಪರಿಚಿತ ಸ್ಥಳಗಳಿಗೆ ತೆರಳಿದಾಗ ಪರಿಚಯವಾದ ಜನರ ಸ್ನೇಹವಿದೆಯಲ್ಲಾ, ಇವು ಮಾತ್ರ ಅವಿಸ್ಮರಣೀಯ. ಇನ್ನೂ ಹೆಚ್ಚು ಅವಿಸ್ಮರಣೀಯ ಸಮಯವನ್ನು ಪ್ರಕೃತಿಯೊಂದಿಗೆ ಕಳೆಯಲು ಕಾತುರನಾಗಿದ್ದೇನೆ.

    ಕರ್ನಾಟಕ ಕ್ರಿಕೆಟ್ ನನಗೆ ಪ್ರಿಯವಾದ ವಿಷಯವಾಗಿರುವುದರಿಂದ ಆಗಾಗ 'ಚಾರಣ/ಪ್ರಯಾಣ'ದ ಹೊರತಾಗಿ ಕ್ರಿಕೆಟ್ ವಿಷಯದ ಬಗ್ಗೆಯೂ ಬರೆದಿದ್ದೇನೆ. ಬರೆಯುತ್ತೇನೆ ಕೂಡಾ. 'ಅಲೆಮಾರಿಯ ಅನುಭವಗಳು' ಇಲ್ಲಿಗೆ ಚಾರಣದ ಬಗ್ಗೆ ಮಾತ್ರ ಓದಲು ಬರುವವರಿಗೆ ಕ್ರಿಕೆಟ್ ಲೇಖನ ನೋಡಿ ನಿರಾಸೆಯಾಗಬಹುದು. ಕ್ಷಮೆಯಿರಲಿ.

    ಮೇಲೆ ಹಾಕಿದ ಚಿತ್ರ ಶರಾವತಿ ಕಣಿವೆಯದ್ದು. ಜೋಗದಿಂದ ಹೊನ್ನಾವರದೆಡೆ ತೆರಳುವಾಗ ಈ ದೃಶ್ಯ ಸಿಗುವುದು. ೧೯೯೫ರಲ್ಲಿ ಜೋಗಕ್ಕೆ ಮೊದಲ ಬಾರಿಗೆ ಹೋದಾಗ, ಆಗಿನ್ನೂ ಗೇರುಸೊಪ್ಪಾದಲ್ಲಿ ಆಣೆಕಟ್ಟು ನಿರ್ಮಾಣಗೊಂಡಿರಲಿಲ್ಲ. ಆಗ ಇಲ್ಲಿ ಕಾಣುವ ದೃಶ್ಯ ಬೇರೇನೇ ಇತ್ತು. ಅತಿ ಆಳದಲ್ಲಿ, ಎರಡು ಗುಡ್ಡಗಳ ತಳದಲ್ಲಿ ಸಣ್ಣ ಗೆರೆಯಂತೆ ಶರಾವತಿ ಹರಿಯುತ್ತಿದ್ದಳು. ಆಗ ನನ್ನ ಬಳಿ ಕ್ಯಾಮರಾ ಇರಲಿಲ್ಲವಾದ್ದರಿಂದ, ಆ ದೃಶ್ಯದ ನೆನಪು ಮಾತ್ರ ಉಳಿದಿದೆ. ಅಣೆಕಟ್ಟು ನಿರ್ಮಾಣದ ಬಳಿಕ, ಈಗ ಶರಾವತಿ ಎರಡೂ ಗುಡ್ಡಗಳ ಅರ್ಧಕ್ಕಿಂತಲೂ ಮೇಲಕ್ಕೆ ಏರಿ ವಿಶಾಲವಾದ ಜಲಸಾಗರದಂತೆ ನಿಂತಿದ್ದಾಳೆ.

    ಬುಧವಾರ, ಸೆಪ್ಟೆಂಬರ್ 26, 2007

    ಹೀಗೊಂದು ಊರು - ೧


    ಹುಬ್ಬಳ್ಳಿ ಬಸ್ಸು ನಿಲ್ದಾಣದಲ್ಲಿ ಈ ಬಸ್ಸು ನಿಂತಿತ್ತು. ಹೀಗೂ ಒಂದು ಊರಿನ ಹೆಸರಿರಬಹುದೇ ಎಂದು ಅಶ್ಚರ್ಯವಾಯಿತು. ದಾಂಡೇಲಿ ಸಮೀಪ 'ಪ್ರಧಾನಿ' ಎಂಬ ಹೆಸರಿನ ಹಳ್ಳಿಯಿದೆ ಆದರೆ ಊರುಸೂಚಿಯ ಚಿತ್ರ ತೆಗೆಯಲು ಮರೆತೇ ಬಿಟ್ಟೆ.

    ಭಾನುವಾರ, ಸೆಪ್ಟೆಂಬರ್ 02, 2007

    ಜಲಧಾರೆಯೊಂದರ ಮಡಿಲಲ್ಲಿ


    ಅಕ್ಟೋಬರ್ ೨೪, ೨೦೦೪ರಂದು ಜೊತೆಗೆ ಬರಲು ಯಾರೂ ಸಿಗಲಿಲ್ಲವಾದ್ದರಿಂದ ಈ ಜಲಪಾತಕ್ಕೆ ಒಬ್ಬನೇ ಹೊರಟೆ. ಆ ದಿನ ನನ್ನ ಯಮಾಹಾ ಇನ್ನೂ ತನ್ನ ಸರ್ವಿಸ್ ಮುಗಿಸಿ ಬಂದಿರಲಿಲ್ಲವಾದ್ದರಿಂದ, ಪ್ಯಾಶನ್ ಬೈಕಿನಲ್ಲಿ ಮುಂಜಾನೆ ೬.೩೦ಕ್ಕೆ ಸರಿಯಾಗಿ ಮನೆಯಿಂದ ಹೊರಬಿದ್ದೆ. ಮನೆಯಲ್ಲಿ ಯಥಾಪ್ರಕಾರ ಅದೇ ಸುಳ್ಳು - 'ಇಲ್ಲೇ ಬಸ್ ಸ್ಟ್ಯಾಂಡ್ ವರೆಗೆ ಬೈಕು, ನಂತರ ಬಸ್ಸಿನಲ್ಲಿ ತೆರಳಲಿದ್ದೇನೆ' ಎಂದು.

    ನರಬಲಿ ಪಡೆಯುವುದರಲ್ಲಿ ಈ ಜಲಪಾತಕ್ಕೆ ಅಗ್ರಸ್ಥಾನ. ಶಾಂತವಾಗಿ ಹರಿಯುವ ಈ ನದಿ, ಜಲಪಾತದ ಮುಂದೆ ೩ ವಿಶಾಲ ಈಜುಕೊಳದಂತಹ ಗುಂಡಿಗಳನ್ನು ಸೃಷ್ಟಿಸಿದೆ. ಇಲ್ಲಿ ಪ್ರಾಣ ಕಳಕೊಂಡವರ ಲಾಸ್ಟ್ ಕೌಂಟ್ ನಾನು ತೆರಳಿದಾಗ ೧೪ ಇತ್ತು. ನೋಡಲು ಶಾಂತವಾಗಿ ಕಂಡರೂ ನೀರಿನಲ್ಲಿರುವ ಸುಳಿ ಅಪಾಯಕಾರಿಯಾದದ್ದು. ಸುಳಿಗೆ ಸಿಕ್ಕವರನ್ನು ಸೀದಾ ತನ್ನ ಒಡಲಿಗೆ ಕೊಂಡೊಯ್ಯುತ್ತದೆ ನದಿ. ಪ್ರಾಣ ಕಳಕೊಂಡವರಲ್ಲಿ ೪ ಮಂದಿಯ ಶವ ಸಿಗಲಿಲ್ಲ ಎಂದರೆ, ಇಲ್ಲಿ ನೀರಿಗಿಳಿಯುವುದು ಅದೆಷ್ಟು ಅಪಾಯಕಾರಿ ಎಂದು ಮನದಟ್ಟಾಗುವುದು.

    ರಾಗಿಹೊಸಳ್ಳಿ ತಲುಪಿದಾಗ ಸರಿಯಾಗಿ ೧೨.೦೦ ಗಂಟೆ ಆಗಿತ್ತು. ಇಲ್ಲಿರುವುದು ನನ್ನ ಫೇವರಿಟ್ 'ಶಾನಭಾಗ್ ರೆಸ್ಟೋರೆಂಟ್'. ಈ ಹೊಟೇಲಿನಲ್ಲಿ ನನ್ನ ಮೆಚ್ಚಿನ ನಟ (ನೃತ್ಯ ಮಾಡುವುದನ್ನು ಹೊರತುಪಡಿಸಿ) ಶಂಕರ್ ನಾಗ್ ಅವರ ದೊಡ್ಡ ಭಾವಚಿತ್ರವೊಂದನ್ನು ತೂಗುಹಾಕಲಾಗಿದೆ. ಈ ದಾರಿಯಲ್ಲಿ ತೆರಳಿದರೆ ಇದು ನನ್ನ ರೆಗ್ಯುಲರ್ ಮತ್ತು ಕಂಪಲ್ಸರಿ ಸ್ಟಾಪು - ಹಸಿವು ಇರಲಿ ಇಲ್ಲದಿರಲಿ.

    ಜಲಪಾತದ ವೀಕ್ಷಣಾಕಟ್ಟೆ ತಲುಪಿದಾಗ ಮಧ್ಯಾಹ್ನ ೨ ಗಂಟೆ. ಅಲ್ಲಿ ಬೇರಾವುದೇ ವಾಹನಗಳಿರಲಿಲ್ಲವಾದ್ದರಿಂದ ನಾನೊಬ್ಬನೇ ಬಂದಿರಬೇಕೆಂದು ಗ್ರಹಿಸಿ ಕೆಳಗಿಳಿಯಲು ಶುರುಮಾಡಿದೆ. ಐದು ನಿಮಿಷ ಕಾಂಕ್ರೀಟ್ ಮೆಟ್ಟಿಲುಗಳನ್ನು ಇಳಿದ ಬಳಿಕ ಕಾಲುದಾರಿ. ೨೦ ನಿಮಿಷದಲ್ಲಿ ಕಣಿವೆಯ ಕೆಳಗಿದ್ದೆ. ಈ ದಾರಿ ವಿಶಾಲವಾದ ೩ನೇ ಗುಂಡಿಯ ಬಳಿ ಬಂದು ಕೊನೆಗೊಳ್ಳುತ್ತದೆ. ಇಲ್ಲಿ ಸುಳಿಗಳಿವೆ ಎಂದರೆ ಯಾರಿಂದಲೂ ನಂಬಲಿಕ್ಕಾಗದ ಮಾತು. ಹಾಗಿರುವುದರಿಂದಲೇ ನೀರಿಗಿಳಿದು ಪ್ರಾಣ ಕಳಕೊಂಡವರ ಸಂಖ್ಯೆ ಇಲ್ಲಿ ಹೆಚ್ಚು. ಅಲ್ಲಿ ಯಾರೂ ಕಾಣುತ್ತಿರಲಿಲ್ಲ. ಒಬ್ಬನೇ ಇದ್ದಿದ್ದರಿಂದ ಮತ್ತು ವೀಕ್ಷಣಾ ಕಟ್ಟೆಯಲ್ಲಿ ಮೃತಪಟ್ಟವರ ಸಂಖ್ಯೆ ಬರೆದು ಎಚ್ಚರಿಕೆಯ ಬೋರ್ಡ್ ಹಾಕಿದ್ದು ನೆನಪಾಗಿ ಸ್ವಲ್ಪ ಹೆದರಿಕೆ ಶುರುವಾಯಿತು.


    ಜಲಪಾತ ೩ ಹಂತಗಳನ್ನು ಹೊಂದಿದೆ. ಮೊದಲ ಹಂತ ೧೫ಅಡಿಯಷ್ಟು ಎತ್ತರವಿದೆ ಮತ್ತು ಇದಾದ ಕೂಡಲೇ ೧೫೦ಅಡಿಯಷ್ಟು ಎತ್ತರವಿರುವ ದ್ವಿತೀಯ ಹಂತವಿದೆ. ಎರಡನೇ ಹಂತದ ಬಳಿಕ ಮೊದಲ ನೀರಿನ ಗುಂಡಿ ಇದ್ದು, ಇಲ್ಲಿಂದ ನೀರು ಸುಮಾರು ೪೦ ಅಡಿಯಷ್ಟು ಆಳಕ್ಕೆ ೮೦ ಆಡಿಯಷ್ಟು ಅಗಲದ ರೂಪ ತಾಳಿ ಎರಡನೇ ಗುಂಡಿಗೆ ಧುಮುಕುತ್ತದೆ. ಮಳೆಗಾಲದಲ್ಲಿ ಮೊದಲೆರಡು ಹಂತಗಳು ಒಂದೇ ಹಂತದಂತೆ ಕಂಡರೆ, ೩ನೇ ಹಂತ ನೀರಿನ ಅಗಾಧ ಹರಿವಿನಲ್ಲಿ ಮುಳುಗಿ ಮಾಯವಾಗಿರುತ್ತದೆ. ಮಳೆಗಾಲದಲ್ಲಿ ಈ ಜಲಧಾರೆಯ ರೌದ್ರಾವತಾರವನ್ನು ದೂರದಿಂದಲೇ ವೀಕ್ಷಿಸುವುದು ಒಳಿತು.


    ೩ನೇ ಗುಂಡಿಯ ಬಳಿಯಿಂದ ಜಲಪಾತದ ನೋಟ ಲಭ್ಯ. ಆದರೆ ಮುಂದೆ ತೆರಳಿದಂತೆ ಇನ್ನೂ ಸುಂದರ ನೋಟ ಲಭ್ಯವಾಗಬಹುದೆಂದು ಸ್ವಲ್ಪ ಕಾಲ ವಿರಾಮ ಪಡೆದು ಹಾಗೆ ನೀರಗುಂಟ ಕಲ್ಲುಬಂಡೆಗಳನ್ನು ನಿಧಾನವಾಗಿ ದಾಟುತ್ತಾ ಜಲಪಾತದೆಡೆ ಇನ್ನೂ ಸನಿಹಕ್ಕೆ ತೆರಳಿದೆ. ಈಗ ಎರಡನೇ ಗುಂಡಿಯ ಬಳಿ ಬಂದೆ. ಬೀಸುತ್ತಿದ್ದ ಗಾಳಿಗೆ ನೀರ ಅಲೆಗಳು ನಾನು ನಿಂತಲ್ಲಿ ಬಂಡೆಗಳಿಗೆ ಅಪ್ಪಳಿಸುವ ಶಬ್ದ ಹೆದರಿಕೆಯುಂಟುಮಾಡುತ್ತಿತ್ತು. ನಾನು ನೀರಿಗೆ ಸನಿಹದಲ್ಲೇ ನಿಂತಿದ್ದೆ. ಕೂಡಲೇ ಆ ವೀಕ್ಷಣಾಕಟ್ಟೆಯ ಎಚ್ಚರಿಕೆ ಫಲಕದಲ್ಲಿ 'ನೀರಿನಲ್ಲಿ ಮೊಸಳೆಗಳಿವೆ' ಎಂದು ಬರೆದದ್ದು ನೆನಪಾಗಿ, ಆಚೀಚೆ ನೋಡದೆ ದಡಬಡಿಸಿ ನೀರಿನಿಂದ ದೂರ ಮೇಲಕ್ಕೆ ಧಾವಿಸಿದೆ! ನೀರಿಗಿಳಿಯುವುದನ್ನು ತಡೆಯಲು ಹಾಗೆ ಬರೆದಿರಬಹುದು.

    ನಂತರ ಇನ್ನೂ ಮೇಲೆ ಹತ್ತಿ ಮತ್ತಷ್ಟು ಮುಂದಕ್ಕೆ ತೆರಳಿ ಜಲಪಾತವನ್ನು ಇನ್ನೂ ಸನಿಹದಿಂದ ನೋಡಿ ಅದರ ಸಂಪೂರ್ಣ ಚಿತ್ರವನ್ನು ತೆಗೆಯಬಹುದಿತ್ತು. ಈಗ ನಾನು ನಿಂತಲ್ಲಿಂದ ಕಲ್ಲಿನ ಕೋರೆಯೊಂದು ಹೊರಚಾಚಿ ಜಲಪಾತದ ಸ್ವಲ್ಪ ಭಾಗ ಕಾಣುತ್ತಿರಲಿಲ್ಲ. ಆದರೆ ಮತ್ತಷ್ಟು ರಿಸ್ಕ್ ತಗೊಂಡು ಮುಂದಕ್ಕೆ ಹೋಗುವುದು ಬೇಡವೆನ್ನಿಸಿ ಅಲ್ಲಿಂದಲೇ ಹಿಂದಿರುಗಿದೆ. ಆಗ ಒಮ್ಮೆಲೇ ಕೇಕೆ ಹಾಕಿ ಕೂಗಾಡಿದ ಸದ್ದು! ಸದ್ದು ಬಂದಲ್ಲಿ ನೋಡಿದರೆ ಇಬ್ಬರು ಯುವಕರು ಹೊಳೆಯ ಆ ಕಡೆ ಜಲಪಾತದ ೩ನೇ ಹಂತದ ಮೇಲೆ ಮೊದಲ ನೀರಿನ ಗುಂಡಿಯಲ್ಲಿ ನೀರಾಟ ಆಡುತ್ತಿದ್ದರು! ನದಿಯ ಹರಿವು ಇಲ್ಲಿ ವಿಶಾಲವಾಗಿರುವುದರಿಂದ ಅವರಿಬ್ಬರೂ ಬಹಳ ಚಿಕ್ಕದಾಗಿ ಕಾಣುತ್ತಿದ್ದರು. ನಂಬಲಾಗದ ದೃಶ್ಯ. ತಮ್ಮ ಜೀವದ ಬಗ್ಗೆ ಸ್ವಲ್ಪನೂ ಕಾಳಜಿಯಿಲ್ಲದ ಬದ್ಮಾಶ್ ಗಳು. ಅಷ್ಟು ಮಂದಿ ಪ್ರಾಣ ಕಳಕೊಂಡಿದ್ದಾರೆ ಎಂದು ಎಚ್ಚರಿಕೆ ಫಲಕ ಇದ್ದರೂ ಕೂಡಾ ಇವರು ಮಜಾ ಮಾಡುವುದನ್ನು ನೋಡಿ, ಸತ್ತವರ ಸಂಖ್ಯೆ ಇಲ್ಲಿ ಯಾಕೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿದೆ ಎಂದು ತಿಳಿಯಿತು. ಇಲ್ಲೆಲ್ಲೂ ಸಮೀಪದಲ್ಲಿ ನದಿ ದಾಟಿ ಆ ಕಡೆ ತೆರಳುವುದು ಅಸಾಧ್ಯ. ಯಾವ ಕಡೆಯಿಂದ ಇವರು ನದಿಯನ್ನು ದಾಟಿ ಆ ಕಡೆ ತೆರಳಿದರು ಎಂದು ತಿಳಿಯದೆ, ತಿಳಿದುಕೊಳ್ಳುವ ಸಲುವಾಗಿ ಕಣಿವೆಯ ಮೇಲೆ ಹತ್ತುವ ಕಾಲುದಾರಿ ಇದ್ದಲ್ಲಿ ಬಂದು ಕುಳಿತೆ.


    ಅಲ್ಲಿ ಇನ್ನೂ ಇಬ್ಬರಿದ್ದರು! ಈಗ ನಾಲ್ವರೂ ಮರಳಿ ನದಿಯ ಈ ದಂಡೆಗೆ ಬರಲು ಹಳ್ಳಗುಂಟ ಅಲ್ಲಲ್ಲಿ ಈಜುತ್ತಾ ಕೆಳಗಡೆ ಹೊರಟರು. ಆಗಾಗ ನನ್ನಲ್ಲಿ ಕೈ ಬೀಸುತ್ತಿದ್ದರು. ಸೆಳೆತ ಹೆಚ್ಚಿದ್ದರಿಂದ ದಾಟಲು ಆಗದೇ ಬಹಳ ಪರದಾಡುತ್ತಿದ್ದರು. ಕಡೆಗೂ ಕೈ ಕೈ ಹಿಡಿದು, ಒಟ್ಟಿಗೆ ನಿಂತುಕೊಂಡು ಗುದ್ದಾಡಿ, ಒದ್ದಾಡಿ, ಆ ಸಣ್ಣ ತೊಡಕೊಂದನ್ನು ದಾಟಿ ನಂತರ ಸುಲಭವಾಗಿ ಬಂಡೆಗಳನ್ನು ದಾಟಿ ಈ ಕಡೆ ಬಂದರು. 'ನೀವು ಹಾಗ್ಯಾಕೆ ರಿಸ್ಕ್ ತಗೋಳ್ತೀರಾ? ಇಲ್ಲಿ ನೀರಲ್ಲಿಳಿಯುವುದು ಅಪಾಯ ಅಲ್ವಾ' ಎಂದು ನಾನು ಪ್ರಶ್ನಿಸಿದಾಗ, ಅವರಲ್ಲೊಬ್ಬ ' ಈಜಾಕೆ ಬರದವರು ಸಾಯ್ತಾರೆ ಸಾರ್, ನಾವು ಈಜೋದ್ರಲ್ಲಿ ಎಕ್ಸ್ ಪರ್ಟುಗಳು' ಎಂದ. 'ಅದ್ಕೆ ಈಗ ದಾಟಿ ಬರಲು ಇಷ್ಟು ಕಷ್ಟವಾಯ್ತು ಅಂತ ಅನ್ಸುತ್ತೆ' ಹಾಗಂತ ನಾನಂದಾಗ ಅವನಲ್ಲಿ ಉತ್ತರವಿರಲಿಲ್ಲ.

    ಅವರಿಗೆ ವಿದಾಯ ಹೇಳಿ ಕಣಿವೆ ಏರಿ ಮೇಲೆ ವೀಕ್ಷಣಾ ಕಟ್ಟೆ ತಲುಪಿದಾಗ ಗಂಟೆ ೪ ಆಗಿತ್ತು. ಕೆಳಗಿಳಿಯಲು ೨೦ ನಿಮಿಷ ಸಾಕಾದರೆ ಮೇಲೆ ಬರಲು ೪೫ ನಿಮಿಷ ಬೇಕಾದವು. ಆ ನಾಲ್ವರನ್ನು ಪಿಕ್ ಮಾಡಲು ಬಂದಿದ್ದ ಓಮ್ನಿ ಅಲ್ಲಿ ನಿಂತಿತ್ತು. ೪.೧೫ಕ್ಕೆ ಅಲ್ಲಿಂದ ಹೊರಟು ಮತ್ತೆ ರಾಗಿಹೊಸಳ್ಳಿಯ ಶಾನಭಾಗ ರೆಸ್ಟೋರೆಂಟ್ ಗೆ ನುಗ್ಗಿ, ಸಿಕ್ಕಿದ್ದನ್ನು ನುಂಗಿ, ರಾತ್ರಿ ೧೧.೩೦ಕ್ಕೆ ಉಡುಪಿಯಲ್ಲಿದ್ದೆ. ಪ್ರಯಾಣಿಸಿದ ದೂರ - ೪೯೦ ಕಿಮಿಗಳು.

    ಶನಿವಾರ, ಆಗಸ್ಟ್ 18, 2007

    ಕೊಡಗಿನ ಕೆಲವು ಬೆಡಗಿಯರು


    ಅಗೋಸ್ಟ್ ೨೦೦೭ರ ಮಂಗಳೂರು ಯೂತ್ ಹಾಸ್ಟೆಲ್ ಕಾರ್ಯಕ್ರಮ - ಕೊಡಗಿನ ನಾಲ್ಕಾರು ಜಲಧಾರೆಗಳಿಗೆ ಭೇಟಿ. ಇಲ್ಲಿ ಚಾರಣ ಇರಲಿಲ್ಲ. ಬರೀ ಪ್ರಯಾಣ. ೨೩ ಜನರ ತಂಡ ತೋಡಿಕಾನ ತಲುಪಿದಾಗ ಮುಂಜಾನೆ ೧೧ ಗಂಟೆ. ಅಲ್ಲಿಂದ ಅರ್ಧ ಗಂಟೆ ನಡೆದು, ೨ ಹಳ್ಳಗಳನ್ನು ದಾಟಿ ರಮಣೀಯವಾಗಿ ಧುಮುಕ್ಕುತ್ತಿದ್ದ ದೇವರಗುಂಡಿ ಜಲಧಾರೆಯ ಸಮೀಪ ತಲುಪಿದೆವು. ಇದೊಂದು ಸಣ್ಣ ಜಲಧಾರೆ, ೩೫ ಅಡಿ ಎತ್ತರವಿರಬಹುದು.

    ತೋಡಿಕಾನಕ್ಕೆ ಮರಳಿ, ನಮ್ಮನ್ನೆಲ್ಲಾ ಹೊತ್ತು ಮೋಹನನ 'ಶಕ್ತಿ' ಕೊಡಗು ಜಿಲ್ಲೆಯನ್ನು ಪ್ರವೇಶಿಸಿತು. ಮದೆ ಗ್ರಾಮ ಪಂಚಾಯತ್ ವ್ಯಾಪ್ತಿಯನ್ನು ಪ್ರವೇಶಿಸಿದ ಐದಾರು ಕಿಮಿ ಬಳಿಕ ಸಿಗುವ ದೇವರಕೊಲ್ಲಿ ಎಂಬಲ್ಲಿ ರಸ್ತೆ ಬದಿಯಲ್ಲೇ ಸುಮಾರು ೬೦ ಡಿಯಷ್ಟು ಎತ್ತರದಿಂದ ಧುಮುಕುವ ಜಲಧಾರೆಯೊಂದಿದೆ. ಇದಕ್ಕೆ ದೇವರಕೊಲ್ಲಿ ಜಲಧಾರೆ ಅಥವಾ ಅಬ್ಬಿಗೊಳ್ಳಿ ಎಂದೂ ಕರೆಯುತ್ತಾರೆ.

    ಮಡಿಕೇರಿ ತಲುಪಿ ಅಬ್ಬಿ ಜಲಧಾರೆಗೆ ತೆರಳುವ ಪ್ಲ್ಯಾನ್ ಮೊದಲೇ ಇತ್ತು ಮತ್ತು ಎಲ್ಲರಿಗೂ ಅದರ ಬಗ್ಗೆ ತಿಳಿಸಲಾಗಿತ್ತು. ಮಡಿಕೇರಿಗೆ ೩ ಕಿಮಿ ಮೊದಲು ಸಿಗುವ ಬೈಪಾಸ್ ರಸ್ತೆಯಲ್ಲಿ, 'ಕಾರ್ಯಕ್ರಮದ ಆಯೋಜಕರು' ಎನಿಸಿಕೊಂಡವರು ಯಾರಿಗೂ ಮಾಹಿತಿ ನೀಡದೆ ನೇರವಾಗಿ ಮೂರ್ನಾಡು ಮಾರ್ಗವಾಗಿ ವಿರಾಜಪೇಟೆಯತ್ತ ಚಲಿಸುವಂತೆ ಮುಂದೆ ಕೂತು ಮೋಹನನಿಗೆ ಮಾರ್ಗದರ್ಶನ ನೀಡಿದರು. ಹೆಚ್ಚಿನವರು ಅಬ್ಬಿ ಜಲಧಾರೆಯನ್ನು ನೋಡಿರಲಿಲ್ಲ. ಇದನ್ನು ಕಡೆಗಣಿಸಿ, 'ತಾವು ನೋಡಿದ್ದೇವೆ' ಎಂಬ ಮಾತ್ರಕ್ಕೆ ಆಯೋಜಕರು ಕೊನೆಯ ಕ್ಷಣದಲ್ಲಿ ಯಾರಿಗೂ ತಿಳಿಸದೆ ಅಬ್ಬಿ ಭೇಟಿಯನ್ನು ರದ್ದು ಮಾಡಿದ್ದರಿಂದ ಅವರು ಎಲ್ಲರಲ್ಲೂ ಕ್ಷಮೆ ಕೇಳಬೇಕು. ಕೊಡಗಿಗೆ ಭೇಟಿ ನೀಡಿ ಐದಾರು ಜಲಧಾರೆಗಳನ್ನು ನೋಡಿ ಬಂದೆ, ಆದರೆ ಅಬ್ಬಿ ನೋಡಲಿಲ್ಲ ಎಂದರೆ ನಗೆಪಾಟಲಾಗುವ ಪರಿಸ್ಥಿತಿ. ಆಯೋಜಕರು ಇಂತಹ ತಪ್ಪನ್ನು ಇನ್ನೆಂದು ಮಾಡದಿರಲಿ.

    ಅಬ್ಬಿಯಾಲ ಜಲಧಾರೆ ನೋಡುವ ಪ್ಲ್ಯಾನ್ ಕೂಡಾ ಮೊದಲೇ ಇತ್ತು. ಈಗ ನೋಡಿದರೆ ಮೋಹನ 'ಶಕ್ತಿ'ಯನ್ನು ಮೂರ್ನಾಡು ಮಾರ್ಗವಾಗಿ ಓಡಿಸುತ್ತಿದ್ದ! ನಮಗ್ಯಾರಿಗೂ ಈ ಮೂರ್ನಾಡು ಎಲ್ಲಿ, ಅಬ್ಬಿಯಾಲಕ್ಕೆ ದಾರಿ ಎಲ್ಲಿ, ಯಾವ ದಾರಿ ಒಂದೂ ತಿಳಿಯದಾಗಿತ್ತು. ಆದರೆ ತನ್ನ ಮನದನ್ನೆಯನ್ನು ಭೇಟಿ ಮಾಡಲು ಆಗಾಗ ವಿರಾಜಪೇ ಟೆಗೆ ಎಡತಾಕುತ್ತಿದ್ದ ಸುಧೀರ್ ಕುಮಾರ್-ಗೆ ಕೊಡಗಿನ ದಾರಿಗಳು ಚಿರಪರಿಚಿತವಾಗಿದ್ದರಿಂದ ಅವರು ಕೂಡಲೇ ಅಲರ್ಟ್ ಆಗಿ, 'ಎಲ್ಲಿ ಹೋಗುತ್ತಿದ್ದೀರಿ? ಯಾಕೆ ಅಬ್ಬಿ ಇಲ್ಲ? ಈ ದಾರಿಯಲ್ಲಿ ಅಬ್ಬಿಯಾಲ ಕೂಡಾ ಸಿಗುವುದಿಲ್ಲ' ಎಂದು ಆಯೋಜಕರಿಗೆ ತಿವಿದರು. ಅಂತೂ ಕಡೆಗೆ ಮರಳಿ ಮಡಿಕೇರಿಗೆ ಬಂದು ಚೆಟ್ಟಳ್ಳಿ ಮಾರ್ಗವಾಗಿ ತೆರಳಿ ಸುಂದರ ಅಬ್ಬಿಯಾಲ ಜಲಧಾರೆಯನ್ನು ನೋಡಿದೆವು.


    ಸುಮಾರು ೮೦ ಅಡಿ ಎತ್ತರದಿಂದ ೨ ಕವಲುಗಳಲ್ಲಿ ಸುಂದರವಾಗಿ ಧುಮುಕುತ್ತಿದ್ದ ಈ ಜಲಧಾರೆ ನೋಡಿ ಮನಸಾರೆ ಆನಂದಿಸಿದೆವು.

    ಅಸಾಮಾನ್ಯ ಈಜು ಪಟು ಆಗಿದ್ದು, ವರ್ಷಕ್ಕೊಮ್ಮೆ ನಮ್ಮೊಂದಿಗೆ ಚಾರಣಕ್ಕೆ ಬರುವ ಮಹಾಶಯರೊಬ್ಬರು ತಾವು ಆಯೋಜಕರಲ್ಲದೆಯೂ ಆಯೋಜಕರ ಗೆಟಪ್ಪಿನಲ್ಲಿ ವರ್ತಿಸುತ್ತಾ, ಅಬ್ಬಿಯಾಲ ಜಲಧಾರೆಯನ್ನು ನೋಡುತ್ತಾ ನನ್ನಲ್ಲಿ, 'ಇದು ಫಾಲ್ಸ್ ಅಲ್ಲ! ಇದು ತೋಡು'!!!! ಎನ್ನುತ್ತಾ ತಾವು ಮತ್ತಷ್ಟು ಮೂರ್ಖರೆಂದು ಸಾಬೀತುಪಡಿಸಿದರು. ನಮ್ಮ 'ನಿಜವಾದ' ಆಯೋಜಕರು ಸುಮ್ಮನಿದ್ದು, ಇಂತಹ 'ಪೊಳ್ಳು' ಆಯೋಜಕರಿಗೆ ನಿರ್ಧಾರ ತೆಗೆದುಕೊಳ್ಳಲು ಯಾಕೆ ಬಿಡುತ್ತಿದ್ದರು ಎಂಬುದು ತಿಳಿಯಲಿಲ್ಲ. ಆದರೆ ಆ ದಿನ ರಾತ್ರಿ ತಡರಾತ್ರಿ ತನಕ ಮಲಗದೇ ಗಲಾಟೆ ಎಬ್ಬಿಸಿ ಉಳಿದವರಿಗೆ ತೊಂದರೆ ಕೊಡುತ್ತಿದ್ದ ಒಂದಿಬ್ಬರನ್ನು ಗದರಿಸುವ ಕೆಲಸವನ್ನು ಮತ್ತೆ ನಮ್ಮ 'ನಿಜವಾದ' ಆಯೋಜಕರೇ ಮಾಡಬೇಕಾಯಿತು. ಭಾಷಣ ಬಿಗಿಯುವ 'ಪೊಳ್ಳು' ಆಯೋಜಕರು ಅದಾಗಲೇ ನಿದ್ರಾವಶರಾಗಿದ್ದರು!

    ಗೋಣಿಕೊಪ್ಪಲು ತಲುಪಿದಾಗ ಸಂಜೆ ೬ ರ ಸಮಯ! ಅಷ್ಟು ಬೇಗ ಯಾಕೆ ಬಂದೆವು ಎಂದು ಇನ್ನೂ ತಿಳಿಯದಾಗಿದೆ. ೮ ಗಂಟೆಗಷ್ಟು ಹೊತ್ತಿಗೆ ಬಂದರೆ ಸಾಕಿತ್ತು. ಅಬ್ಬಿ ನೋಡಿ ಬರಲು ನಮ್ಮಲ್ಲಿ ಧಾರಾಳ ಸಮಯವಿತ್ತು. ಅಥವಾ, 'ಅಬ್ಬಿ ಫಾಲ್ಸಾ, ಅದು ಫಾಲ್ಸ್ ಅಲ್ಲ. ಅದು ಕೂಡಾ ತೋಡು'!!! ಎಂದು ಆಯೋಜಕರ ನಿಲುವಿದ್ದಿತ್ತೇನೋ.... ಆ ಕಾರಣಕ್ಕಾಗಿ ಅಬ್ಬಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ರದ್ದು ಮಾಡಿದ್ದಿರಬೇಕು!

    ಮರುದಿನ ಮುಂಜಾನೆ ೬ಕ್ಕೇ ಇರ್ಪು ಜಲಧಾರೆಯತ್ತ ತೆರಳಿದೆವು. ಇರ್ಪು ಒಂದು ಸುಂದರ ಹಳ್ಳಿ. ಅದಕ್ಕೆ ಕಲಶವಿಟ್ಟಂತೆ ಸುಂದರ ರಾಮೇಶ್ವರ ದೇವಸ್ಥಾನ. ಒಬ್ಬರಿಗೆ ೧೦ ರೂಪಾಯಿ ತೆತ್ತು ೫ ನಿಮಿಷ ನಡೆದು ರುದ್ರರಮಣೀಯವಾಗಿ ಧುಮುಕುತ್ತಿದ್ದ ಇರ್ಪು ಜಲಧಾರೆಯನ್ನು ನೋಡಿ ಬೆರಗಾದೆವು. ಅಪಾರ ಜಲರಾಶಿ ಇರ್ಪುವಿನ ಉದ್ದವನ್ನೇ ಕಡಿಮೆಗೊಳಿಸಿತ್ತು! ೧೫೦ ಅಡಿಯ ಜಲಧಾರೆ ೯೦ ಅಡಿಯಷ್ಟು ಎತ್ತರವಿದ್ದಂತೆ ಕಾಣುತ್ತಾ ಕಂಗೊಳಿಸುತ್ತಿತ್ತು.

    ನಂತರ ಮರಳಿ ಗೋಣಿಕೊಪ್ಪಲಿಗೆ ಬಂದು ಅಲ್ಲಿ ಕೂರ್ಗ್ ಪಬ್ಲಿಕ್ ಸ್ಕೂಲ್ ಎಂಬ ರೆಸಿಡೆನ್ಶಿಯಲ್ ಶಾಲೆಯೊಂದಕ್ಕೆ ಭೇಟಿ ನೀಡಿದೆವು. ಅಲ್ಲಿನ ಪ್ರಾಂಶುಪಾಲರು ಮತ್ತು ಮ್ಯಾನೇಜರ್ ಉಡುಪಿಯವರೇ ಆಗಿದ್ದರಿಂದ ನಮಗೆಲ್ಲಾ ವಿಪರೀತ ಮರ್ಯಾದೆ. ಒಂದು ರೆಸಿಡೆನ್ಶಿಯಲ್ ಶಾಲೆ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬುದನ್ನು ಸಮೀಪದಿಂದ ಕಂಡೆವು. ಆದರೆ ಸಣ್ಣ ಸಣ್ಣ ಮಕ್ಕಳ ಕಳೆಗುಂದಿದ ಮುದ್ದು ಮುಖಗಳನ್ನು ನೋಡುವಾದ 'ಅಯ್ಯೋ, ಪಾಪ' ಅನ್ನಿಸದೇ ಇರಲಿಲ್ಲ.

    ೩ ಜಲಧಾರೆಗಳುಳ್ಳ ಹಳ್ಳಿಯಾದ ಚೇಲಾವರ ತಲುಪಿದೆವು. ಹೆಚ್ಚಿನವರು ಎಮೆಪಾರೆ ಜಲಧಾರೆ ಮಾತ್ರ ನೋಡಿ ಮರಳುತ್ತಾರೆ. ಅನತಿ ದೂರದಲ್ಲಿ ಕಬ್ಬೆ(ಬಲ್ಲಿಯಟ್ರ) ಜಲಧಾರೆ ಮತ್ತು ಹಾಲುಹೊಳೆ ಜಲಧಾರೆ ಎಂಬ ಇನ್ನೆರಡು ಜಲಧಾರೆಗಳಿರುವುದು ಕೆಲವರಿಗೆ ಮಾತ್ರ ಗೊತ್ತು. ಎಮೆಪಾರೆ ಜಲಧಾರೆಯಲ್ಲಿ ಭರ್ಜರಿ ನೀರಿತ್ತು. ೫೦ ಅಡಿ ಅಗಲವಿದ್ದು ಅಷ್ಟೇ ಎತ್ತರದಿಂದ ಧುಮುಕುವ ಇದರ ದೃಶ್ಯ ರಮಣೀಯ.

    ನಂತರ ನಾನು ಉಳಿದೆರಡು ಜಲಧಾರೆಗಳನ್ನು ಹುಡುಕತೊಡಗಿದೆ. ಕೂರ್ಗ್ ಪಬ್ಲಿಕ್ ಸ್ಕೂಲ್-ನ ಪ್ರಾಂಶುಪಾಲರು, 'ಎಮೆಪಾರೆ ಜಲಧಾರೆ ನೋಡಿ ಹಾಗೆ ಮುಂದೆ ತೆರಳಿದರೆ ಕಬ್ಬೆ ಎಂಬಲ್ಲಿ ಬೆಟ್ಟ ಗುಡ್ಡಗಳ ರಮಣೀಯ ನೋಟ ಸಿಗುತ್ತದೆ' ಎಂದು ತಿಳಿಸಿದ್ದರಿಂದ, ನಮ್ಮ ಕೆಲವು ಹಿರಿತಲೆಗಳು ನಾವು ಬಂದಿದ್ದು 'ಜಲಧಾರೆಗಳನ್ನು ನೋಡಲು' ಎಂಬುದನ್ನು ಮರೆತು ಆ ಕಡೆ ನಡೆದೇಬಿಟ್ಟರು. ನನಗೆ ಉಳಿದೆರಡು ಜಲಧಾರೆಗಳನ್ನು ಹುಡುಕಬೇಕಿತ್ತು. ೧೫ ನಿಮಿಷದಲ್ಲಿ ಹುಡುಕಿಬಿಡುತ್ತಿದ್ದೆ. ಆದರೆ ನಾವು ಬಂದ ಪ್ರಮುಖ ಉದ್ದೇಶವನ್ನು 'ಹಿರಿಯರೆನಿಸಿಕೊಂಡವರೇ' ಮತ್ತು ಈ ಹಿರಿಯರೊಂದಿಗೆ 'ಆಯೋಜಕರೆನಿಸಿಕೊಂಡವರು' ಕೂಡಾ ಮರೆತು ಎಲ್ಲರನ್ನೂ ಬೆಟ್ಟ ನೋಡಲು ಕರೆದೊಯ್ದಿದ್ದು ನನಗೆ ಕಸಿವಿಸಿಯನ್ನುಂಟುಮಾಡಿತು. ನಾನು ಆಯೋಜಕನಲ್ಲದ ಕಾರಣ ಎಲ್ಲವನ್ನೂ ಸಹಿಸಿ ಸುಮ್ಮನಿದ್ದೆ.

    ಬೆಟ್ಟದ ದೃಶ್ಯ ಅದ್ಭುತವಾಗಿತ್ತು ಎನ್ನಿ. ಆದರೆ ಇಲ್ಲಿ ಅನಾವಶ್ಯಕವಾಗಿ ಆ 'ಹಿರಿಯರನ್ನು' ಒಳಗೊಂಡಂತೆ ಒಂದಿಬ್ಬರು ಬೆಟ್ಟದ ತುದಿಯನ್ನು ಏರಲು ಹೋಗಿ ೩೦ ನಿಮಿಷ ವ್ಯರ್ಥಗೊಳಿಸಿದರು ನೋಡಿ ಮೈಯೆಲ್ಲ ಉರಿದುಹೋಯ್ತು. ನಾನೆಲ್ಲಾದರೂ ಆಯೋಜಕನಾಗಿದ್ದರೆ ಅವರನ್ನೆಲ್ಲಾ ಅಲ್ಲೇ ಬಿಟ್ಟು ಚೇಲಾವರಕ್ಕೆ ಹಿಂತಿರುಗಿ ಉಳಿದೆರಡು ಜಲಧಾರೆಗಳನ್ನು ಹುಡುಕುತ್ತಿದ್ದೆ. ನಾಲ್ಕೈದು ಕಿಮಿ ನಡೆದು ಚೇಲಾವರಕ್ಕೆ ಹಿಂತಿರುಗುವುದೇ ಅವರಿಗೆ ತಕ್ಕ ಶಿಕ್ಷೆಯಾಗುತ್ತಿತ್ತು. ತಂಡದೊಂದಿಗೆ ಹೋದಾಗ ನಮ್ಮ ವರ್ತನೆ ಮತ್ತು ವಿಪರೀತ ಉತ್ಸಾಹ ಉಳಿದವರಿಗೆ ತೊಂದರೆ ನೀಡದಂತೆ ನಾವು ಎಚ್ಚರಿಕೆ ವಹಿಸಬೇಕಾಗುತ್ತದೆ. ನಮ್ಮಲ್ಲಿರುವ ಕೆಲವು ಕಿರಿಯರಿಗೆ ಈ ವಿಷಯಗಳನ್ನು ಮನದಟ್ಟು ಮಾಡಬೇಕಾಗಿರುವ ಹಿರಿಯರೇ (ಯಾವಾಗಲೂ ಸಮಚಿತ್ತರಾಗಿರುವ) ಅಂದು ಮಾತ್ರ ಈ ರೀತಿ ಎಡಬಿಡಂಗಿಗಳಂತೆ ಬೇಜವಾಬ್ದಾರಿಯಿಂದ ವರ್ತಿಸಬಾರದಿತ್ತು.

    ಕಡೆಗೆ ಎಲ್ಲೂ ನಿಲ್ಲದೇ ಮೂರ್ನಾಡು ಮಾರ್ಗವಾಗಿ ಮಡಿಕೇರಿಗೆ ತಲುಪಿ ೯.೩೦ಕ್ಕೆ ಮಂಗಳೂರಿನಲ್ಲಿದ್ದೆವು. ಕಾರ್ಯಕ್ರಮ ಉತ್ತಮವಾಗಿತ್ತು. ಇಲ್ಲಿ ಆಯೋಜಕರನ್ನು ಸಾಕಷ್ಟು ತರಾಟೆಗೆ ತೆಗೆದುಕೊಂಡಿದ್ದೇನೆ. ಆದರೆ ಒಂದು ವಿಷಯದಲ್ಲಿ ಮಾತ್ರ ಅವರನ್ನು ಮೆಚ್ಚಬೇಕು. ರಾತ್ರಿ ತಂಗಲು ಉತ್ತಮ ವ್ಯವಸ್ಥೆ ಮಾಡಲಾಗಿತ್ತು. ಆದರೆ ಕೊಡಗಿಗೆ ತೆರಳಿ ಅಬ್ಬಿ ನೋಡಲಿಲ್ಲ ಎಂದು ಕೆಲವು ಯುವ ಮನಗಳಲ್ಲಿ ಮನೆ ಮಾಡಿದ್ದ ನಿರಾಸೆಯನ್ನು ಹೋಗಲಾಡಿಸಬಹುದಿತ್ತು.